ಶ್ರೀ ಗುರುಗಳ ಅವತಾರಿ ಕಾರ್ಯದಲ್ಲಿ ಉತ್ತಮ ‘ಸಮಷ್ಟಿ ಶಿಷ್ಯ’ರಾಗಿ ಸಹಭಾಗಿಯಾಗಿ ! – ಗುರುಪೂರ್ಣಿಮೆಯ ನಿಮಿತ್ತ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರಿಂದ ಸಾಧಕರಿಗೆ ಸಂದೇಶ

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

‘೮೪ ಲಕ್ಷ ಜೀವಯೋನಿಗಳಲ್ಲಿ ಮೋಕ್ಷಪ್ರಾಪ್ತಿಯನ್ನು ಮಾಡಿ ಕೊಡುವ ಮನುಷ್ಯಜನ್ಮವು ದುರ್ಲಭವಾಗಿದೆ, ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಇಂತಹ ದುರ್ಲಭ ಮನುಷ್ಯಜನ್ಮವು ಇಂದು ಪೃಥ್ವಿಯ ಮೇಲೆ ೭೦೦ ಕೋಟಿ ಜನರಿಗೆ ಪ್ರಾಪ್ತವಾಗಿದೆ; ಆದರೆ ನಿಜವಾಗಿ ಎಷ್ಟು ಜನರು ಮೋಕ್ಷದ ಮಾರ್ಗದಲ್ಲಿದ್ದಾರೆ ?

ಮೋಕ್ಷಗುರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮಾರ್ಗದರ್ಶನದಿಂದ ಇಂದು ಪೃಥ್ವಿಯ ಮೇಲೆ ಆಧ್ಯಾತ್ಮಿಕ ಉನ್ನತಿಯ ಮಾರ್ಗವು ಸುಲಭವಾಗಿದೆ. ‘ಗುರುಗಳ ಮಾರ್ಗದರ್ಶನ ದಲ್ಲಿ ಸಾಧನೆಯನ್ನು ಮಾಡಿ ಮೋಕ್ಷಪ್ರಾಪ್ತಿ ಮಾಡಿಕೊಂಡಾಗಲೇ ಗುರುಋಣವು ತೀರುತ್ತದೆ, ಇಲ್ಲದಿದ್ದರೆ ಅದನ್ನು ತೀರಿಸಲು ಬರುವುದಿಲ್ಲ, ಎಂದು ಗುರುಗೀತೆಯಲ್ಲಿ ಹೇಳಲಾಗಿದೆ; ಆದ್ದರಿಂದಲೇ ಆಧ್ಯಾತ್ಮಿಕ ಉನ್ನತಿಗಾಗಿ ಶ್ರೀ ಗುರುಗಳ ಅವತಾರಿ ಕಾರ್ಯದಲ್ಲಿ ಉತ್ತಮ ‘ಸಮಷ್ಟಿ ಶಿಷ್ಯರಾಗಿ ಪಾಲ್ಗೊಳ್ಳಿರಿ ಮತ್ತು ಶೀಘ್ರ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಕೊಳ್ಳಿರಿ !
– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲಿ ಒಬ್ಬರು, ಸನಾತನ ಸಂಸ್ಥೆ (೧೭.೪.೨೦೨೩)