‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ 725 ಹಿಂದುತ್ವನಿಷ್ಠರಿಂದ ಉತ್ಸಾಹದಿಂದ ಸಹಭಾಗ !

1 ಸಾವಿರ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ; ಹಾಗೂ ‘ಲವ್ ಜಿಹಾದ್’ ವಿರುದ್ಧವರ್ಷವಿಡೀ ಅಭಿಯಾನ ನಡೆಯಲಿದೆ ! – ಸದ್ಗುರು (ಡಾ.) ಚಾರುದತ್ತ ಪಿಂಗಳೆ

ಛಾಯಾಚಿತ್ರ ಸಾಲು : ಎಡದಿಂದ ಶ್ರೀ. ರಮೇಶ ಶಿಂದೆ, ಸದ್ಗುರು (ಡಾ.) ಚಾರುದತ್ತ ಪಿಂಗಳೆ, ಪೂ. ಚಿತ್ತರಂಜನ ಸ್ವಾಮಿ ಮಹಾರಾಜರು, ಶ್ರೀ. ನೀರಜ ಅತ್ರಿ ಮತ್ತು ಶ್ರೀ. ಜಯೇಶ ಥಳಿ

ಮಹಾರಾಷ್ಟ್ರ ಮಂದಿರ ಮಹಾಸಂಘದ ವತಿಯಿಂದ ಮಹಾರಾಷ್ಟ್ರದಲ್ಲಿ 131 ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಜಾರಿಯಾದ ಬಳಿಕ ಕರ್ನಾಟಕ, ಛತ್ತೀಸಗಡ, ದೆಹಲಿ, ಉತ್ತರ ಪ್ರದೇಶ ಮುಂತಾದ ಹಲವು ರಾಜ್ಯಗಳಲ್ಲಿಯೂ ‘ಮಂದಿರ ಮಹಾಸಂಘ’ ಸ್ಥಾಪಿಸಲು ಬೇಡಿಕೆ ಬರುತ್ತಿದೆ. ಅದರಂತೆ ಆಯಾ ರಾಜ್ಯಗಳಲ್ಲಿ ಮಹಾಸಂಘಗಳನ್ನು ಸ್ಥಾಪಿಸಲಾಗುವುದು. ಅದೇ ರೀತಿ ಆ ಮೂಲಕ 1000 ಕ್ಕೂ ಹೆಚ್ಚು ದೇವಾಲಯಗಳಲ್ಲಿ ವಸ್ತ್ರಸಂಹಿತೆಯನ್ನು ಜಾರಿಗೊಳಿಸುವ ಗುರಿಯನ್ನು ಹೊಂದಿದೆ. ಜೊತೆಗೆ ‘ದಿ ಕೇರಳ ಸ್ಟೋರಿ’ ಚಲನಚಿತ್ರದ ನಂತರ ದೇಶಾದ್ಯಂತ ಲವ್ ಜಿಹಾದ್ ನ ಭೀಕರತೆಯನ್ನು ತೋರಿಸುವ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇಂತಹ ಸಮಯದಲ್ಲಿ ಹಿಂದೂ ಹೆಣ್ಣುಮಕ್ಕಳು ಹಾಗೂ ಅವರ ಪೋಷಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕಾದ ಅಗತ್ಯ ಇರುವುದರಿಂದ ಲವ್ ಜಿಹಾದ್ ವಿರುದ್ಧ ವರ್ಷವಿಡೀ ಅಭಿಯಾನ ನಡೆಸಲಾಗುವುದು. ಅಲ್ಲದೆ ಹಿಂದೂ ರಾಷ್ಟ್ರ ಸ್ಥಾಪನೆಯ ಉದ್ದೇಶದಿಂದ ಹಿಂದೂಹಿತಾಸಕ್ತಿಯ ಉಪಕ್ರಮಗಳನ್ನು ಚುರುಕುಗೊಳಿಸಲು ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹಿಂದೂ ಸಂಘಟನೆಗಳನ್ನು ಒಗ್ಗೂಡಿಸಿ ದೇಶಾದ್ಯಂತ ‘ಹಿಂದೂ ರಾಷ್ಟ್ರ ಸಮನ್ವಯ ಸಮಿತಿ’ಗಳನ್ನು ಸ್ಥಾಪಿಸಲಾಗುವುದು ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆ ಇವರು ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದ ಸಮಾರೋಪ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಗೋವಾದ ಫೋಂಡಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಈ ಸಮಯದಲ್ಲಿ ತ್ರಿಪುರಾದ ‘ಶಾಂತಿ ಕಾಳಿ ಆಶ್ರಮ’ದ ಪೂ. ಚಿತ್ತರಂಜನ್ ಸ್ವಾಮಿ ಮಹಾರಾಜರು, ‘ಗೋಮಾಂತಕ ಮಂದಿರ ಮಹಾಸಂಘ’ದ ಕಾರ್ಯದರ್ಶಿ ಶ್ರೀ. ಜಯೇಶ ಥಳಿ, ‘ಹಿಂದೂ ಜನಜಾಗೃತಿ ಸಮಿತಿ’ಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆ ಮತ್ತು ಹರಿಯಾಣದ ‘ವಿವೇಕಾನಂದ ಕಾರ್ಯ ಸಮಿತಿ’ಯ ಅಧ್ಯಕ್ಷ ಶ್ರೀ. ನೀರಜ ಅತ್ರಿ ಇವರು ಉಪಸ್ಥಿತರಿದ್ದರು.

ಸದ್ಗುರು (ಡಾ.) ಚಾರುದತ್ತ ಪಿಂಗಳೆ

ಸದ್ಗುರು (ಡಾ.) ಚಾರುದತ್ತ ಪಿಂಗಳೆ ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ‘ಜೋ ಹಿಂದೂ ಹಿತ್ ಕಿ ಕೇವಲ ಬಾತ್ ನಹೀ, ತೋ ಜೋ ಹಿಂದೂ ಹಿತ್ ಕಾ ಕಾರ್ಯೇ ಕೆರೆಗಾ’ ಈ ನೀತಿಯ ಪ್ರಕಾರ, ಹಿಂದೂ ರಾಷ್ಟ್ರ ಮತ್ತು ಹಿಂದೂಹಿತದ ವಿಷಯಗಳ ಮೇಲೆ ಕಾರ್ಯ ಮಾಡುವ ವಚನ ನೀಡುವ ರಾಜಕೀಯ ಪಕ್ಷಗಳು ಮತ್ತು ಪ್ರಾಮಾಣಿಕ ಜನಪ್ರತಿನಿಧಿಗಳಿಗೆ ಮಾತ್ರ 2024 ರ ಲೋಕಸಭಾ ಚುನಾವಣೆಯಲ್ಲಿ ಹಿಂದುಗಳ ಬೆಂಬಲ ಸಿಗಲಿದೆ, ಎಂದು ಎಲ್ಲರು ನಿರ್ಧಾರವನ್ನು ಕೈಗೊಂಡರು. ಈ ಅಧಿವೇಶನದಲ್ಲಿ ನೇಪಾಳ ಮತ್ತು ಭಾರತ ಸೇರಿದಂತೆ 22 ರಾಜ್ಯಗಳಿಂದ 350 ಕ್ಕೂ ಹೆಚ್ಚು ಸಂಘಟನೆಗಳ 725 ಕ್ಕೂ ಹೆಚ್ಚು ಪ್ರತಿನಿಧಿಗಳು ಉಪಸ್ಥಿತರಿದ್ದರು, ಎಂದರು.

ಶ್ರೀ.ರಮೇಶ ಶಿಂದೆ, ‘ಹಿಂದೂ ಜನಜಾಗೃತಿ ಸಮಿತಿ’ಯ ರಾಷ್ಟ್ರೀಯ ವಕ್ತಾರ

‘ಹಿಂದೂ ಜನಜಾಗೃತಿ ಸಮಿತಿ’ಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆ ಅವರು ಮಾತನಾಡುತ್ತಾ, ಈ ಅಧಿವೇಶನದಲ್ಲಿ ಭಾರತ ಮತ್ತು ನೇಪಾಳವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವುದು; ಲವ್ ಜಿಹಾದ್, ಮತಾಂತರ ಮತ್ತು ಗೋಹತ್ಯೆ ವಿರುದ್ಧ ಕಠಿಣ ಕಾನೂನುಗಳನ್ನು ಜಾರಿಗೊಳಿಸುವುದು; ಹಲಾಲ್ ಸರ್ಟಿಫಿಕೇಶನ್‌ ಮೇಲೆ ನಿಷೇಧ ಹೇರುವುದು; ದೇವಾಲಯಗಳ ಸರಕಾರಿಕರಣ ರದ್ದು ಪಡಿಸುವುದು; ‘ಪ್ಲೆಸಸ್ ಆಫ್ ವರ್ಶಿಪ್ ಆಕ್ಟ್’ ಮತ್ತು ‘ವಕ್ಫ್’ ಕಾಯಿದೆಗಳನ್ನು ರದ್ದುಗೊಳಿಸಿ; ಜನಸಂಖ್ಯೆ ನಿಯಂತ್ರಣ ಕಾನೂನನ್ನು ಜಾರಿಗೊಳಿಸುವುದು; ಕಾಶ್ಮೀರಿ ಹಿಂದೂಗಳ ಪುನರ್ವಸತಿ ಇತ್ಯಾದಿ ನಿರ್ಣಯಗಳ ಬಗ್ಗೆ ‘ಹರ್ ಹರ್ ಮಹಾದೇವ್’ನ ಘೋಷಣೆ ಮೂಲಕ ಸರ್ವಾನುಮತದಿಂದ ಅಂಗೀಕರಿಸಲಾಗಿದೆ.

ಇದರ ಜೊತೆಗೆ ಹಿಂದು ರಾಷ್ಟ್ರ ಸ್ಥಾಪನೆಯ ಬಗ್ಗೆ ಸಮಾಜದಲ್ಲಿ ಜಾಗೃತಿ ನಿರ್ಮಾಣ ಮಾಡಲು ಸಮನಸೂತ್ರ ಕಾರ್ಯಕ್ರಮದಡಿ ‘ಲವ್ ಜಿಹಾದ್’ ಮತ್ತು ‘ಹಲಾಲ್ ಜಿಹಾದ್’ನ ಕುರಿತು ಜನಜಾಗೃತಿ ಸಭೆ ಹಾಗೂ ಆಂದೋಲನಗಳು’, ‘ಹಿಂದೂ ರಾಷ್ಟ್ರ ಸಮನ್ವಯ ಸಮಿತಿ’, ‘ಹಿಂದೂ ರಾಷ್ಟ್ರ ಅಧೀವೇಶನ’, ‘ದೇವಾಲಯಗಳಲ್ಲಿ ಪ್ರಬೋಧನಾ ಸಭೆಗಳು’, ‘ರಾಜ್ಯ ಮಟ್ಟದ ದೇವಸ್ಥಾನ ಪರಿಷತ್ತಿನ ಆಯೋಜನೆ ಮಾಡುವುದು’, ಇತ್ಯಾದಿ ವಿವಿಧ ಚಟುವಟಿಕೆಗಳನ್ನು ವರ್ಷವಿಡೀ ನಡೆಸಲು ಅಧಿವೇಶನದಲ್ಲಿ ನಿರ್ಧರಿಸಲಾಗಿದೆ.

ಈ ಸಮಯದಲ್ಲಿ ‘ಗೋಮಾಂತಕ ಮಂದಿರ ಮಹಾಸಂಘ’ದ ಕಾರ್ಯದರ್ಶಿ ಶ್ರೀ. ಜಯೇಶ ಥಳಿ ಇವರು ಮಾತನಾಡುತ್ತಾ, ಈ ಅಧಿವೇಶನದಲ್ಲಿ ದೇಶಾದ್ಯಂತ ದೇವಸ್ಥಾನದ ಧರ್ಮದರ್ಶಿಗಳು ಭಾಗವಹಿಸಿದ್ದರು. ಅದರಲ್ಲಿ ‘ದೇವಾಲಯಗಳನ್ನು ಸರಕಾರೀಕರಣ ಮತ್ತು ಅತಿಕ್ರಮಣದಿಂದ ಮುಕ್ತಗೊಳಿಸುವುದು’ ಎಂಬ ಪ್ರಮುಖ ಬೇಡಿಕೆಯೊಂದಿಗೆ ದೇಶಾದ್ಯಂತ ‘ದೇವಸ್ಥಾನ ಸಂಸ್ಕೃತಿಯ ರಕ್ಷಣೆ ಮತ್ತು ಸಂರಕ್ಷಣೆ’ಗಾಗಿ ಕರ್ನಾಟಕ, ಉತ್ತರ ಪ್ರದೇಶ, ಛತ್ತೀಸಗಡ, ದೆಹಲಿ ರಾಜ್ಯಗಳಲ್ಲಿ ರಾಜ್ಯ ಮಟ್ಟದ ದೇವಸ್ಥಾನ ಪರಿಷತ್ತಿನ ಆಯೋಜನೆ ಮಾಡುವ ಬಗ್ಗೆ ನಿರ್ಧರಿಸಲಾಗಿದೆ. ಆ ಮೂಲಕ 1000 ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಜಾರಿಗೊಳಿಸಲು ಪ್ರಯತ್ನಿಸಲಾಗುವುದು. ಅಲ್ಲದೇ ದೇವಸ್ಥಾನಗಳ ಪಾವಿತ್ರ್ಯ ಕಾಪಾಡಲು ‘ದೇವಸ್ಥಾನ ಪರಿಸರ ಮದ್ಯ-ಮಾಂಸ ಮುಕ್ತ ಅಭಿಯಾನ’ವನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಪೂ. ಚಿತ್ತರಂಜನ ಸ್ವಾಮಿ ಮಹಾರಾಜರು

ತ್ರಿಪುರಾದ ‘ಶಾಂತಿ ಕಾಳಿ ಆಶ್ರಮ’ದ ಪೂ. ಚಿತ್ತರಂಜನ ಸ್ವಾಮಿ ಮಹಾರಾಜರು ಮಾತನಾಡುತ್ತಾ, ದೇಶಾದ್ಯಂತ ವಿಶೇಷವಾಗಿ ಈಶಾನ್ಯದ ಕಡೆಗಿನ ರಾಜ್ಯಗಳಲ್ಲಿ ನಡೆಯುತ್ತಿರುವ ಹಿಂದೂಗಳ ಮತಾಂತರವು ದೊಡ್ಡ ಸಮಸ್ಯೆಯಾಗಿದೆ. ಸ್ವಾತಂತ್ರ್‍ಯವೀರ ಸಾವಕರರು ‘ಮತಾಂತರವು ರಾಷ್ಟ್ರಾಂತರವಾಗಿದೆ’ ಎಂದು ಹೇಳಿದ್ದರು. ಅದನ್ನು ನಾವು ಮಣಿಪುರದ ಹಿಂಸಾಚಾರದಿಂದ ಅನುಭವಿಸುತ್ತಿದ್ದೇವೆ. ಈ ರೀತಿ ಇತರ ರಾಜ್ಯಗಳಲ್ಲಿ ನಡೆಯಬಾರದೆಂದು ಕಠಿಣ ಮತಾಂತರನಿಷೇಧ ಕಾನೂನನ್ನು ತುರ್ತಾಗಿ ರೂಪಿಸುವ ಆವಶ್ಯಕತೆ ಇದೆ. ಹಾಗೂ ಗ್ರಾಮಿಣ ಕ್ಷೇತ್ರಗಳಲ್ಲಿ ಹಿಂದೂಗಳಿಗೆ ಧರ್ಮಶಿಕ್ಷಣ ನೀಡುವ ಕೇಂದ್ರ ಸ್ಥಾಪಿಸಬೇಕು, ಎಂದು ಹೇಳಿದರು.

‘ವಿವೇಕಾನಂದ ಕಾರ್ಯ ಸಮಿತಿ’ಯ ಅಧ್ಯಕ್ಷ ಶ್ರೀ. ನಿರಜ ಅತ್ರಿ

ಹರಿಯಾಣದ ‘ವಿವೇಕಾನಂದ ಕಾರ್ಯ ಸಮಿತಿ’ಯ ಅಧ್ಯಕ್ಷ ಶ್ರೀ. ನಿರಜ ಅತ್ರಿ ಇವರು ಮಾತನಾಡುತ್ತಾ, ದೇಶವನ್ನು ರಕ್ಷಿಸಲು ಮತ್ತು ಹಿಂದೂಗಳನ್ನು ಜಾಗೃತಗೊಳಿಸಲು ನೀಡುವ ಹೇಳಿಕೆಗಳನ್ನು ‘ಹೇಟ್-ಸ್ಪೀಚ್’ ಎಂದು ನಿರ್ಧರಿಸಿ ಹಿಂದೂಗಳ ವಿರುದ್ಧ ಏಕಪಕ್ಷೀಯ ಕ್ರಮ ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಕಾನೂನಾತ್ಮಕವಾಗಿ ಹೋರಾಟ ನಡೆಸುವುದು ಹೇಗೆ ಎಂಬ ಬಗ್ಗೆಯೂ ದೇಶಾದ್ಯಂತ ಬಂದಿರುವ ವಕೀಲರು ಚರ್ಚೆ ನಡೆಸಿದ್ದಾರೆ. ವೈಯಕ್ತಿಕ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಒತ್ತಡಗಳಿಗೆ ಮಣಿಯದೆ ಹಿಂದೂಗಳನ್ನು ಜಾಗೃತಗೊಳಿಸುವ ಕಾರ್ಯವನ್ನು ಮುಂದುವರೆಸುವ ನಿರ್ಧಾರವನ್ನು ವ್ಯಕ್ತಪಡಿಸಲಾಯಿತು.

ಈ ಅಧಿವೇಶನವನ್ನು ಹಿಂದೂ ಜನಜಾಗೃತಿ ಸಮಿತಿಯ ‘HinduJagruti’ ಈ ಯೂಟ್ಯೂಬ್ ಚಾನೆಲ್ ಮತ್ತು facebook.com/hjshindi1 ಈ ಫೇಸ್‌ಬುಕ್‌ನಲ್ಲಿ ಮೂಲಕ ನೇರ ಪ್ರಸಾರ ಮಾಡಲಾಯಿತು ಮತ್ತು ದೇಶ-ವಿದೇಶದ 16,70,680 ಜನರು ಇದರ ಲಾಭವನ್ನು ಪಡೆದುಕೊಂಡರು.

‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ಅಂಗೀಕರಿಸಲ್ಪಟ್ಟ ಠರಾವು !

1. ಭಾರತದ ಬಹುಸಂಖ್ಯಾತ ಹಿಂದೂಗಳಿಗೆ ನ್ಯಾಯ ಕೊಡಿಸಲು ಸಂವಿಧಾನದಿಂದ ‘ಸೆಕ್ಯುಲರ್‍’ ಮತ್ತು ‘ಸೋಶಿಯಾಲಿಸ್ಟ್‌’ ಪದಗಳನ್ನು ಅಳಿಸಿ ಅಲ್ಲಿ ‘ಸ್ಪಿರಿಚ್ಯುವಲ್‌’ ಪದಗಳನ್ನು ಸೇರಿಸಬೇಕು ಮತ್ತು ಭಾರತವನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಬೇಕು.

2. ‘ನೇಪಾಳವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಬೇಕು’, ನೇಪಾಳದಲ್ಲಿರುವ ಹಿಂದೂಗಳ ಬೇಡಿಕೆಯನ್ನು ಈ ಅಧಿವೇಶನವು ಸಂಪೂರ್ಣವಾಗಿ ಬೆಂಬಲಿಸುತ್ತದೆ.

3. ದೇಶಾದ್ಯಂತ ಶ್ರದ್ಧಾ ವಾಲಕರ್, ಸಾಕ್ಷಿ, ಅನುಪಮಾ ಈ ರೀತಿಯ ಅನೇಕ ಹಿಂದೂ ಹುಡುಗಿಯರನ್ನು ಲವ್ ಜಿಹಾದಿಗಳು ಬರ್ಬರವಾಗಿ ಹತ್ಯೆಗೈದಿದ್ದಾರೆ. ಈ ಸಮಸ್ಯೆಗೆ ಪರಿಹಾರವೆಂದು, ದೇಶದ ಮಟ್ಟದಲ್ಲಿ ಕಟ್ಟುನಿಟ್ಟಾದ ‘ಲವ್ ಜಿಹಾದ್ ವಿರೋಧಿ ಕಾನೂನು’ ಮಾಡಬೇಕು, ಅದೇ ರೀತಿ ಪ್ರತಿ ವರ್ಷವೂ ಪ್ರತಿ ರಾಜ್ಯದಿಂದ ಸಾವಿರಾರು ಹುಡುಗಿಯರು ಮತ್ತು ಮಹಿಳೆಯರು ಕಣ್ಮರೆಯಾಗುತ್ತಿದ್ದಾರೆ. ಇದರ ಹಿಂದೆ ಷಡ್ಯಂತ್ರ ಇದೆಯೇ ಎಂಬುದನ್ನು ಪತ್ತೆ ಹಚ್ಚಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು.

4. ಹಿಂದೂಗಳ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವ ‘ಪ್ಲೇಸಸ್ ಆಫ್ ವರ್ಶಿಪ್ ಆಕ್ಟ್ 1991’ ಮತ್ತು ‘ವಕ್ಫ್’ ಕಾಯಿದೆಯನ್ನು ತಕ್ಷಣವೇ ರದ್ದುಗೊಳಿಸಬೇಕು ಮತ್ತು ಕಾಶಿ, ಮಥುರಾ, ತಾಜಮಹಲ್, ಭೋಜಶಾಲಾ ಮುಂತಾದ ಮೊಘಲ್ ಆಕ್ರಮಣಕಾರರಿಂದ ಸಾವಿರಾರು ದೇವಾಲಯಗಳು ಮತ್ತು ಭೂಮಿಯನ್ನು ವಶಪಡಿಸಿಕೊಳ್ಳಬೇಕು. ಹಿಂದೂಗಳಿಗೆ ಹಸ್ತಾಂತರಿಸಬೇಕು.

5. ದೇಶದಾದ್ಯಂತ ಸರಕಾರದ ನಿಯಂತ್ರಣದಲ್ಲಿರುವ ಎಲ್ಲಾ ದೇವಾಲಯಗಳನ್ನು ಸರಕಾರಿಕಣದಿಂದ ಮುಕ್ತಗೊಳಿಸಿ ಭಕ್ತರಿಗೆ ಹಸ್ತಾಂತರಿಸಬೇಕು ಮತ್ತು ದೇವಾಲಯಕ್ಕಾಗಿ ‘ಹಿಂದೂ ಬೋರ್ಡ್’ಅನ್ನು ಸ್ಥಾಪಿಸಿ ಅದರಲ್ಲಿ ಶಂಕರಾಚಾರ್ಯರು, ಧರ್ಮಾಚಾರ್ಯರು, ಭಕ್ತರು, ಪುರೋಹಿತರು, ಧರ್ಮನಿಷ್ಠ ನ್ಯಾಯಾಧೀಶರು ಮತ್ತು ವಕೀಲರನ್ನು ಸೇರಿಸಬೇಕು.

6. ಕೇಂದ್ರ ಸರಕಾರವು ದೇಶಾದ್ಯಂತ ‘ಗೋಹತ್ಯೆ ನಿಷೇಧ’ ಮತ್ತು ‘ಮತಾಂತರ ನಿಷೇಧ’ ಕಾನೂನುಗಳನ್ನು ಜಾರಿಗೊಳಿಸಬೇಕು.

7. ಸುಮಾರು 700 ಕ್ಕೂ ಹೆಚ್ಚು ಭಯೋತ್ಪಾದಕರಿಗೆ ಕಾನೂನು ನೆರವು ನೀಡುತ್ತಿರುವ ‘ಜಮಿಯತ್-ಎ-ಉಲೇಮಾ ಹಿಂದ್’ ಈ ಸಂಘಟನೆಗೆ ಕೇಂದ್ರ ಸರಕಾರವು ಇತ್ತೀಚೆಗೆ ಹಲಾಲ್ ಮಾಂಸದ ಪ್ರಮಾಣೀಕರಣವನ್ನು ಪಡೆಯಲು ಅನುಮತಿ ನೀಡಿದೆ. ಈ ಅನುಮತಿಯನ್ನು ತಕ್ಷಣವೇ ಹಿಂಪಡೆಯಬೇಕು, ಹಾಗೆಯೇ ಭಾರತದಲ್ಲಿ ‘ಎಫ್.ಎಸ್‌.ಎಸ್.ಎ.ಐ. (FSSAI) ಮತ್ತು ಎಫ್.ಡಿ.ಎ. (FDA) ನಂತಹ ಸರಕಾರಿ ಸಂಸ್ಥೆಗಳಿರುವಾಗ ಧಾರ್ಮಿಕ ಆಧಾರದ ಮೇಲೆ ‘ಸಮಾನಾಂತರ ಆರ್ಥಿಕತೆ’ಯನ್ನು ನಿರ್ಮಿಸುವ ‘ಹಲಾಲ್ ಸರ್ಟಿಫಿಕೇಶನ್’ ಕೂಡಲೇ ನಿಲ್ಲಿಸಬೇಕು.

8. ಕಾಶ್ಮೀರ ಕಣಿವೆಯಲ್ಲಿ ‘ಪನೂನ್ ಕಾಶ್ಮೀರ’ ಈ ಕೇಂದ್ರಾಡಳಿತ ಪ್ರದೇಶವನ್ನು ನಿರ್ಮಿಸುವುದು ಮತ್ತು ಸ್ಥಳಾಂತರಗೊಂಡ ಕಾಶ್ಮೀರಿ ಹಿಂದೂಗಳನ್ನು ಅಲ್ಲಿ ಪುನರ್ವಸತಿ ಮಾಡುವುದು.

9. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ ಮತ್ತು ಭಾರತ ಸರಕಾರದಿಂದ ತನಿಖೆ ನಡೆಸಿ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳಿಗೆ ಭದ್ರತೆ ಒದಗಿಸಬೇಕು.

10. ಭಾರತಕ್ಕೆ ನುಸುಳಿರುವ ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ಮುಸ್ಲಿಮರನ್ನು ಗಡಿಪಾರು ಮಾಡಲು ಸರಕಾರ ಕಠಿಣ ಕಾನೂನನ್ನು ಮಾಡಬೇಕು. ಸಿ.ಎ.ಎ. (ಪೌರತ್ವ ಸುಧಾರಣೆ) ಕಾಯಿದೆಯನ್ನು ಕೂಡಲೇ ಜಾರಿಗೊಳಿಸಬೇಕು.

11. ಕಳೆದ ಕೆಲವು ವರ್ಷಗಳಲ್ಲಿ ಹಿಂದೂಯೇತರ ಜನಸಂಖ್ಯೆಯ ಸ್ಫೋಟವನ್ನು ಗಮನದಲ್ಲಿಟ್ಟುಕೊಂಡು, ಎಲ್ಲಾ ಧರ್ಮಗಳ ಜನಸಂಖ್ಯೆಯನ್ನು ಸಮತೋಲನಗೊಳಿಸಲು ದೇಶದಲ್ಲಿ ‘ಜನಸಂಖ್ಯೆ ನಿಯಂತ್ರಣ ಕಾಯ್ದೆ’ಯನ್ನು ತಕ್ಷಣವೇ ಜಾರಿಗೆ ತರಬೇಕು.

12. ಮಣಿಪುರದಲ್ಲಿ ಹಿಂದೂಗಳ ಮೇಲಿನ ದಾಳಿಯನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಸರಕಾರವು ಅವರ ಸುರಕ್ಷತೆಗಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಹಿಂದೂಗಳಿಗೆ ಶಾಶ್ವತ ಭದ್ರತೆಯನ್ನು ಒದಗಿಸಬೇಕು.