ಹಿಂದೂಗಳು ಹಿಂದು ರಾಷ್ಟ್ರದ ಸ್ಥಾಪನೆಗಾಗಿ ಹೆಚ್ಚು ತತ್ಪರತೆಯಿಂದ ಪ್ರಯತ್ನಿಸಬೇಕು ! – ನ್ಯಾಯವಾದಿ ಅತುಲ ಜೆಸವಾನಿ, ಸಂಸ್ಥಾಪಕರು ಮತ್ತು ಪ್ರದೇಶಾಧ್ಯಕ್ಷರು, ಹಿಂದು ಸೇವಾ ಪರಿಷದ್, ಮಧ್ಯಪ್ರದೇಶ

ನ್ಯಾಯವಾದಿ ಅತುಲ ಜೆಸವಾನಿ, ಸಂಸ್ಥಾಪಕರು ಮತ್ತು ಪ್ರದೇಶಾಧ್ಯಕ್ಷರು, ಹಿಂದು ಸೇವಾ ಪರಿಷದ್, ಮಧ್ಯಪ್ರದೇಶ

ನಮ್ಮ ಅಕ್ಕಪಕ್ಕ ‘ಲವ್ ಜಿಹಾದ್’ನ ಅನೇಕ ಘಟನೆಗಳು ಘಟಿಸುತ್ತಿವೆ. ಈ ಘಟನೆಗಳನ್ನು ತಡೆಗಟ್ಟಲು ಹಿಂದೂಗಳು ಆಳಕ್ಕೆ ಹೋಗಿ ಕಾರ್ಯ ಮಾಡುವುದು ಆವಶ್ಯಕವಾಗಿದೆ. ಈ ರೀತಿಯ ಘಟನೆಗಳು ಗಮನಕ್ಕೆ ಬಂದ ತಕ್ಷಣ ಹಿಂದು ಸಹೋದರರು ಹಿಂದುತ್ವನಿಷ್ಠ ಸಂಘಟನೆಗಳವರೆಗೆ ತಲುಪಿಸಬೇಕು. ಹಿಂದೂಗಳು ‘ಧರ್ಮದ ಮೇಲೆ ಆಘಾತವಾಗುವ ಮೊದಲೇ ಅದು ಗಮನಕ್ಕೆ ಬರುವಂತಹ’, ವ್ಯವಸ್ಥೆಯನ್ನು ನಿರ್ಮಿಸಬೇಕು. ‘ಹಿಂದು ರಾಷ್ಟ್ರ’ವೆಂದರೆ ಕೇವಲ ಯಾವುದರ ಮೇಲೆ ನಮ್ಮ ಒಡೆತನ ಇದೆಯೋ ಅಂತಹ ಭೂಭಾಗವಲ್ಲ, ಬದಲಾಗಿ ‘ಎಲ್ಲಿ ಲವ್ ಜಿಹಾದ್, ಗೋಹತ್ಯೆ, ಬಲಾತ್ಕಾರ, ಮತಾಂತರ ಇತ್ಯಾದಿ ನಡೆಯುವುದಿಲ್ಲವೋ’, ಅಂತಹ ರಾಷ್ಟ್ರವಾಗಿದೆ. ‘ಹಿಂದು ರಾಷ್ಟ್ರ ಸ್ಥಾಪನೆ ಬರಲಿಕ್ಕೇ ಇದೆ; ಎಂದು ಹಿಂದೂಗಳು ಶಾಂತರಾಗಿದ್ದರೆ ನಡೆಯುವುದಿಲ್ಲ. ತದ್ವಿರುದ್ಧ ಹಿಂದು ರಾಷ್ಟ್ರದ ಸ್ಥಾಪನೆಗಾಗಿ ಹೆಚ್ಚು ತತ್ಪರತೆಯಿಂದ ಪ್ರಯತ್ನಿಸಬೇಕು. ಧರ್ಮಕಾರ್ಯವನ್ನು ಉತ್ಸಾಹದಿಂದ ಮಾಡಬೇಕು ಎಂದು ಹೇಳಿದರು.