ಹಿಂದೂಜಾಗೃತಿ ಮತ್ತು ಕಾನೂನು !

ದೆಹಲಿಯಲ್ಲಿ ಓರ್ವ ಅಪ್ರಾಪ್ತ ಬಾಲಕಿಯನ್ನು ಮತಾಂಧ ಯುವಕ ಸಾಹೀಲನು ೨೦ ಬಾರಿ ಚೂರಿಯಿಂದ ಇರಿದು ಹಾಗೂ ಕಲ್ಲಿನಿಂದ ಜಜ್ಜಿ ಮಾಡಿದ ಬರ್ಬರ ಹತ್ಯೆಯ ‘ವಿಡಿಯೋ ಪ್ರತಿಯೊಬ್ಬ ಸಂವೇದನಾಶೀಲ ಮನುಷ್ಯನ ಹೃದಯವನ್ನು ಕಲಕುವಂತಿದೆ. ಆದರೆ ದುರ್ದೈವದ ಸಂಗತಿಯೆಂದರೆ, ದೇಶದಾದ್ಯಂತ ಪ್ರತೀ ವಾರ ಹಿಂದೂ ಯುವತಿಯರ ವಿಷಯದಲ್ಲಿ ಇಂತಹ ಘಟನೆಗಳು ಒಂದಲ್ಲೊಂದೆಡೆ ನಡೆಯುವಾಗ ಸರಕಾರ ಮತ್ತು ಹಿಂದೂಗಳು ಇನ್ನೂ ಜಾಗೃತರಾಗಿರುವುದು ಕಾಣಿಸುವುದಿಲ್ಲ; ಮಾಧ್ಯಮಗಳು ಹಾಗೂ ಪೊಲೀಸ್ ಖಾತೆಯೂ ಇದಕ್ಕೆ ಹೊರತಾಗಿಲ್ಲ ! ಮಹಾರಾಷ್ಟ್ರದಲ್ಲಿ ಲವ್ ಜಿಹಾದ್‌ನ ವಿರುದ್ಧ ಸಾವಿರಾರು ಸಂಖ್ಯೆಯಲ್ಲಿ ಮೆರವಣಿಗೆಗಳಾದವು; ‘ಕೇರಳ ಸ್ಟೋರಿಯಂತಹ ಚಲನಚಿತ್ರದಿಂದ ತೀರಾ ಸಾಮಾನ್ಯ ಹಿಂದೂಗಳ ವರೆಗೆ ಮತಾಂಧರು ಪ್ರೇಮದ ಮೂಲಕ ಹಿಂದೂ ಹುಡುಗಿಯರಿಗೆ ಮೋಸ ಮಾಡುತ್ತಿರುವ ಸಂದೇಶ ಹೋಯಿತು. ಕೆಲವು ಹಿಂದೂಗಳು ಜಾಗೃತರಾಗಿದ್ದಾರೆ ಹಾಗೂ ಅವರಲ್ಲಿನ ಕೆಲವರು ಈ ವಿಷಯದಲ್ಲಿ ಕೃತಿಶೀಲರೂ ಆಗಿದ್ದಾರೆ; ಆದರೆ ಇಂತಹ ಘಟನೆಗಳ ಪುನರಾವರ್ತನೆಯು ಕಡಿಮೆಯಾಗುವ ಲಕ್ಷಣ ಕಾಣುವುದಿಲ್ಲ. ಇದರ ಅರ್ಥ ಹಿಂದೂಗಳು ಇನ್ನೂ ಬಹಳಷ್ಟು ಕಾರ್ಯ ಮಾಡಲಿಕ್ಕಿದೆ. ಕಾನೂನಿನಿಂದ ಲವ್ ಜಿಹಾದ್ ಸಂಪೂರ್ಣ ನಿಲ್ಲುವ ಸಾಧ್ಯತೆ ಕಡಿಮೆಯಿದೆ; ಆದರೆ ಅದರ ಮೂಲಕ ‘ಲವ್ ಜಿಹಾದಿ ಮತಾಂಧರಿಗೆ ಅತ್ಯಂತ ಕಠಿಣ ಶಿಕ್ಷೆಯನ್ನು ವಿಧಿಸುವುದರಿಂದ ಈ ಘಟನೆಗಳನ್ನು ತಡೆಯುವುದರಲ್ಲಿನ ಮಹತ್ವದ ಭಾಗವಾಗಬಹುದು. ‘ಸದ್ಯ ೯ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ಮತಾಂತರವಿರೋಧಿ ಕಾನೂನು ಇದಕ್ಕೆ ಸಾಕಾಗುವುದಿಲ್ಲ, ಎಂಬುದು ಎಲ್ಲರಿಗೂ ಅರಿವಾಗಿರಬಹುದು. ‘ಲವ್ ಜಿಹಾದ್ನಲ್ಲಿ ಶಾರೀರಿಕ, ಮಾನಸಿಕ, ಕೌಟುಂಬಿಕ, ಆರ್ಥಿಕ, ಸಾಮಾಜಿಕ, ಲೈಂಗಿಕ ಇವೇ ಮೊದಲಾದ ಸ್ತರಗಳಲ್ಲಿ ಶೋಷಣೆಯಾಗುತ್ತದೆ ಹಾಗೂ ಹತ್ಯೆಯಂತಹ ಘಟನೆಗಳಾಗುತ್ತವೆ. ಅಲ್ಲಿ ಪ್ರತ್ಯಕ್ಷ ಮತಾಂತರವಾಗುವುದಿಲ್ಲ ಹಾಗೂ ಅಲ್ಲಿ ಕೇವಲ ಹತ್ಯೆ ಅಥವಾ ಕೇವಲ ‘ಪೊಕ್ಸೋದ ವಿಷಯದ ಕಾನೂನು ಸಾಕಾಗುತ್ತದೆ ಎಂದೆನಿಸುವುದಿಲ್ಲ. ಆದ್ದರಿಂದ ದೇಶದಾದ್ಯಂತ ಅತ್ಯಂತ ಪ್ರಾಮುಖ್ಯವಾಗಿ ಲವ್ ಜಿಹಾದಿಗಳ ವಿರುದ್ಧದ ಕಾನೂನು ರಚಿಸುವ ಆವಶ್ಯಕತೆಯಿದೆ. ಕಾನೂನು ಇದ್ದರೂ ಇನ್ನೂ ಗೋಹತ್ಯೆ ನಡೆಯುತ್ತಲೇ ಇದೆ, ಹಾಗೆಯೇ ಇದಕ್ಕೆ ಕೂಡ ಕೇವಲ ಕಾನೂನು ಸಾಕಾಗುವುದಿಲ್ಲ, ಇದಕ್ಕೆ ಹಿಂದೂಗಳಲ್ಲಿ ಆಳವಾಗಿ ಹಾಗೂ ವ್ಯಾಪಕ ಜಾಗೃತಿಯೂ ಆವಶ್ಯಕವಿದೆ.

ಎಲ್ಲಿಯವರೆಗೆ ಬಹುಸಂಖ್ಯಾತ ಹಿಂದೂಗಳು ತಮ್ಮ ಹುಡುಗಿಯರಿಗೆ ಧರ್ಮಶಿಕ್ಷಣ ನೀಡಿ ಅವರ ಮನಸ್ಸಿನಲ್ಲಿ ಸ್ವಧರ್ಮದ ಬಗ್ಗೆ ಪ್ರಖರ ಅಭಿಮಾನ ಮೂಡಿಸುವುದಿಲ್ಲವೋ, ಹಾಗೂ ಅವರಿಗೆ ಎಲ್ಲಿಯವರೆಗೆ ಸ್ವಸಂರಕ್ಷಣೆಗಾಗಿ ಶಾರೀರಿಕ ತರಬೇತಿ ನೀಡುವುದಿಲ್ಲವೋ, ಅಲ್ಲಿಯವರೆಗೆ ಹಿಂದೂ ಹುಡುಗಿಯರು ಈ ಮತಾಂಧರಿಗೆ ಬಲಿಯಾಗುತ್ತಲೇ ಇರುವರು. ಕಾಲಾನುಸಾರ ಪೂರ್ಣ ಹಿಂದೂ ಸಮಾಜದ ನೈತಿಕತೆಯ ಅವನತಿಯಾಗಿರುವುದರಿಂದ ಶೀಲರಕ್ಷಣೆ ಹಾಗೂ ಅದಕ್ಕೆ ಸಂಬಂಧಿಸಿದ ನೈತಿಕ ಮೌಲ್ಯದ ಬಗ್ಗೆ ಇಂದು ಯಾರಿಗೂ ಏನೂ ಅನಿಸುವುದಿಲ್ಲ. ಅದರಿಂದ ದೆಹಲಿಯಂತಹ ನಗರದಲ್ಲಿ ಆ ವಿಷಯದಲ್ಲಿ ಎಂತಹ ವಿಚಾರಧಾರೆ ಇರಬಹುದು ? ನೈತಿಕಮೌಲ್ಯಗಳ ಮಹತ್ವವನ್ನು ಧರ್ಮಾಚರಣಿ ಅಥವಾ ಸಾಧನೆ ಮಾಡುವವರೇ ಒಳ್ಳೆಯ ರೀತಿಯಲ್ಲಿ ಜೋಪಾಸನೆ ಮಾಡಬಲ್ಲರು. ‘ಹಿಂದೂಗಳ ಮನೆಮನೆಗಳಲ್ಲಿ ಮತ್ತು ಶಾಲೆಗಳಲ್ಲಿ ಧರ್ಮಾಚರಣೆಯನ್ನು ಕಲಿಸಬೇಕು, ಇದೇ ಅದಕ್ಕೆ ಅಂತಿಮ ಪರಿಹಾರವಾಗಿದೆ. ಈ ಬದಲಾವಣೆ ಅಲ್ಪಾವಧಿಯಲ್ಲಿ ಆಗಲು ಸಾಧ್ಯವಿಲ್ಲ; ಆದರೆ ಇದು ಎಲ್ಲಿಯಾದರೂ ಆರಂಭವಾಗಲೇ ಬೇಕು. ಹಿಂದೂಗಳ ಪ್ರತಿಯೊಂದು ವಸತಿಗಳಲ್ಲಿ ಹುಡುಗಿಯರಿಗಾಗಿ ಸ್ವಸಂರಕ್ಷಣ ತರಬೇತಿ ವರ್ಗ ಆರಂಭಿಸಬೇಕು. ಹಾಗೆ ಮಾಡಿದರೆ ಮಾತ್ರ ಹುಡುಗಿಯರಲ್ಲಿ ಜಾಗರೂಕತೆ ಹೆಚ್ಚಾಗುವುದು. ಹಿಂದೂ ಎಷ್ಟೇ ಕಲಿತರೂ ಅವನಿಗೆ ಧರ್ಮಶಿಕ್ಷಣ ಹಾಗೂ ಧರ್ಮಾಭಿಮಾನ ಇಲ್ಲದಿದ್ದರೆ, ಅದರಿಂದ ಏನೂ ಉಪಯೋಗವಾಗಲಿಕ್ಕಿಲ್ಲ. ಎಲ್ಲಿಯವರೆಗೆ ಅವನಲ್ಲಿ ಕ್ಷಾತ್ರತೇಜ ಜಾಗೃತವಾಗುವುದಿಲ್ಲವೋ, ಅಲ್ಲಿಯವರೆಗೆ ಅವನು ತನ್ನನ್ನು ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ. ಇಲ್ಲಿಯ ವರೆಗಿನ ಲವ್ ಜಿಹಾದ್‌ನಲ್ಲಾದ ಹತ್ಯೆಗಳ ಘಟನೆಗಳನ್ನು ನೋಡುವಾಗ ‘ಮುಂಬರುವ ಕಾಲದಲ್ಲಿ ಹಿಂದೂಗಳ ಹುಡುಗಿಯರನ್ನು ಪೊಲೀಸರು ರಕ್ಷಿಸಲು ಸಾಧ್ಯವಿಲ್ಲ, ಎಂಬುದನ್ನು ಹಿಂದೂಗಳು ಖಚಿತಪಡಿಸಿಕೊಳ್ಳಬೇಕು ಹಾಗೂ ಅವರನ್ನು ಸ್ವರಕ್ಷಣಾ ತರಬೇತಿಗಾಗಿ ಪ್ರೋತ್ಸಾಹಿಸಬೇಕು. ಅದಕ್ಕಾಗಿ ಪ್ರತಿಯೊಂದು ಹಿಂದೂ ಕುಟುಂಬ ಮೊದಲು ತಾನು ಜಾಗೃತವಾಗಬೇಕು.

ಮಾಧ್ಯಮಗಳಲ್ಲಿ ನುಸುಳಿದ ಸರ್ವಧರ್ಮಸಮಭಾವದ ಭೂತ 

‘ಇಂದು ಕೂಡ ಬೆರಳೆಣಿಕೆಯಷ್ಟೇ ಪ್ರಸಾರ ಮಾಧ್ಯಮಗಳು ದೆಹಲಿಯ ಘಟನೆಯಲ್ಲಿ ಹುಡುಗಿ ಹಿಂದೂ ಹಾಗೂ ಹುಡುಗ ಮತಾಂಧ ಆಗಿರುವುದನ್ನು ಎತ್ತಿ ಹಿಡಿದಿವೆ, ಇದಕ್ಕಿಂತ ಹಿಂದೂಗಳ ದೌರ್ಭಾಗ್ಯ ಇನ್ನೇನಿರಬಹುದು ? ಹಿಂದೂಗಳ ಪ್ರಸಾರಮಾಧ್ಯಮಗಳೇ ಸಂತ್ರಸ್ತರು ‘ಹಿಂದೂಗಳಾಗಿದ್ದರಿಂದ ಅವರ ಮೇಲಾಗಿರುವ ಅನ್ಯಾಯವನ್ನು ಬೆಳಕಿಗೆ ತರುವುದಿಲ್ಲ, ಹೀಗಿರುವಾಗ ಹಣಗಳಿಸುವುದರಲ್ಲಿಯೇ ಮಗ್ನರಾಗಿರುವ ಹಿಂದೂ ಸಮಾಜವು ಹೇಗೆ ಜಾಗೃತವಾಗಬಲ್ಲದು ? ಒಂದೆಡೆ ಸಮಭಾವದಿಂದ, ಅಂದರೆ ‘ಸರ್ವಧರ್ಮಸಮಭಾವದಿಂದ ಇರಬೇಕೆಂಬ ಅತ್ಯಂತ ಅಸಹ್ಯಕರ ಬೋಧನೆಯನ್ನು ಅವನಿಗೆ ನೀಡಲಾಗಿದೆ, ಇಂದಿನ ಪ್ರಸಾರಮಾಧ್ಯಮಗಳು ಸಹ ಅದರದ್ದೇ ಒಂದು ಫಲರೂಪವಾಗಿವೆ. ಹಿಂದೂಗಳ ಮೇಲಿನ ಅನ್ಯಾಯವನ್ನು ಎತ್ತಿ ಹಿಡಿಯದ ಈ ಎಲ್ಲ ಪ್ರಸಾರಮಾಧ್ಯಮಗಳು ಮುಂದಿನ ಇತಿಹಾಸದಲ್ಲಿ ‘ಹಿಂದೂದ್ವೇಷಿ ಮಾಧ್ಯಮಗಳೆಂದು ನೋಂದಣಿಯಾದರೆ ಆಶ್ಚರ್ಯವೆನಿಸಲಿಕ್ಕಿಲ್ಲ.

ಅಹಿಂಸೆಯ ಶಾಪ !

ದೆಹಲಿಯಲ್ಲಿ ಇತ್ತೀಚೆಗಿನ ಘಟನೆ ನಡೆಯುವಾಗ ೭-೮ ಜನರು ಅಲ್ಲಿಂದ ಆಚೀಚೆ ಓಡಾಡುತ್ತಿದ್ದರು. ಅವರೆಲ್ಲರೂ ಒಟ್ಟಾಗಿ ಈ ಮತಾಂಧನನ್ನು ಹಿಡಿದಿದ್ದರೆ, ಬಹುಶಃ ಈ ಹುಡುಗಿಯ ಜೀವ ಉಳಿಯುತ್ತಿತ್ತು ಹಾಗೂ ಹೆಚ್ಚೆಂದರೆ ಒಬ್ಬಿಬ್ಬರು ಹಿಂದೂ ಗಾಯಗೊಳ್ಳುತ್ತಿದ್ದನು. ಆದರೆ ದೌರ್ಭಾಗ್ಯವೆಂದರೆ, ಹಿಂದೂಗಳಲ್ಲಿ ಪ್ರತಿಕಾರ ಮಾಡುವ ವೃತ್ತಿಯೇ ಪೂರ್ಣಲಯವಾಗಿದೆ. ಇದರ ಮೂಲ ಮೋಹನದಾಸ ಗಾಂಧಿಯವರು ಈ ಸಮಾಜಕ್ಕೆ ನೀಡಿದ ಅಹಿಂಸಾವಾದದಲ್ಲಿದೆ. ಹಿಂದೂ ಸಮಾಜಕ್ಕೆ ಶಾಪವಾಗಿರುವ ಈ ಅಹಿಂಸಾವಾದವು ಹಿಂದೂಗಳಲ್ಲಿನ ಪ್ರತಿಕಾರಕ್ಷಮತೆಯನ್ನು ನಾಶಗೊಳಿಸಿ ಅವರನ್ನು ನಪುಂಸಕರನ್ನಾಗಿ ಮಾಡಿದೆ. ಅವರನ್ನು ಜನ್ಮಹಿಂದೂವನ್ನಾಗಿ ಮಾಡಿದೆ. ಸ್ವಅಸ್ತಿತ್ವದ ಹೋರಾಟದ ಪ್ರಸಂಗ ಎದುರಾದರೂ ಅವರು ತಮ್ಮ ರಕ್ಷಣೆ ಮಾಡಿಕೊಳ್ಳುವುದಿಲ್ಲ. ಮತಾಂಧರಿಗೆ ಬಲಿಯಾಗುವ ಹಿಂದೂ ಹುಡುಗಿಯರು ಕನಿಷ್ಟ, ಮಧ್ಯಮ ಹಾಗೂ ಉಚ್ಚ ಮಟ್ಟದವರು ಹೀಗೆ ಎಲ್ಲ ಸ್ತರದವರಾಗಿದ್ದಾರೆ. ಆದ್ದರಿಂದ ಈಗ ಎಲ್ಲ ಸ್ತರದಲ್ಲಿನ ಹಿಂದೂಗಳು ಒಗ್ಗಟ್ಟಾಗಿ ಮತಾಂಧರ ಈ ವಂಶವಿಚ್ಛೇದನೆಯ ಷಡ್ಯಂತ್ರದ ವಿರುದ್ಧ ಸಿಡಿದೇಳಬೇಕಾಗಿದೆ !