
ಸ್ಟಾಕ್ಹೋಮ್ (ಸ್ವೀಡನ್) – ಭಾರತೀಯ ಸಂಸ್ಕೃತಿ ಜಾಗತೀಕರಣಗೊಳ್ಳುತ್ತಿದೆ. ಭಾರತೀಯ ಸಂಸ್ಕೃತಿಯನ್ನು ಉತ್ತೇಜಿಸಲು ಹೊಸ ಮಾರ್ಗಗಳನ್ನು ಶೋಧಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಯೋಗ ದಿನ ಇದಕ್ಕೆ ಉತ್ತಮ ಉದಾಹರಣೆವಾಗಿದೆ. ಅಂತರಾಷ್ಟ್ರೀಯ ಯೋಗ ದಿನವನ್ನು ಇಡೀ ವಿಶ್ವವು ಉತ್ಸಾಹದಿಂದ ಸ್ವೀಕರಿಸಿದೆ ಎಂದು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ‘ಇಂಡೋ-ಪೆಸಿಫಿಕ್ ಮಿನಿಸ್ಟ್ರಿಯಲ್ ಫೋರಂ’ನ ಕಾರ್ಯಕ್ರಮದಲ್ಲಿ ಹೇಳಿದರು. ಅದಕ್ಕಾಗಿ ಅವರು ೩ ದಿನಗಳ ಕಾಲ ಸ್ವೀಡನ್ ಪ್ರವಾಸದಲ್ಲಿದ್ದಾರೆ. ಇದರೊಂದಿಗೆ ಭಾರತದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಉಪಕ್ರಮಗಳು ಮತ್ತು ವಿದೇಶದಲ್ಲಿ ನೆಲೆಸಿರುವ ಭಾರತೀಯರಿಗೆ ಸೃಷ್ಟಿಸಲಾದ ಅವಕಾಶಗಳ ಕುರಿತು ಜೈಶಂಕರ್ ಅವರು ಚರ್ಚಿಸಿದರು.
S Jaishankar’s response to ‘Whether pani puri will replace hamburger in West?’ goes viral https://t.co/iSf2OgrtCY
— Tashidelek News 🇧🇹 (@TashidelekN) May 17, 2023
…ಮತ್ತು ವಿದೇಶಾಂಗ ಸಚಿವರು ಹಿಂದಿ ಗಾದೆ ಮಾತನ್ನು ಬಳಸಿದ್ದರು !
ಇಲ್ಲಿಯ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸುವಾಗ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಭಾರತೀಯ ಸಂಸ್ಕೃತಿಯ ಜಾಗತೀಕರಣದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸುವಾಗ ಹಿಂದಿ ಗಾದೆಯೊಂದನ್ನು ಬಳಸಿದ್ದಾರೆ. ಭಾರತೀಯ ಸಂಸ್ಕೃತಿಯ ಜಾಗತೀಕರಣದ ಈ ಯುಗದಲ್ಲಿ ಜನರು ಪಾಶ್ಚಿಮಾತ್ಯ ‘ಹ್ಯಾಂಬರ್ಗರ್’ ಬದಲಿಗೆ ‘ಪಾನಿ ಪುರಿ’ ತಿನ್ನಲು ಪ್ರಾರಂಭಿಸುತ್ತಾರೆಯೇ ? ಮತ್ತು ಎಚ್ ಆಂಡ್ ಎಮ್ ಟಿ-ಶರ್ಟ್ಗಳ’ ಮೇಲೆ ನ್ಯೂಯಾರ್ಕ್ ಬದಲಿಗೆ ‘ನವ ದೆಹಲಿ’ ಎಂದು ಮುದ್ರಿಸಲಾಗುತ್ತದೆಯೇ ? ಇದಕ್ಕೆ ಪ್ರತಿಕ್ರಿಯಿದ ಜೈಶಂಕರ್ ಅವರು ಹಿಂದಿಯಲ್ಲಿ ‘ಆಪ್ ಕೆ ಮುಹ ಮೆ ಘೀ ಶಕ್ಕರ್’ (ನಿಮ್ಮ ಬಾಯಿಯಲ್ಲಿ ತುಪ್ಪ-ಸಕ್ಕರೆ) (ಅರ್ಥ: ನೀವು ಹೇಳುವುದು ನಿಜವಾಗಲಿ). ಎಂದು ಹಿಂದಿ ವಾಕ್ಯವನ್ನು ಬಳಸಿದರು. ಪ್ರೇಕ್ಷಕರು ಅದಕ್ಕೆ ನಗುತ್ತಾ ಚಪ್ಪಾಳೆ ತಟ್ಟಿದರು.
ಕಟ್ಟರವಾದಿಗಳ ಒತ್ತಡಕ್ಕೆ ಮಣಿದು ‘ಸನಾತನ ಧರ್ಮ ಸಂಕುಲ’ದ ನಿರ್ಮಾಣ ಕಾರ್ಯ ಸ್ಥಗಿತ!
‘ಚಾಟ್ಜಿಪಿಟಿ’ಯಿಂದಾಗಿ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಆರೋಪ!
ಇಲಾನ್ ಮಸ್ಕ್ ವಿಶ್ವದ ಮೊದಲ ಟ್ರಿಲಿಯನೇರ್ !
ಅಮೆರಿಕವು ಇರಾನ್ನ ದಾಳಿಗಳಿಂದ ಭಾರತೀಯ ಹಡಗುಗಳನ್ನು ರಕ್ಷಿಸಿದೆ ಅಂತೆ!
ಶೀಘ್ರದಲ್ಲೇ ಶಾಂತಿ ಒಪ್ಪಂದ: ಇರಾನ್ ಯುದ್ಧ ಅಂತ್ಯ! – ಟ್ರಂಪ್ ಹೇಳಿಕೆ
ಕಟ್ಟರವಾದಿಗಳ ಒತ್ತಡಕ್ಕೆ ಮಣಿದು ‘ಸನಾತನ ಧರ್ಮ ಸಂಕುಲ’ದ ನಿರ್ಮಾಣ ಕಾರ್ಯ ಸ್ಥಗಿತ!