
ಚೆನೈ (ತಮಿಳುನಾಡು) – ಏಪ್ರಿಲ್ ೧೬ ರಂದು ಆರ್.ಎಸ್.ಎಸ್. ನಿಂದ ರಾಜ್ಯದ ೪೫ ಕಡೆಗಳಲ್ಲಿ ಭವ್ಯ ಮೆರವಣಿಗೆಯನ್ನು ನಡೆಸಲಾಯಿತು. ರಾಜ್ಯದ ಮುಖ್ಯಮಂತ್ರಿ ಸ್ಟಾಲಿನರವರ ಸರಕಾರವು ಈ ಮೆರವಣಿಗೆಗಳ ಮೇಲೆ ನಿಷೇಧ ಹೇರಿತ್ತು; ಆದರೆ ಸರ್ವೋಚ್ಚ ನ್ಯಾಯಾಲಯದ ಆದೇಶದ ನಂತರ ಅನುಮತಿ ನೀಡಲಾಯಿತು. ರಾಜ್ಯ ಸರಕಾರವು, `ಸಂಘದ ಮೆರವಣಿಗೆಯಿಂದ ರಾಜ್ಯದಲ್ಲಿ ಅಸ್ಥಿರತೆ ಉಂಟಾಗಬಹುದು ಮತ್ತು ಅದನ್ನು ಹತೋಟಿಗೆ ತರಲು ಕಠಿಣವಾಗುವುದು’ ಎಂಬ ನೆಪ ಒಡ್ಡಿತ್ತು. ನ್ಯಾಯಾಲಯವು ಆದೇಶದಲ್ಲಿ `ಈ ಮೆರವಣಿಗೆಗಳಲ್ಲಿ ಬಿದಿರಿನ ಬೆತ್ತಗಳನ್ನು ಬಳಸಬಾರದು’ ಎಂದು ನಮೂದಿಸಲಾಗಿತ್ತು. ರಾಜ್ಯದ ಚೆನೈ, ವೆಲ್ಲೊರ, ಹೊಸೂರು, ಸೇಲಂ, ಚೆಂಗಳಪಟ್ಟು, ಕಾಂಚಿಪುರಂ, ತಿರುವಣ್ಣಾಮಲೈ, ಅರಾನಿ, ಕೊಯಿಮತ್ತೂರು, ಮೆಟ್ಟುಪಾಳಯಂ, ಪೆಲ್ಲಾದಂ, ಕರೂರ, ತೆಂಕಾಸಿ, ಕನ್ಯಾಕುಮಾರಿ, ತಿರುಚಿರಾಪಳ್ಳಿ ಮತ್ತು ಮಧುರೈನಂತಹ ಪ್ರಮುಖ ಕಡೆಗಳಲ್ಲಿ ಈ ಮೆರವಣಿಗೆಗಳನ್ನು ನಡೆಸಲಾಯಿತು. ಪೊಲೀಸರು ಈ ಮೆರವಣಿಗೆಗಳಿಗೆ ಭದ್ರತೆ ನೀಡಿದ್ದರು. ರಾಜಧಾನಿ ಚೆನೈನಲ್ಲಿರುವ ಕೊರತ್ತೂರಿನಲ್ಲಿ ನಡೆದ ಮೆರವಣಿಗೆಯಲ್ಲಿ ಕೇಂದ್ರ ಮೀನುಗಾರಿಕೆ ಮತ್ತು ಪಶುಸಂಗೋಪನೆ ಖಾತೆ ರಾಜ್ಯ ಸಚಿವ ಡಿ.ಎಲ್. ಮುರುಗನ್ ರವರು ಸಹಭಾಗಿಯಾಗಿದ್ದರು.
RSS holds massive rallies across TN after big win over DMK govt in Supreme Court #RSS #TamilNadu https://t.co/tkvoyl0i5X
— Republic (@republic) April 16, 2023
ಪೋಷಕರು ಮತ್ತು ಹಿರಿಯರು ಇಂದಿನ ಯುವ ಪೀಳಿಗೆಯೊಂದಿಗೆ ಸಂವಾದ ನಡೆಸಬೇಕು! – ಪ.ಪೂ. ಸರಸಂಘಚಾಲಕ ಡಾ. ಮೋಹನ್ ಜಿ ಭಾಗವತ್
ನ್ಯಾಯಾಲಯವೆಂದರೆ ೨೪ ಗಂಟೆಗಳ ಕಾಲ ನಡೆಯುವ ಮನರಂಜನಾ ವಾಹಿನಿಯಲ್ಲ ! – Supreme Court
ಮುಖ್ಯ ಆರೋಪಿ ಬ್ರಿಜೇಂದ್ರ ಗುಪ್ತನನ್ನು ಬಿಹಾರದಿಂದ ಬಂಧಿಸಿದ ಪೊಲೀಸರು!
ನಿಮ್ಮಿಂದಾಗಿ ದೇಶದ ಅಪಕೀರ್ತಿಯಾಯಿತು, ಕೋಟ್ಯಂತರ ರೂಪಾಯಿ ನಷ್ಟವಾಯಿತು !
ಕಾಕ್ರೋಚ್ ಜನತಾ ಪಕ್ಷ ವಿದೇಶಿ ಶಕ್ತಿಗಳ ಬೆಂಬಲವಿರುವ ವ್ಯವಸ್ಥೆ !
ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡುವವರೆಗೆ ಹೋರಾಟ ಮುಂದುವರಿಯಲಿದೆ !