ಸರಕಾರಿಕರಣಗೊಂಡ ದೇವಾಲಯಗಳನ್ನು ಭಕ್ತರಿಗೆ ಹಸ್ತಾಂತರಿಸಬೇಕು ಮತ್ತು ಅವುಗಳನ್ನು ನಡೆಸಲು ಹಿಂದೂ ಮಂಡಳಿಯನ್ನು ಸ್ಥಾಪಿಸಬೇಕು ! – ಮಹಂತ ಶ್ರೀ ಸುಧೀರದಾಸಜೀ ಮಹಾರಾಜ

‘ಮಸೀದಿಗಳಿಗೆ ವಕ್ಫ್ ಬೋರ್ಡ್, ದೇವಾಲಯಗಳಿಗೆ ಸನಾತನ ಬೋರ್ಡ್ ಏಕಿಲ್ಲ ?’ ಈ ಕುರಿತು ವಿಶೇಷ ಸಂವಾದ !

ಮಸೀದಿಗಳಿಗೆ ‘ವಕ್ಫ್ ಬೋರ್ಡ್’, ಚರ್ಚ್‌ಗಳಿಗೆ ‘ಸ್ವತಂತ್ರ ಚರ್ಚ್ ಸಮಿತಿ’ (ಡಾಯಸೆಶನ ಬೋರ್ಡ್) ಇದೆ. ಹಿಂದೂ ದೇವಾಲಯಗಳಿಗೂ ಸಮಿತಿ ಅಥವಾ ಮಂಡಳಿ ಸ್ಥಾಪಿಸಬೇಕು. ಹಿಂದೂ ದೇವಾಲಯಗಳ ಉತ್ತಮ ನಿರ್ವಹಣೆಗೆ ಹಿಂದೂ ಸಮಿತಿಯ ಅಗತ್ಯವಿದೆ. ಸರಕಾರದ ಅಧೀನದಲ್ಲಿರುವ ದೇವಾಲಯಗಳನ್ನು ಭಕ್ತರಿಗೆ ಹಸ್ತಾಂತರಿಸಿ ಅವುಗಳ ನಿರ್ವಹಣೆಯನ್ನು ಈ ಸಮಿತಿಗೆ ವಹಿಸಬೇಕು ಎಂದು ನಾಸಿಕ್‌ನ ಶ್ರೀ ಕಾಳಾರಾಮ ದೇವಸ್ಥಾನದ ಆಚಾರ್ಯ ಮಹಾಮಂಡಲೇಶ್ವರ ಮಹಂತ ಶ್ರೀ ಸುಧೀರದಾಸಜೀ ಮಹಾರಾಜ ಕರೆ ನೀಡಿದರು. ಅವರು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ‘ಮಸೀದಿಗಳಿಗೆ ವಕ್ಫ್ ಬೋರ್ಡ್, ದೇವಸ್ಥಾನಗಳಿಗೆ ‘ಸನಾತನ ಬೋರ್ಡ್’ ಏಕಿಲ್ಲ ?’ ಎಂಬ ವಿಷಯದ ಕುರಿತು ಆಯೋಜಿಸಿದ್ದ ಆನ್‌ಲೈನ್ ವಿಶೇಷ ಸಂವಾದದಲ್ಲಿ ಅವರು ಮಾತನಾಡುತ್ತಿದ್ದರು.

ಮಹಂತ್ ಶ್ರೀ ಸುಧೀರದಾಸಜೀ ಮಹಾರಾಜ ತಮ್ಮ ಮಾತನ್ನು ಮುಂದುವರೆಸುತ್ತಾ, “ಹಲವು ಪ್ರಸಿದ್ಧ ದೇವಾಲಯಗಳ ಸುತ್ತಮುತ್ತ ಮದ್ಯ ಮತ್ತು ಮಾಂಸಾಹಾರಿ ಅಂಗಡಿಗಳಿವೆ, ಅವುಗಳನ್ನು ನಿಲ್ಲಿಸಬೇಕು. ಕೆಲವು ಪ್ರಸಿದ್ಧ ದೇಗುಲಗಳಲ್ಲಿ ಪ್ರವಾಸೋದ್ಯಮಕ್ಕಾಗಿ ಸರಕಾರವು ಅಭಿವೃದ್ಧಿ ಮತ್ತು ಸೌಲಭ್ಯಗಳನ್ನು ಒದಗಿಸಿದ್ದರೂ, ಆ ದೇಗುಲಗಳ ಸಂಪ್ರದಾಯ ಮತ್ತು ಆಧ್ಯಾತ್ಮಿಕತೆಯನ್ನು ಯಥಾಸ್ಥಿತಿಯಲ್ಲಿ ಕಾಪಾಡುವ ಜವಾಬ್ದಾರಿ ಆಯಾ ದೇಗುಲಗಳ ಅರ್ಚಕರ ಮತ್ತು ನಿರ್ವಹಣೆಯ ಜವಾಬ್ದಾರಿಯಾಗಿದೆ. ಅಲ್ಲದೆ, ‘ಲ್ಯಾಂಡ್ ಜಿಹಾದ್’ ಮೂಲಕ ‘ವಕ್ಫ್ ಬೋರ್ಡ್’ ಲಕ್ಷಗಟ್ಟಲೆ ಎಕರೆ ಭೂಮಿಯನ್ನು ಕಬಳಿಸುತ್ತಿದೆ. ಮುಂದೆಯೂ ಕೂಡ ‘ವಕ್ಫ್ ಬೋರ್ಡ್’ ಹಲವು ಜಮೀನುಗಳು ತನ್ನ ವಶಕ್ಕೆ ಪಡೆಯಲಿದೆ, ಈ ‘ವಕ್ಫ್ ಬೋರ್ಡ್’ ಮೇಲೆ ಸರಕಾರ ಕಡಿವಾಣ ಹಾಕಬೇಕು.” ಎಂದು ಹೇಳಿದರು.

‘ದೇವಸ್ಥಾನ ಸೇವಾ ಸಮಿತಿ’ಯ ವಿದರ್ಭ ಕಾರ್ಯದರ್ಶಿ ಶ್ರೀ. ಅನುಪ ಜೈಸ್ವಾಲ್ ಇವರು ಮಾತನಾಡುತ್ತಾ, ದೇವಾಲಯಗಳು ಮತ್ತು ಧಾರ್ಮಿಕ ಸಂಸ್ಥೆಗಳು ಈಗ ಒಂದಾಗಬೇಕು. ಅಲ್ಲದೆ ದೇವಸ್ಥಾನಗಳಿಗೆ ‘ಸನಾತನ ಬೋರ್ಡ್’ ಸ್ಥಾಪಿಸಬೇಕು. ದೇವಸ್ಥಾನದ ಕ್ಷೇತ್ರದಲ್ಲಿ ಜನರ ನಡುವೆ ಭಿನ್ನಾಭಿಪ್ರಾಯಗಳಿದ್ದರೆ ಚರ್ಚೆಯ ಮೂಲಕ ಬಗೆಹರಿಸಿಕೊಳ್ಳಬೇಕು. ಅಲ್ಲದೆ ಸರಕಾರ ದೇವಾಲಯಗಳನ್ನು ಸ್ವಾಧೀನಪಡಿಸಿಕೊಂಡು ದೇವಾಲಯದ ಹಣದಿಂದ ಒಂದಷ್ಟು ಸಾಮಾಜಿಕ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದರಿಂದ ಸರಕಾರ ಚೆನ್ನಾಗಿದೆ ಎಂದು ಹೇಳಲಾಗದು; ಏಕೆಂದರೆ ಇಂತಹ ಚಟುವಟಿಕೆಗಳನ್ನು ಸರಕಾರೇತರ ದೇವಾಲಯಗಳು ಮತ್ತು ದೇವಾಲಯದ ಭಕ್ತರು ನಡೆಸುತ್ತಾರೆ. ಇದರಿಂದ ಹಿಂದೂಗಳ ಧಾರ್ಮಿಕ ಭಾವನೆಗಳನ್ನೂ ಕಾಪಾಡುತ್ತದೆ ಎಂದು ಹೇಳಿದರು.