
ಸಂಭಲ್ (ಉತ್ತರ ಪ್ರದೇಶ) – ಸದ್ಯ ನಡೆಯುತ್ತಿರುವ ಉತ್ಕನನದಲ್ಲಿ ಪುರಾತತ್ವ ಇಲಾಖೆಗೆ ಪುರಾತನ ಬಾವಿಯೊಂದು ಪತ್ತೆಯಾಗಿದೆ. ಈ ಬಾವಿಯನ್ನು ‘ಮೃತ್ಯುಕೂಪ’ ಎಂದು ಕರೆಯಲಾಗುತ್ತಿತ್ತು. ಈ ಬಾವಿಯನ್ನು ಮುಚ್ಚಲಾಗಿತ್ತು. ಪುರಾತತ್ವ ವಿಭಾಗವು ಈಗ ಈ ಪ್ರದೇಶದಲ್ಲಿ ಉತ್ಖನನ ಆರಂಭಿಸಿದೆ. ಈ ಬಾವಿ ಸಂಭಲ್ ನ ಸಾರ್ಥಲ ಚೌಕಿ ಹತ್ತಿರವಿದ್ದು ಈ ಬಾವಿಯಲ್ಲಿ ಸ್ನಾನ ಮಾಡಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಜನರ ನಂಬಿಕೆಯಾಗಿತ್ತು. ಶಾಹಿ ಜಾಮಾ ಮಸೀದಿಯಿಂದ ಕೇವಲ 150 ಮೀಟರ್ ಅಂತರದಲ್ಲಿ ಈ ಬಾವಿ ಇದೆ. ಸಂಭಲ್ ನಲ್ಲಿ 24 ಕೋಸಿ ತಿರುವು ಮಾರ್ಗದಲ್ಲಿ ಬರುವ 68 ದೇಗುಲಗಳು ಮತ್ತು 19 ಬಾವಿಗಳನ್ನು ಪುರಾತತ್ವ ಇಲಾಖೆ ಹುಡುಕುತ್ತಿದೆ. ಇಲ್ಲಿಯವರೆಗೆ 22 ಬಾವಿಗಳು ಪತ್ತೆಯಾಗಿವೆ. ಪತ್ತೆಯಾದ ವಾಸ್ತುಗಳನ್ನು ಪುನರುಜ್ಜೀವನಗೊಳಿಸಲಾಗುವುದು.
1985ರಲ್ಲಿ ಬರೆಯಲಾದ ಪುಸ್ತಕದಲ್ಲಿಯೂ ಕೂಡ ಈ ಬಾವಿಯ ಉಲ್ಲೇಖವಿದೆ. ಸಂಭಲ್ ತಿರುವು ಮತ್ತು ಅದರ ತೀರ್ಥಕ್ಷೇತ್ರಗಳ ಬಗ್ಗೆ ಈ ಪುಸ್ತಕದಲ್ಲಿ ಬರೆಯಲಾಗಿದೆ. ಈ ಪುಸ್ತಕದಲ್ಲಿ ‘ವಿಮಲ್ ಕೂಪ’ (ವಿಮಲ್ ಕೊಳ) ಮತ್ತು ಬಲಿ ಕೂಪ (ಬಲಿ ಕೊಳ) ಇತ್ಯಾದಿಗಳನ್ನು ಉಲ್ಲೇಖಿಸಲಾಗಿದೆ. ಈ ಬಾವಿಯನ್ನು ಒತ್ತುವರಿ ಮಾಡಲಾಗಿದೆ ಎಂದು ಸ್ಥಳೀಯ ಹಿಂದೂಗಳು ಆರೋಪಿಸಿದ್ದಾರೆ. ಆದರೆ ಮುಸ್ಲಿಮರು ಈ ಭೂಮಿಯ ಮೇಲೆ ಹಕ್ಕು ಸಾಧಿಸುತ್ತಿದ್ದಾರೆ. ಸಂಭಲ್ ನ ಕೆಲವು ಸ್ಥಳಗಳನ್ನು ಪುರಾತತ್ವ ಇಲಾಖೆಯು ಈಗಾಗಲೇ ಪರಿಶೀಲಿಸಿದೆ.
ನಾರಾಯಣಪುರ: ಕ್ರೈಸ್ತ ಧರ್ಮ ಸ್ವೀಕರಿಸಿದ ಆದಿವಾಸಿಗಳ ಗ್ರಾಮದಿಂದ ಬಹಿಷ್ಕಾರ
ಶ್ರೀರಾಮ ಮಂದಿರದ ದೇಣಿಗೆ (ಕಾಣಿಕೆ) ಹಣ ಕಳ್ಳತನದ ನಂತರ ಮಂದಿರದ ಸರಕಾರೀಕರಣ ಆಗುವ ಸಾಧ್ಯತೆ
ಶ್ರೀರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ ಯೋಗಿರಾಜ ಅವರ ಪ್ರತಿಕ್ರಿಯೆ!
“ದೋಷಿಗಳಿಗೆ ಕಠಿಣ ಶಿಕ್ಷೆಯಾಗಲೇಬೇಕು!” – ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ
‘ಜಗತ್ತಿನಾದ್ಯಂತ ತಂತ್ರಜ್ಞಾನ ಕ್ಷೇತ್ರವು ವೇಗವಾಗಿ ಮುನ್ನಡೆಯುತ್ತಿರುವಾಗ, ಸರಕಾರವು ‘ಐಐಟಿ’ (IIT) ಸಂಸ್ಥೆಗಳನ್ನು ಜ್ಯೋತಿಷ್ಯ, ಪುನರ್ಜನ್ಮ ಮುಂತಾದ ವಿಷಯಗಳ ಸಂಶೋಧನೆಯಲ್ಲಿ ತೊಡಗಿಸುತ್ತಿದೆ!’ (ಅಂತೆ)
ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ತಂದೆಯ ಹತ್ಯೆ ಮಾಡಿಸಿದ ಮಗನ ಬಂಧನ