
ನವದೆಹಲಿ : ಗಣರಾಜ್ಯೋತ್ಸವದಂದು ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಭಯೋತ್ಪಾದಕ ದಾಳಿ ನಡೆಸಲು ಪಿತೂರಿ ನಡೆಸಲಾಗಿದೆ ಎಂಬುದು ಇತ್ತೀಚೆಗೆ ಬೆಳಕಿಗೆ ಬಂದಿರುವಾಗ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳು ಅಯೋಧ್ಯೆಯ ಶ್ರೀರಾಮಜನ್ಮಭೂಮಿಯಲ್ಲಿ ನಡೆಯುತ್ತಿರುವ ಶ್ರೀರಾಮ ಮಂದಿರದ ನಿರ್ಮಾಣ ಸ್ಥಳದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿವೆ ಎಂಬುದು ಈಗ ಬೆಳಕಿಗೆ ಬಂದಿದೆ. ಅವರು ಇಲ್ಲಿ ಆತ್ಮಾಹುತಿ ದಾಳಿ ನಡೆಸಲು ಆಯೋಜಿಸಿದ್ದಾರೆ. ಜೈಶ್-ಎ-ಮೊಹಮ್ಮದ್ ಈ ಭಯೋತ್ಪಾದಕ ಸಂಘಟನೆಯು ಈ ಪಿತೂರಿಯನ್ನು ರೂಪಿಸಿದೆ. ಇದಕ್ಕಾಗಿ, ಆತ್ಮಾಹುತಿ ಭಯೋತ್ಪಾದಕರು ನೇಪಾಳದ ಮೂಲಕ ಅಯೋಧ್ಯೆಗೆ ಹೋಗುವ ಸಾಧ್ಯತೆಯಿದೆ. ರಾಮ ಮಂದಿರ ನಿರ್ಮಾಣ ಕಾರ್ಯ ಶೇ. ೫೦ ರಷ್ಟು ಪೂರ್ಣಗೊಂಡಿದೆ.
ಸಂಪಾದಕೀಯ ನಿಲುವು‘ಜಿಹಾದಿ ಭಯೋತ್ಪಾದನೆ ಯಾವಾಗ ಕೊನೆಗೊಳ್ಳುವುದು ?’, ಇದು ಅನೇಕ ವರ್ಷಗಳಿಂದ ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿ ಬರುವ ಪ್ರಶ್ನೆಯಾಗಿದೆ. ಈ ಸಮಸ್ಯೆಯನ್ನು ಪರಿಹರಿಸಲು ಭಾರತವು ಪಾಕಿಸ್ತಾನವನ್ನು ನಾಶಪಡಿಸುವುದರೊಂದಿಗೆ ದೇಶದಲ್ಲಿನ ಮತಾಂಧರ ಜಿಹಾದಿ ಮನಸ್ಥಿತಿಯನ್ನು ನಾಶಪಡಿಸಬೇಕಾಗಿದೆ. ಇದಕ್ಕಾಗಿ ಸರಕಾರ ಪ್ರಯತ್ನಿಸಬೇಕು! |
ಸ್ವಿಟ್ಜರ್ಲ್ಯಾಂಡ್ ನ ರೈಲ್ವೆ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬನಿಂದ ಚಾಕು ಇರಿತದ ಮೂಲಕ ಭಯೋತ್ಪಾದಕ ದಾಳಿ: 3 ಜನರಿಗೆ ಗಾಯ
ಪಾಕಿಸ್ತಾನಿ ನಾಯಕ ಇಸ್ರೇಲ್ ಜೊತೆ ಸಂಬಂಧ ಬೆಳೆಸಲು ಯತ್ನಿಸಿದರೆ, ಕೊಲೆ… !
ಭಯೋತ್ಪಾದನೆಗೆ ಸಹಾಯ ಮಾಡಿದ್ದಕ್ಕಾಗಿ ಪಾಕಿಸ್ತಾನ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ !
ಇರಾನ್ನ ‘ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್’ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ ಭಾರತವು ಕಠಿಣ ನಿರ್ಬಂಧಗಳನ್ನು ಹೇರಬೇಕು!
ಕಾಶ್ಮೀರದಲ್ಲಿ ಭಯೋತ್ಪಾದಕರ ಅಡ್ಡೆಯಾಗಿದ್ದ ಮದರಸಾದ ಮೇಲೆ ರಾಷ್ಟ್ರೀಯ ತನಿಖಾ ದಳದ ದಾಳಿ !
ತಮಿಳುನಾಡಿನ ಮುಖ್ಯಮಂತ್ರಿ ಜೋಸೆಫ್ ವಿಜಯ ಅವರಿಂದ ‘ಲಿಟ್ಟೆ’ ಮುಖ್ಯಸ್ಥ ಪ್ರಭಾಕರನ್ ಗೆ ಶ್ರದ್ಧಾಂಜಲಿ