ಮಹಾರಾಷ್ಟ್ರದ ಅರಣ್ಯ ವಿಭಾಗದಿಂದ ಇತರ ರಾಜ್ಯಗಳ ಸಲಹೆ ಕೇಳಿದೆ !

ಮುಂಬಯಿ – ಮಹಾರಾಷ್ಟ್ರದಲ್ಲಿ ಕಳೆದ ೬ ವರ್ಷಗಳಲ್ಲಿ ಹುಲಿ ಮತ್ತು ಚಿರತೆಗಳ ದಾಳಿಯಿಂದ ೩೩೫ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆದ್ದರಿಂದ ಮಾನವ ಮತ್ತು ಕಾಡುಪ್ರಾಣಿಗಳ ಸಂಘರ್ಷವನ್ನು ಕಡಿಮೆಗೊಳಿಸಲು ಮಹಾರಾಷ್ಟ್ರವು ದೇಶದ ಇತರ ರಾಜ್ಯಗಳ ಅರಣ್ಯ ವಿಭಾಗದಿಂದ ಸಲಹೆ ಕೇಳಿದೆ. ರಾಜ್ಯದಲ್ಲಿ ಸದ್ಯ ೬ ರಾಷ್ಟ್ರೀಯ ಉದ್ಯಾನಗಳು, ೫೦ ಅಭಯಾರಣ್ಯಗಳು, ೨೩ ಬೆಳವಣಿಗೆಗೆ ಮೀಸಲು ಹೀಗೆ ೭೯ ಸಂರಕ್ಷಿತ ಪ್ರದೇಶಗಳಿವೆ. ಅರಣ್ಯ ಕ್ಷೇತ್ರವು ವಿಸ್ತಾರವಾಗಿದೆ; ಆದರೆ ಜನಸಂಖ್ಯೆ ಹೆಚ್ಚಳವಾದಂತೆ ಅರಣ್ಯಗಳ ಅವಲಂಬನೆಯೂ ಹೆಚ್ಚಾಗಿದೆ. ಆದ್ದರಿಂದ ಚಂದ್ರಪುರ ಜಿಲ್ಲೆಯಲ್ಲಿ ಹುಲಿಗಳ ಸಹಿತ ಸಿಂಧುದುರ್ಗ, ಕೊಲ್ಲಾಪುರ, ಗಡಚಿರೋಲಿ ಮತ್ತು ಗೋಂದಿಯಾ ಈ ಜಿಲ್ಲೆಗಳಲ್ಲಿ ಆನೆಗಳೊಂದಿಗಿನ ಸಂಘರ್ಷ ಹೆಚ್ಚಾಗಿರುವುದು ರಾಜ್ಯದ ಅರಣ್ಯ ವಿಭಾಗಕ್ಕೆ ಅರಿವಾಗಿದೆ.
ಸಂಪಾದಕೀಯ ನಿಲುವುಕಾಡುಪ್ರಾಣಿಗಳನ್ನು ರಕ್ಷಿಸಬೇಕು ನಿಜ; ಆದರೆ ಅವುಗಳ ದಾಳಿಗಳಿಂದ ಜನರ ರಕ್ಷಣೆ ಕೂಡ ಆಗಬೇಕು, ಎಂಬುದೂ ಅಷ್ಟೇ ಮಹತ್ವದ್ದಾಗಿದೆ. ಇದಕ್ಕಾಗಿ ಜನರು ಅರಣ್ಯಗಳ ಮೇಲೆ ಅತಿಕ್ರಮಣ ಮಾಡದೇ ಪ್ರಾಣಿಗಳು ಜನವಸತಿಗೆ ಬರದಂತೆ ಅರಣ್ಯ ವಿಭಾಗದವರು ಗಮನಹರಿಸಬೇಕು ! |
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation
ಚೀನಾ ಸೈನ್ಯದಿಂದ ಅರುಣಾಚಲ ಪ್ರದೇಶಕ್ಕೆ ನುಸುಳಿ ಭೂಮಿ ಕಬಳಿಕೆ ! – ಆದಿವಾಸಿ ಸಮುದಾಯದ ದಾವೆ
ಪ್ರಾರ್ಥನೆ ಅಥವಾ ಮಂತ್ರಗಳನ್ನು ಹೇಳಲು ವಿದ್ಯಾರ್ಥಿಗಳು ಅಥವಾ ಪೋಷಕರ ಒಪ್ಪಿಗೆ ಅತ್ಯಗತ್ಯ! – IRS Nisha Oraon
ಪಾಕಿಸ್ತಾನಿ ಸೈನಿಕರಿಂದ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪೆಟ್ರೋಲ್ ಬಂಕ್ ಲೂಟಿ!
ಅಮೆರಿಕ ಮತ್ತು ಇರಾನ್ ನಡುವೆ ಪರಸ್ಪರರ ಮೇಲಿನ ದಾಳಿಗಳನ್ನು ನಿಲ್ಲಿಸಲು ಸಿದ್ಧತೆ : US-Iran War