ಗಿಡಗಳ ಉತ್ತಮ ಆರೋಗ್ಯಕ್ಕಾಗಿ ಫಲವತ್ತಾದ ಮಣ್ಣಿನ ಮಹತ್ವ
![](https://static.sanatanprabhat.org/wp-content/uploads/sites/5/2021/09/07234820/Sou.Raghavi-Konikar.jpg)
‘ಸದ್ಯ ಕೊರೊನಾದಿಂದ ರೋಗ ನಿರೋಧಕ ಶಕ್ತಿಯ ಮಹತ್ವವು ಎಲ್ಲರಗೂ ತಿಳಿದಿದೆ. ಹೇಗೆ ನಮ್ಮ ಶರೀರದಲ್ಲಿ ರೋಗವನ್ನು ಎದುರಿಸುವ ವ್ಯವಸ್ಥೆ ಇರುತ್ತದೆಯೋ, ಹಾಗೆಯೇ ನಿಸರ್ಗವು ಗಿಡಗಳಿಗೂ ಹುಟ್ಟಿದಾಗಿನಿಂದಲೇ ರೋಗ ನಿರೋಧಕ ಶಕ್ತಿಯನ್ನು ಕೊಟ್ಟಿರುತ್ತದೆ. ಹುಟ್ಟಿದಾಗಿನಿಂದಲೇ ಗಿಡಗಳಿಗಿರುವ ಈ ಪ್ರತಿಕಾರ ಶಕ್ತಿಯನ್ನು ಕಾರ್ಯ ನಿರತವಾಗಿಡುವ ಕೆಲಸವನ್ನು ಕಸಕಡ್ಡಿ, ಎಲೆ ಇತ್ಯಾದಿಗಳು ಕೊಳೆತು ತಯಾರಾದ ಫಲವತ್ತಾದ ಮಣ್ಣು (ಹ್ಯೂಮಸ) ಮಾಡುತ್ತದೆ. ಆದುದರಿಂದ ಗಿಡಗಳ ಸುತ್ತ ಈ ರೀತಿ ಫಲವತ್ತಾದ ಮಣ್ಣು ತಯಾರಾಗುತ್ತಿರುವ ತನಕ ಗಿಡಗಳಿಗೆ ರೋಗ ಬರುವ ಸಾಧ್ಯತೆ ಕಡಿಮೆಯಿರುತ್ತದೆ. ‘ಸುಭಾಷ ಪಾಳೇಕರ ಕೃಷಿ’ ಈ ಪದ್ದತಿಯಿಂದ ನೈಸರ್ಗಿಕ ಪದ್ಧತಿಯಲ್ಲಿ ಗಿಡಗಳನ್ನು ಬೆಳೆಸುವಾಗ ಗಿಡಗಳ ಅಕ್ಕಪಕ್ಕದಲ್ಲಿ ತಯಾರಾಗುವ ಫಲವತ್ತಾದ ಮಣ್ಣಿನ ನಿರ್ಮಿತಿಯ ಮಹತ್ವವು ಅನನ್ಯಸಾಧಾರಣವಾಗಿದೆ’.
– ಸೌ. ರಾಘವೀ ಕೋನೆಕರ, ಢವಳೀ, ಫೊಂಡಾ, ಗೋವಾ.