ದೇಶಕ್ಕೆ ಅವಮಾನ ಮಾಡುವವರು ದೇಶದಲ್ಲಿ ಇರಕೂಡದು !

ಅಬ್ದುಲ ಸಿದ್ದಿಕಿ

೧. ಹಲಾಲ ಪ್ರಮಾಣಪತ್ರವನ್ನು ದೇಶಾದ್ಯಂತ ನಿಷೇಧಿಸಬೇಕು !

ಕರ್ನಾಟಕ ಸರಕಾರ ಚಳಿಗಾಲ ಅಧಿವೇಶನದಲ್ಲಿ ಹಲಾಲ ಮಾಂಸವನ್ನು ನಿಷೇಧಿಸುವ ಮಸೂದೆಯನ್ನು ಮಂಡಿಸಲಿದೆ. ಈ ಮಸೂದೆಯಿಂದ ‘ಫುಡ್ ಸೇಫ್ಟಿ ಆಂಡ್ ಸ್ಟ್ಯಾಂಡರ್ಡ ಆಕ್ಟ್ ೨೦೦೬’ರಲ್ಲಿಯೂ ತಿದ್ದುಪಡಿ ಮಾಡಲಾಗುವುದು. ಇದರಿಂದ ಹಲಾಲ್ ಪ್ರಮಾಣಪತ್ರವನ್ನೂ ನಿಷೇಧಿಸಲಾಗುವುದು.

೨. ಇಂತಹ ಭ್ರಷ್ಟ ಪಕ್ಷಗಳನ್ನು ನಿಷೇಧಿಸಿರಿ !

ಸರಕಾರಿ ಹಣದಲ್ಲಿ ಪಕ್ಷದ ಪ್ರಚಾರ ಮಾಡಿದ್ದರಿಂದ ದೆಹಲಿಯ ಉಪರಾಜ್ಯಪಾಲ ವಿ.ಕೆ. ಸಕ್ಸೇನಾ ಇವರು ಆಮ ಆದ್ಮಿ ಪಕ್ಷದಿಂದ ೯೭ ಕೋಟಿ ರೂಪಾಯಿಗಳನ್ನು ವಸೂಲಿ ಮಾಡಲು ಆಡಳಿತಕ್ಕೆ ಆದೇಶ ನೀಡಿದ್ದಾರೆ. ಇದಕ್ಕಾಗಿ ಪಕ್ಷಕ್ಕೆ ೧೫ ದಿನಗಳ ಗಡವು ನೀಡಲಾಗಿದೆ.

೩. ಮತಾಂಧ ಕ್ರೈಸ್ತರ ಕಾನೂನುದ್ರೋಹವನ್ನು ತಿಳಿಯಿರಿ !

ಗುಜರಾತನ ಶಾಹುದಾ ಗ್ರಾಮದಲ್ಲಿ ಒಬ್ಬರೂ ಕ್ರೈಸ್ತರಿಲ್ಲದಿರುವಾಗ ಅಲ್ಲಿ ಅಕ್ರಮವಾಗಿ ಚರ್ಚ ಕಟ್ಟಲಾಗುತ್ತಿದ್ದು ಅದಕ್ಕೆ ಗ್ರಾಮಸ್ಥರು ವಿರೋಧಿಸಿದ್ದಾರೆ. ಈ ಕುರಿತು ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿಯಲ್ಲಿ ದೂರನ್ನು ದಾಖಲಿಸಿದ್ದಾರೆ.

೪. ಹಿಂದೂಗಳಿಗೆ ಸರಕಾರಿ ಶಾಲೆಯಲ್ಲಿ ಧರ್ಮಶಿಕ್ಷಣ ನೀಡಿರಿ !

ಬರೇಲಿಯ ಕಮಲಾ ನೆಹರು ಪೂರ್ವ ಮಾಧ್ಯಮಿಕ ವಿದ್ಯಾಲಯ ಈ ಸರಕಾರಿ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳಿಂದ ‘ಮೇರೆ ಅಲ್ಲಾ’ ಎಂಬ ಮದರಸಾದ ಪ್ರಾರ್ಥನೆಯನ್ನು ಮಾಡಿಸಿಕೊಳ್ಳಲಾಗುತ್ತಿದೆ ಎಂಬುದು ಬೆಳಕಿಗೆ ಬಂದ ನಂತರ ಶಾಲೆಯ ಮುಖ್ಯೋಪಾಧ್ಯಾಯ ನಾಹಿದ ಸಿದ್ಧಿಕಿ ಇವರನ್ನು ವಜಾಗೊಳಿಸಲಾಗಿದೆ.

೫. ದೇಶಕ್ಕೆ ಅವಮಾನ ಮಾಡುವವರು ದೇಶದಲ್ಲಿ ಇರಕೂಡದು !

ಭಾರತವು ಮುಸಲ್ಮಾನರು ವಾಸಿಸುವಂತಹ ದೇಶವಾಗಿ ಉಳಿದಿಲ್ಲ. ಆದ್ದರಿಂದ ನಾನು ವಿದೇಶದಲ್ಲಿ ಶಿಕ್ಷಣ ಪಡೆಯುತ್ತಿರುವ ನನ್ನ ಮಕ್ಕಳಿಗೆ ಅಲ್ಲಿಯೇ ನೌಕರಿ ಮಾಡಿ ಅಲ್ಲಿಯ ಪೌರತ್ವವನ್ನು ಸ್ವೀಕರಿಸಲು ಹೇಳಿದ್ದೇನೆ, ಎಂದು ರಾಷ್ಟ್ರೀಯ ಜನತಾ ದಳದ ನಾಯಕ ಅಬ್ದುಲ ಸಿದ್ದಿಕಿ ಇವರು ಹೇಳಿದ್ದಾರೆ.

೬. ಭಯೋತ್ಪಾದನೆಗೆ ಧರ್ಮ ಇರುತ್ತದೆ !

ಜಾರ್ಡನ್ ಈ ಇಸ್ಲಾಮಿಕ್ ದೇಶದ ‘ರ‍್ಯಾಬಿಟ್’ ಈ ಸಂಸ್ಥೆಯು ವರದಿ ಮಾಡಿರುವ ಜಗತ್ತಿನ ೫೦೦ ಪ್ರಭಾವಶಾಲಿ ಮುಸಲ್ಮಾನ ವ್ಯಕ್ತಿಗಳ ಪಟ್ಟಿಯಲ್ಲಿ ಜಿಹಾದಿ ಭಯೋತ್ಪಾದಕರಿಗೆ ಆದರ್ಶನಾಗಿರುವ ಝಾಕೀರ ನಾಯಿಕ್‌ನ ಹೆಸರನ್ನು ಸೇರಿಸಲಾಗಿದೆ.

೭. ಪಾದ್ರಿ ಅಥವಾ ಮೌಲ್ವಿಗಳಿಗೆ ಇಂತಹ ಬೆದರಿಕೆಗಳು ಬರುವುದಿಲ್ಲ !

ಓವೈಸಿ ಮತ್ತು ಮುಸಲ್ಮಾನರ ವಿರುದ್ಧ ಮಾತನಾಡಿದರೆ ನಿಮ್ಮ ಮೇಲೆ ಬಾಂಬ್ ಎಸೆಯುತ್ತೇವೆ ಎಂದು ಖ್ಯಾತ ಪ್ರವಚನಕಾರ ದೇವಕಿನಂದನ ಠಾಕೂರ್ ಮಹಾರಾಜರಿಗೆ ಬೆದರಿಕೆ ಒಡ್ಡಲಾಗಿದೆ. ‘ದಿನೇಶ್’ ಹೆಸರಿನಲ್ಲಿ ದುಬೈನಿಂದ ಬೆದರಿಕೆ ಒಡ್ಡಲಾಗಿದೆ.