ಸೆರೆಮನೆಯಲ್ಲಿದ್ದಾಗ ಪಂಡಿತ ನಾಥೂರಾಮ ಗೋಡ್ಸೆ ಅವರನ್ನು ಕ್ರೈಸ್ತನಾಗಿ ಮತಾಂತರಿಸುವ ಪ್ರಯತ್ನವಾಗಿತ್ತು !

ಕೇರಳದ ಭಾಜಪ ನಾಯಕ ಟಿ.ಜಿ. ಮೋಹನದಾಸ ಆರೋಪ

ಪಂಡಿತ ನಾಥೂರಾಮ ಗೋಡ್ಸೆ

ಪಂಡಿತ್ ನಾಥೂರಾಮ್ ಗೋಡ್ಸೆ ಇವರು ಸೆರೆಮನೆಯಲ್ಲಿದ್ದಾಗ ಅವರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರುಸಲು ಪ್ರಯತ್ನಿಸಲಾಗಿತ್ತು ಎಂದು ಕೇರಳ ಭಾಜಪ ನಾಯಕ ಟಿ.ಜಿ. ಮೋಹನದಾಸ್ ಹೇಳಿದ್ದಾರೆ. ದೆಹಲಿಯಲ್ಲಿರುವ ರಾಷ್ಟ್ರೀಯ ದಾಖಲೆಗಳಿಂದ (ಅರ್ಕೈವಲ್) ಅವರು ಈ ಮಾಹಿತಿ ಪಡೆದರು. ಇದಕ್ಕಾಗಿ ೧೧ ಸಾವಿರ ಕಾಗದಪತ್ರಗಳ ಅಧ್ಯಯನ ನಡೆಸಬೇಲಾಯಿತು’ ಎಂದ ಅವರು ಈ ಹಿನ್ನೆಲೆಯಲ್ಲಿ ದಾಖಲೆಯ ಛಾಯಾಚಿತ್ರವೊಂದನ್ನು ಪ್ರಸಾರ ಮಾಡಿದ್ದಾರೆ.

೧. ಮೋಹನದಾಸ್ ಅವರು ಪ್ರಸಾರ ಮಾಡಿದ ದಾಖಲೆಯು ಒಂದು ಪತ್ರವಾಗಿದೆ. ಈ ಪತ್ರವನ್ನು ಆಗಿನ ಪಾಕಿಸ್ತಾನದಲ್ಲಿರುವ ಭಾರತದ ರಾಯಭಾರಿ ವೈ.ಕೆ. ಪುರಿ ಅವರು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಪರ ಕಾರ್ಯದರ್ಶಿ ಪ್ರೇಮ್ ಕಿಶನ್ ಅವರಿಗೆ ಬರೆದಿದ್ದಾರೆ. ಈ ಪತ್ರವನ್ನು ೧೪ ಸೆಪ್ಟೆಂಬರ್ ೧೯೪೯ ರಂದು ಲಾಹೋರ್‌ನಿಂದ ಬರೆಯಲಾಗಿದೆ. ಅದರಲ್ಲಿ, “ಪ್ರಿಯ ಪ್ರೇಮ್ ಕಿಶನ್ ಜೀ, ನಾನು ೨ ಏರ್‌ಮೇಲ್‌ಗಳನ್ನು ಕಳುಹಿಸುತ್ತಿದ್ದೇನೆ. ಇದು ಕ್ರೈಸ್ತ ಧರ್ಮದ ಬಗ್ಗೆ ಉಪದೇಶಗಳನ್ನು ಒಳಗೊಂಡಿದೆ. ಈ ಉಪದೇಶವು ಗಾಂಧಿ ಹತ್ಯೆಯ ಆರೋಪಿಯಾಗಿರುವ ಶ್ರೀ. ನಾಥೂರಾಮ್ ಗೋಡ್ಸೆ ಮತ್ತು ನಾರಾಯಣ ಆಪ್ಟೆ ಇವರಿಗಾಗಿ ಬ್ರಿಟನ್‌ನಿಂದ ಬಂದಿದೆ”, ಎಂದಿದೆ.

೨. ಬ್ರಿಟನ್‌ನಿಂದ ಕಳುಹಿಸಲಾದ ಮೂಲ ಪತ್ರ ಲಭ್ಯವಿಲ್ಲ. ಈ ಪತ್ರವನ್ನು ನಾಥೂರಾಮ್ ಗೋಡ್ಸೆಗೆ ನೀಡಲಾಗಿದೆಯೇ? ಅದಕ್ಕೆ ಗೋಡ್ಸೆಯ ಪ್ರತಿಕ್ರಿಯೆ ಹೇಗಿತ್ತು? ಈ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ, ಎಂದು ಮೋಹನದಾಸ್ ಹೇಳಿದ್ದಾರೆ.