‘ಚಿಕ್ಕಮಗಳೂರಿನ ದತ್ತಪೀಠದಲ್ಲಿನ ಇಬ್ಬರು ಹಿಂದೂ ಅರ್ಚಕರ ನೇಮಕ ರದ್ದು ಮಾಡಬೇಕು (ಅಂತೆ) !’

ಕೋಮು ಸೌಹಾರ್ದ ವೇದಿಕೆಯ ಕಾರ್ಯದರ್ಶಿ ಗೌಸ್ ಮೊಹಿಯುದ್ದೀನ್ ಅವರ ಹಿಂದೂದ್ವೇಷಿ ಆಗ್ರಹ

ದತ್ತಪೀಠವು ಹಿಂದೂಗಳ ಸ್ಥಾನವಾಗಿದ್ದು, ಮುಸಲ್ಮಾನರು ಅದನ್ನು ಕಬಳಿಸಲು ಪ್ರಯತ್ನಿಸುತ್ತಿದ್ದಾರೆ. ಈಗ ರಾಜ್ಯದಲ್ಲಿ ಭಾಜಪ ಸರಕಾರ ಅಧಿಕೃತವಾಗಿ ಹಿಂದೂಗಳ ಹಿಡಿತಕ್ಕೆ ತರಲು ಪ್ರಯತ್ನಿಸಬೇಕೇಂದು ಹಿಂದೂಗಳು ನಿರೀಕ್ಷಿಸುತ್ತಾರೆ !

ಬೆಂಗಳೂರು – ಚಿಕ್ಕಮಗಳೂರಿನ ದತ್ತಪೀಠಕ್ಕೆ ನೇಮಕಗೊಂಡಿರುವ ಇಬ್ಬರು ಹಿಂದೂ ಅರ್ಚಕರನ್ನು ವಾಪಸ್ ಕಳುಹಿಸುವಂತೆ ಕೋಮು ಸೌಹಾರ್ದ ವೇದಿಕೆಯ ಗೌಸ್ ಮೊಹಿಯುದ್ದೀನ್ ಚಿಕ್ಕಮಗಳೂರು ಆಡಳಿತವನ್ನು ಒತ್ತಾಯಿಸಿದ್ದಾರೆ. ೩ ದಿನಗಳ ದತ್ತ ಜಯಂತಿ ಆಚರಣೆ ನಿಮಿತ್ತ ಇವರಿಬ್ಬರನ್ನೂ ತಾತ್ಕಾಲಿಕವಾಗಿ ನೇಮಕ ಮಾಡಲಾಗಿದೆ. ಹಬ್ಬದ ನಂತರವೂ ಪೂಜಾ ಕಾರ್ಯವನ್ನು ಮುಂದುವರೆಸಿದ್ದಾರೆ, ಎಂದಿದ್ದಾರೆ.

ಗೌಸ್ ಮೊಹಿಯುದ್ದೀನ್ ಮುಂದುವರಿದು, ‘ಗುಹೆಯಲ್ಲಿರುವ ದೇವಾಲಯವನ್ನು ಅಪವಿತ್ರಗೊಳಿಸಲಾಗುತ್ತದೆ ಎಂದು ಮುಸ್ಲಿಂ ಅರ್ಚಕರನ್ನು ಅಲ್ಲಿಂದ ತೆಗೆದುಹಾಕಲಾಯಿತು. ಇದು ಅವರ ಅವಮಾನವಾಗಿದೆ’, ಎಂದಿದ್ದಾರೆ (ಇದರಲ್ಲಿ ಅವಮಾನ ಮಾಡುವಂತಹದ್ದೇನಿದೆ ? ಮುಸಲ್ಮಾನರು ಗೋಮಾಂಸ ತಿನ್ನುತ್ತಾರೆ. ಅದು ಹಿಂದೂಗಳಿಗೆ ಪಾಪ ಕೃತ್ಯವಾಗಿದೆ. ಹೀಗಿರುವಾಗ ‘ಇದರಿಂದ ದೇವಸ್ಥಾನ ಅಪವಿತ್ರವಾಗುತ್ತದೆ’ ಎಂದು ಹಿಂದೂಗಳು ಭಾವಿಸಿದರೆ ಅದರಲ್ಲಿ ತಪ್ಪೇನಿದೆ ? – ಸಂಪಾದಕರು)

ದತ್ತಪೀಠದ ಮಾರ್ಗದಲ್ಲಿ ಮೊಳೆಗಳನ್ನು ಸುರಿದ ಇಬ್ಬರು ಮತಾಂಧರ ಬಂಧನ !

ದತ್ತಪೀಠದಲ್ಲಿ ಈಗಾಗಲೇ ಮತಾಂಧರು ಅತಿಕ್ರಮಣ ಮಾಡಿದ್ದಾರೆ; ಆದರೆ ಈಗ ಹಿಂದೂಗಳು ಅಲ್ಲಿಗೆ ಹೋಗದಿರಲು ಮತಾಂಧರು ಎಂತಹ ಕುಕೃತ್ಯಗಳನ್ನು ಮಾಡುತ್ತಿದ್ದಾರೆ, ಎಂಬುದು ಇದರಿಂದ ಗಮನಕ್ಕೆ ಬರುತ್ತದೆ !

ಚಿಕ್ಕಮಗಳೂರು : ‘ದತ್ತಜಯಂತಿ’ಯ ಸಮಯದಲ್ಲಿ ದತ್ತಪೀಠದ ಕಡೆಗೆ ಹೋಗುವ ಮಾರ್ಗದಲ್ಲಿ ಅಪಘಾತಗಳಾಗಬೇಕು, ಎಂಬ ಉದ್ದೇಶದಿಂದ ಅಪಾಯಕಾರಿ ಅಪಘಾತಗಳು ನಡೆಯುವ ತಿರುವುಗಳಲ್ಲಿ ಮೊಳೆಗಳನ್ನು ಹಾಕಿರುವ ಇಬ್ಬರು ಮತಾಂಧರನ್ನು ಬಂಧಿಸಲಾಗಿದೆ. ‘ಪರಾರಿಯಾದ ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಲಾಗುವುದು’, ಎಂದು ಪೊಲೀಸರು ಹೇಳಿದ್ದಾರೆ. ಈ ಘಟನೆಯ ಮಾಹಿತಿ ನೀಡುವಾಗ ಜಿಲ್ಲಾ ಪೊಲೀಸ ಅಧೀಕ್ಷಕರಾದ ಉಮಾ ಪ್ರಶಾಂತರವರು ಮಾತನಾಡತ್ತಾ, ‘ಈ ಸಂದರ್ಭದಲ್ಲಿ ಪೊಲೀಸ್ ಠಾಣೆಯಲ್ಲಿ ದೂರನ್ನು ನೋಂದಾಯಿಸಿದ ನಂತರ ಪ್ರಕರಣದ ತನಿಖೆಗಾಗಿ ಸ್ವತಂತ್ರ ದಳವನ್ನು ರಚಿಸಲಾಯಿತು’, ಎಂದರು