ದತ್ತನ ತ್ರಿಮುಖಿ ಮೂರ್ತಿಯ ಕೈಯಲ್ಲಿರುವ ‘ಕಮಂಡಲ’

೧. ಅರ್ಥ

ಈಶ್ವರನ ನಿರ್ಗುಣ ಲಹರಿಗಳನ್ನು ಸಮಾವೇಶಗೊಳಿಸಿಕೊಳ್ಳುವ ಹಾಗೂ ಕೆಟ್ಟ ಶಕ್ತಿಗಳ ತೊಂದರೆಗಳಿಂದ ರಕ್ಷಣೆಯಾಗಲು ಸಂಪೂರ್ಣ ತ್ರಿಲೋಕಕ್ಕೆ ಒಂದೇ ಸಮಯದಲ್ಲಿ ಒಂದೇ ಕ್ಷಣದಲ್ಲಿ ಮಂಡಲವನ್ನು ಹಾಕುವ ಕ್ಷಮತೆಯುಳ್ಳ ಜಲವು ಯಾವ ಕುಂಡದಲ್ಲಿದೆಯೋ, ಅಂತಹ ಕುಂಡವೆಂದರೆ ಕಮಂಡಲ. – ಓರ್ವ ವಿದ್ವಾಂಸ (ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಮಾಧ್ಯಮದಿಂದ, ೮.೫.೨೦೦೫, ಬೆಳಗ್ಗೆ ೧೧.೩೯)

೨. ವೈಶಿಷ್ಟ್ಯ

ದತ್ತನ ಕೈಯಲ್ಲಿರುವ ಕಮಂಡಲದಲ್ಲಿನ ಜಲವು ಅತ್ಯಂತ ಪವಿತ್ರವಾಗಿದೆ. – ಕು. ಮಧುರಾ ಭೋಸಲೆ

೩. ಯಾವುದರ ಪ್ರತೀಕ ?

೧. ‘ಕಮಂಡಲ ಮತ್ತು ದಂಡ ಈ ವಸ್ತುಗಳು ಸಂನ್ಯಾಸಿಯ ಜೊತೆಗೆ ಇರುತ್ತವೆ. ಸಂನ್ಯಾಸಿಯು ವಿರಕ್ತನಾಗಿರುತ್ತಾನೆ. ಕಮಂಡಲವು ಒಂದು ರೀತಿಯಲ್ಲಿ ತ್ಯಾಗದ ಪ್ರತೀಕವಾಗಿದೆ; ಏಕೆಂದರೆ ಕಮಂಡಲವೇ ಅವನ ಐಹಿಕ ಧನವಾಗಿರುತ್ತದೆ.’

೨. ದತ್ತನ ಕೈಯಲ್ಲಿರುವ ಕಮಂಡಲವು ನಿರ್ಗುಣ ರೂಪಿ ಸುಪ್ತ ಮಾರಕ ಚೈತನ್ಯದ ಪ್ರತೀಕವಾಗಿದೆ.

೪. ಕಮಂಡಲದ ದಿಕ್ಕಿನಂತೆ ಅದರ ಕಾರ್ಯ

೧. ಕಮಂಡಲವು ಯಾವ ದಿಕ್ಕಿಗೆ ಬಾಗುತ್ತದೆಯೋ, ಆಯಾ ದಿಕ್ಕುಗಳಲ್ಲಿರುವ ಕೆಟ್ಟ ಶಕ್ತಿಗಳ ಸಂಹಾರ : ದತ್ತನ ಕೈಯಲ್ಲಿರುವ ಕಮಂಡಲವು ಅವಶ್ಯಕತೆಗನುಸಾರ ಕೆಟ್ಟ ಶಕ್ತಿಗಳ ನಾಶಕ್ಕಾಗಿ ಬಾಗಿರುವ ಅವಸ್ಥೆಯಲ್ಲಿ, ಹತ್ತೂ ದಿಕ್ಕುಗಳಲ್ಲಿ ಸಂಚರಿಸಿ, ಆಯಾ ಸ್ಥಳಗಳಲ್ಲಿ ನಿರ್ಗುಣ ರೂಪಿ ಮಾರಕ ಚೈತನ್ಯದ ಪ್ರವಾಹೀ ಧಾರೆಯನ್ನು ಪ್ರಕ್ಷೇಪಿಸುತ್ತದೆ.

೨. ಪಾತಾಳದ ದಿಕ್ಕಿನತ್ತ ಮಗುಚಿ ಪಾತಾಳದಲ್ಲಿನ ಕೆಟ್ಟ ಶಕ್ತಿಗಳ ಸಂಹಾರ : ವಿನಾಶದ ಕಾಲದಲ್ಲಿ ಕಮಂಡಲವು ಪೂರ್ಣ ಪಾತಾಳದ ದಿಕ್ಕಿನತ್ತ ಮಗುಚಿ ಪಾತಾಳದಲ್ಲಿನ ಎಲ್ಲ ಪ್ರಕಾರದ ಕೆಟ್ಟ ಶಕ್ತಿಗಳನ್ನು ಸಂಹರಿಸಿ ಶಿವನ ಲಯಶಕ್ತಿಗೆ ಸಹಾಯ ಮಾಡುತ್ತದೆ.

೩. ಆಕಾಶದ ದಿಕ್ಕಿನತ್ತ ಸ್ಥಿರವಾಗಿ ಬ್ರಹ್ಮಾಂಡದ ಸಮತೋಲನ ಅವಸ್ಥೆ : ಕಮಂಡಲದ ಆಕಾಶದ ದಿಕ್ಕಿನಲ್ಲಿರುವ ಸ್ಥಿರಸ್ಥಿತಿಯು ಬ್ರಹ್ಮಾಂಡದಲ್ಲಿನ ಸಮತೋಲನ ಅವಸ್ಥೆಯನ್ನು ತೋರಿಸುತ್ತದೆ.

– ಓರ್ವ ವಿದ್ವಾಂಸ (ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ‘ಓರ್ವ ವಿದ್ವಾಂಸ’ ಎಂಬ ಅಂಕಿತನಾಮದಿಂದ ಲೇಖನ ಬರೆಯುತ್ತಾರೆ)

ಪೂರ್ವಜರ ತೊಂದರೆಯಿಂದ ರಕ್ಷಣೆ ಮಾಡುವ ದೇವತೆ !

 

ದತ್ತ

  • ದತ್ತ ಗುರುತತ್ತ್ವದ ಪ್ರತೀಕ ಎಂದು ಏಕೆ ಹೇಳುತ್ತಾರೆ ?
  • ದತ್ತಗುರುಗಳ ಕಾರ್ಯ ಮತ್ತು ವೈಶಿಷ್ಟ್ಯಗಳು ಯಾವವು ?
  • ಅಂತಿಮ ಯಾತ್ರೆಯಲ್ಲಿ ಸಾಗುವಾಗ ದತ್ತನ ನಾಮಜಪ ಏಕೆ ಮಾಡಬೇಕು ?

ಕಿರುಗ್ರಂಥ : ದತ್ತ (ಶಾಸ್ತ್ರೀಯ ವಿವೇಚನೆ ಮತ್ತು ಉಪಾಸನೆ)

ದತ್ತ ತತ್ತ್ವದ ಅನುಭೂತಿ ನೀಡುವ ಸನಾತನದ ಉತ್ಪಾದನೆ !

ಶ್ರೀ ದತ್ತನ ಸಾತ್ವಿಕ ಚಿತ್ರ, ನಾಮಪಟ್ಟಿ ಮತ್ತು ಲಾಕೆಟ್ ಲಭ್ಯ !

ಸಂಚಾರಿವಾಣಿ ಸಂಖ್ಯೆ : ೯೩೭೯೭೭೧೭೭೧

ಸನಾತನದ ಗ್ರಂಥ ಸಂಪತ್ತು ಈಗ SanatanShop.com ದಲ್ಲಿ ಲಭ್ಯ