ದೇವಸ್ಥಾನಗಳನ್ನು ಸಾಮೂಹಿಕ ಉಪಾಸನೆಯ ಕೇಂದ್ರಗಳನ್ನಾಗಿಸಿ !
* ನಮ್ಮ ಸಮೀಪದ ದೇವಸ್ಥಾನ ಗಳಲ್ಲಿ ಪ್ರತಿದಿನ ಆರತಿ, ಪ್ರಾರ್ಥನೆ ಅಥವಾ ನಾಮಜಪ ಮಾಡಲು ಒಟ್ಟುಸೇರಿ !
* ದೇವಸ್ಥಾನಗಳಲ್ಲಿ ಹಿಂದೂಗಳಿಗೆ ‘ಧರ್ಮಶಿಕ್ಷಣವರ್ಗ’ ಮತ್ತು ‘ಬಾಲಸಂಸ್ಕಾರ ವರ್ಗ’ವನ್ನು ಪ್ರಾರಂಭಿಸಿ !
* ಸಂಸ್ಕ್ರತಪಠಣ, ಯೋಗಾಸನಗಳಂತಹ ಸಂಸ್ಕ್ರತಿಯನ್ನು ಕಾಪಾಡುವ ಉಪಕ್ರಮವನ್ನು ನಡೆಸಲು ಯೋಗದಾನ ನೀಡಿ !
* ವಾರಕ್ಕೊಮ್ಮೆಯಾದರೂ ದೇವಸ್ಥಾನದ ಸಾಮೂಹಿಕ ಸ್ವಚ್ಛತೆ ಮಾಡಿ !
ದೇವಸ್ಥಾನದಲ್ಲಿ ಪ್ರದಕ್ಷಿಣೆಗಳನ್ನು ಹೇಗೆ ಹಾಕಬೇಕು ?
* ಪ್ರದಕ್ಷಿಣೆಗಳನ್ನು ಹಾಕುವ ಮೊದಲು ದೇವರಿಗೆ ಪ್ರಾರ್ಥನೆ ಮಾಡಬೇಕು.
* ಎರಡೂ ಕೈಗಳನ್ನು ಜೋಡಿಸಿ ಭಾವಪೂರ್ಣ ನಾಮಜಪವನ್ನು ಮಾಡುತ್ತಾ ಮಧ್ಯಮ ಗತಿಯಲ್ಲಿ ಪ್ರದಕ್ಷಿಣೆಗಳನ್ನು ಹಾಕಬೇಕು. ಪ್ರದಕ್ಷಿಣೆಗಳನ್ನು ಹಾಕುವಾಗ ಗರ್ಭಗುಡಿಯನ್ನು (ಅಥವಾ ದೇವಸ್ಥಾನವನ್ನು) ಸ್ಪರ್ಶಿಸಬಾರದು.
* ಪ್ರದಕ್ಷಿಣೆಗಳನ್ನು ಹಾಕುವಾಗ ದೇವರ ಹಿಂದಿನ ಬದಿಗೆ ಬಂದ ಮೇಲೆ ನಿಂತು ದೇವರಿಗೆ ನಮಸ್ಕಾರ ಮಾಡಿಯೇ ಮುಂದೆ ಹೋಗಬೇಕು.
ದೇವರ ದರ್ಶನವನ್ನು ಹೇಗೆ ಪಡೆಯಬೇಕು ?

* ದೇವಸ್ಥಾನದಲ್ಲಿ ಘಂಟೆಯನ್ನು ಮೆಲುಧ್ವನಿಯಲ್ಲಿ ಬಾರಿಸಬೇಕು.
* ದೇವರ ಮೂರ್ತಿಯ ಎದುರಿ ನಲ್ಲಿರುವ ಆಮೆಯ (ಶಿವನ ದೇವಸ್ಥಾನದಲ್ಲಿ ನಂದಿಯ) ಬದಿಯಲ್ಲಿ ನಿಂತುಕೊಂಡು ಕೈಗಳನ್ನು ಜೋಡಿಸಿ ದರ್ಶನವನ್ನು ಪಡೆದುಕೊಳ್ಳಬೇಕು.
* ಮೊದಲು ದೇವರ ಚರಣಗಳಲ್ಲಿ ದೃಷ್ಟಿಯನ್ನಿಟ್ಟು ಲೀನರಾಗಬೇಕು, ಅನಂತರ ದೇವರ ಎದೆಯ ಮೇಲೆ ಮನಸ್ಸನ್ನು ಏಕಾಗ್ರಗೊಳಿಸಬೇಕು ಮತ್ತು ಕೊನೆಗೆ ದೇವರ ಕಣ್ಣುಗಳತ್ತ ನೋಡಿ ಅವರ ರೂಪವನ್ನು ಕಣ್ಣುಗಳಲ್ಲಿ ತುಂಬಿಕೊಳ್ಳಬೇಕು.

ಕೇಂದ್ರ ಸರಕಾರದಿಂದ ‘ಟೆಂಪಲ್ ಬಾಂಡ್ಸ್’ ಯೋಜನೆ ಜಾರಿ !
ದೇವಸ್ಥಾನಗಳಲ್ಲಿನ ‘ವಿಐಪಿ ದರ್ಶನ’ದ ಕುರಿತು ಮದ್ರಾಸ್ ಉಚ್ಚ ನ್ಯಾಯಾಲಯದ ತೀವ್ರ ಅಸಮಾಧಾನ
ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಭದ್ರತೆಯ ಯಾವುದೇ ಲೋಪವಿಲ್ಲ, ಆಭರಣಗಳೂ ಸುರಕ್ಷಿತವಾಗಿವೆ! – ದೇವಸ್ಥಾನದ ಆಡಳಿತ ಮಂಡಳಿಯ ಸ್ಪಷ್ಟೀಕರಣ : Padmanabhaswamy Temple
ಕೇರಳಮ್ನ ಪ್ರಸಿದ್ಧ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳು ನಾಪತ್ತೆ ! : Temple Gold Theft
ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ದೇವಾಲಯದ ಅರ್ಚಕರ ವಿರುದ್ಧ ಪೋಕ್ಸೊ ಮತ್ತು ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾದ ನಂತರ ಬ್ರಾಹ್ಮಣ ಸಮುದಾಯದಿಂದ ಪ್ರತಿಭಟನೆ
Ranveer Singh : ನಟ ರಣವೀರ್ ಸಿಂಗ್ ಅವರಿಂದ ಮೈಸೂರಿನ ಚಾಮುಂಡಿ ದೇವಸ್ಥಾನಕ್ಕೆ ಭೇಟಿ ನೀಡಿ ಕ್ಷಮೆಯಾಚನೆ !