ದತ್ತನಿಗೆ ಸಂಬಂಧಿಸಿದ ಪ್ರಮುಖ ತೀರ್ಥಕ್ಷೇತ್ರಗಳು ಮತ್ತು ಅವುಗಳ ವೈಶಿಷ್ಟ್ಯಗಳು

೧. ಮಾಹೂರ : ಕಿನವಟ ತಾಲ್ಲೂಕು, ನಾಂದೇಡ ಜಿಲ್ಲೆ, ಮಹಾರಾಷ್ಟ್ರ.

೨. ಗಿರನಾರ : ಜುನಾಗಡದ ಹತ್ತಿರ, ಸೌರಾಷ್ಟ್ರ. ಇದಕ್ಕೆ ೧೦,೦೦೦ ಮೆಟ್ಟಿಲುಗಳಿವೆ.

೩. ಕಾರಂಜಾ : ಶ್ರೀ ನೃಸಿಂಹ ಸರಸ್ವತಿಗಳ ಜನ್ಮಸ್ಥಾನ. ಲಾಡ-ಕಾರಂಜೆ ಇದು ಇದರ ಇನ್ನೊಂದು ಹೆಸರಾಗಿದೆ. ಕಾಶಿಯ ಬ್ರಹ್ಮಾನಂದ ಸರಸ್ವತಿಯವರು ಈ ಸ್ಥಳದಲ್ಲಿ ಮೊತ್ತಮೊದಲು ದತ್ತಮಂದಿರವನ್ನು ಸ್ಥಾಪಿಸಿದರು.

೪. ಔದುಂಬರ : ಶ್ರೀ ನೃಸಿಂಹ ಸರಸ್ವತಿಯವರು ಇಲ್ಲಿ ಚಾತುರ್ಮಾಸಕ್ಕಾಗಿ ಉಳಿದುಕೊಂಡಿದ್ದರು. ಈ ಸ್ಥಳವು ಮಹಾರಾಷ್ಟ್ರದ ಭಿಲವಡಿಯಿಂದ ೧೦ ಕಿ.ಮೀ. ಅಂತರದಲ್ಲಿ ಕೃಷ್ಣಾ ನದಿತೀರದಲ್ಲಿದೆ.

೫. ನರಸೋಬಾ ವಾಡಿ, ಕೊಲ್ಹಾಪೂರ ಜಿಲ್ಲೆ, ಮಹಾರಾಷ್ಟ್ರ

೫ ಅ. ಸ್ಥಾನಮಹಾತ್ಮೆ : ಎರಡನೇ ದತ್ತಾವತಾರಿಯಾದ ಶ್ರೀ ನೃಸಿಂಹ ಸರಸ್ವತಿಯವರು ಇಲ್ಲಿ ಹನ್ನೆರಡು ವರ್ಷಗಳ ಕಾಲ ವಾಸ್ತವ್ಯಕ್ಕಿದ್ದರು. ಇಲ್ಲಿ ಅಷ್ಟತೀರ್ಥಗಳು ಮತ್ತು ದತ್ತಪರಂಪರೆಯ ಏಳು ಸಂತರ ಸಮಾಧಿಗಳಿವೆ. ಇಲ್ಲಿ ಕೃಷ್ಣಾ ಮತ್ತು ಪಂಚಗಂಗಾ ನದಿಗಳ ಸಂಗಮವಿದೆ. ಇದು ಟೇಂಬೇಸ್ವಾಮಿಗಳ ಪ್ರೇರಣಾಸ್ಥಾನವಾಗಿದೆ.

೫ ಆ. ಆಧ್ಯಾತ್ಮಿಕ ಮಹತ್ವ : ಇಲ್ಲಿ ಶ್ರಾದ್ಧಾದಿವಿಧಿಗಳನ್ನು ಮಾಡುವುದರಿಂದ ಪಿತೃಗಳಿಗೆ ಸದ್ಗತಿ ಸಿಗುತ್ತದೆ.

೬. ಗಾಣಗಾಪುರ : ಇದು ಕರ್ನಾಟಕದಲ್ಲಿ ಪುಣೆ-ರಾಯಚೂರು ಮಾರ್ಗದಲ್ಲಿದೆ. ಇಲ್ಲಿ ಭೀಮಾ ಮತ್ತು ಅಮರಜಾ ನದಿಗಳ ಸಂಗಮವಿದೆ. ಇಲ್ಲಿ ಶ್ರೀ ನೃಸಿಂಹ ಸರಸ್ವತಿಯವರು ೨೩ ವರ್ಷಗಳ ಕಾಲ ವಾಸ ಮಾಡಿದರು ಮತ್ತು ಇಲ್ಲಿಯೇ ಎಲ್ಲ ಕಾರ್ಯಗಳನ್ನು ಮಾಡಿದರು. ಇಲ್ಲಿಂದಲೇ ಅವರು ಶ್ರೀಶೈಲಕ್ಕೆ ಪ್ರಯಾಣ ಮಾಡಿದರು.

೭. ಕುರವಪುರ : ಕರ್ನಾಟಕ. ರಾಯಚೂರಿನಿಂದ ಗಾಡಿಯಲ್ಲಿ ಪಲ್ಲದಿನಿಯ ವರೆಗೆ (ಕುರಗುಡ್ಡಿ) ಹೋಗಬಹುದು.ಮುಂದೆ ಕೃಷ್ಣೆಯ ನೀರಿನಲ್ಲಿ ಈ ದ್ವೀಪವಿದೆ. ಇದು ಶ್ರೀಪಾದ ಶ್ರೀವಲ್ಲಭರ ಕಾರ್ಯಸ್ಥಾನವಾಗಿದೆ.

೮. ಪೀಠಾಪುರ : ಆಂಧ್ರಪ್ರದೇಶ. ಶ್ರೀಪಾದ ಶ್ರೀವಲ್ಲಭರ ಜನ್ಮಸ್ಥಾನ. ಟೇಂಬೇ ಸ್ವಾಮಿಯವರು ಅದನ್ನು ಬೆಳಕಿಗೆ ತಂದರು.

೯. ವಾರಾಣಸಿ : ಇಲ್ಲಿ ನಾರದಘಾಟ್‌ನಲ್ಲಿ ದತ್ತಾತ್ರೇಯರ ಮಠವಿದೆ. ಇಲ್ಲಿ ಶ್ರೀ ನೃಸಿಂಹ ಸರಸ್ವತಿಯವರ ವಂಶಜರು ಇಂದಿಗೂ ಇದ್ದಾರೆ. ಅವರ ಅಡ್ಡಹೆಸರು ಕಾಳೆಯಾಗಿದೆ. ಮುಂದೆ ಕಾಳೆ ಎಂಬುದು ಕಾಲಿಯಾ ಆಗಿ ಅಪಭ್ರಂಶವಾಯಿತು. ಕಾಲಿಯಾ ಹೆಸರಿನ ತೋಟ ಹಾಗೂ ಬೀದಿ ಇಂದಿಗೂ ಅಲ್ಲಿ ಇವೆ.

೧೦. ಶ್ರೀಶೈಲ : ಹೈದರಾಬಾದ್‌ದ ಹತ್ತಿರವಿದೆ. ಶ್ರೀ ನೃಸಿಂಹ ಸರಸ್ವತಿಯವರು ಇಲ್ಲಿ ಪ್ರಸ್ಥಾನ ಮಾಡಿದರು.

೧೧. ಭಟ್ಟಗಾವ (ಭಡಗಾವ) : ಇದು ಕಾಠ್ಮಂಡುವಿನಿಂದ (ನೇಪಾಳ) ೩೫ಕಿ.ಮೀ. ಅಂತರದಲ್ಲಿದೆ.

೧೨. ಪಾಂಚಾಳೇಶ್ವರ : ಬೀಡ ಜಿಲ್ಲೆ, ಮಹಾರಾಷ್ಟ್ರ.