‘ಲವ್ ಜಿಹಾದ್ ನ ಅಪಾಯವನ್ನು ತಿಳಿಯಿರಿ !

ಫಲಕ ಪ್ರಸಿದ್ಧಿಗಾಗಿ

೧. ‘ಲವ್ ಜಿಹಾದ್ ನ ಅಪಾಯವನ್ನು ತಿಳಿಯಿರಿ !

ಕರೀಮನಗರದಲ್ಲಿ (ತೆಲಂಗಾಣ) ವಿಶ್ವ ಹಿಂದೂ ಪರಿಷತ್ತಿನ ವಿರೋಧದ ನಂತರ, ‘ಮುಸ್ಲಿಮೇತರ ಯುವಕರು ಮತ್ತು ಮಹಿಳೆಯರ ಬೃಹತ್ ಸಮಾವೇಶವನ್ನು ನಡೆಸಲು ‘ಜಮಾತ್-ಎ-ಇಸ್ಲಾಮಿ ಹಿಂದ್ ಗೆ ಪೊಲೀಸರು ಅನುಮತಿ ನಿರಾಕರಿಸಿದರು.

೨. ಈಗ ನೇಪಾಳದಲ್ಲಿಯೂ ಹಿಂದೂಗಳ ಮೇಲೆ ಮತಾಂಧರಿಂದ ದಾಳಿ !

ನೇಪಾಳದ ಮಹೋತ್ತರಿ ಜಿಲ್ಲೆಯಲ್ಲಿ ಮುಸಲ್ಮಾನ ಬಹುಸಂಖ್ಯಾತವಿರುವ ಪ್ರದೇಶದಲ್ಲಿ ಹಿಂದೂ ಧಾರ್ಮಿಕ ಮೆರವಣಿಗೆಯ ಮೇಲೆ ದಾಳಿ ನಡೆಸಲಾಯಿತು. ಇದರಲ್ಲಿ ೨೦ ಕ್ಕೂ ಹೆಚ್ಚು ಹಿಂದೂಗಳು ಮತ್ತು ಪೊಲೀಸರು ಗಾಯಗೊಂಡಿದ್ದಾರೆ.

೩. ಬಹುಸಂಖ್ಯಾತ ಹಿಂದೂಗಳ ಭಾರತದಲ್ಲಿ ಅಸುರಕ್ಷಿತ ಹಿಂದೂಗಳು !

ಬರೇಲಿ (ಉತ್ತರಪ್ರದೇಶ) ಎಂಬಲ್ಲಿ ಹಣೆಗೆ ತಿಲಕ ಮತ್ತು ಮಣಿಕಟ್ಟಿನ ಮೇಲೆ ದಾರವನ್ನು ಕಟ್ಟಿಕೊಂಡಿದ್ದ ಹಿಂದೂ ವ್ಯಕ್ತಿಯನ್ನು ನೋಡಿದ ಮತಾಂಧ ಮುಸಲ್ಮಾನರ ಗುಂಪೊಂದು ಸಣ್ಣ ಅಪಘಾತದ ನೆಪದಿಂದ  ಥಳಿಸಿತು. ‘ಈತ ಹಿಂದೂ, ಹಿಗ್ಗಾಮುಗ್ಗ ಥಳಿಸಿ, ಎಂದು ಅವರು ಕೂಗುತ್ತಿದ್ದರು.

೪. ಇಂತಹ ಪದ್ಧತಿ ಇಡೀ ಭಾರತದಲ್ಲಿರಬೇಕು !

ಲಕ್ಷ್ಮಣಪುರಿ (ಉತ್ತರಪ್ರದೇಶ) ಯಲ್ಲಿರುವ ಅಮೀನಾಬಾದ್ ಇಂಟರ್ ಕಾಲೇಜಿನಲ್ಲಿ ಚಿಕ್ಕ ಮಕ್ಕಳಿಗೆ ಎ ಫಾರ್ ಅರ್ಜುನ್, ಬಿ ಫಾರ್ ಬಲರಾಮ್ ಎಂದು ಆಂಗ್ಲ ವರ್ಣಮಾಲೆಯನ್ನು ಕಲಿಸಲಾಗುತ್ತಿದೆ.

೫. ಖಲಿಸ್ತಾನಿಯರಿಂದ ಗಂಡಾಂತರದಲ್ಲಿರುವ ಪಂಜಾಬ್‌ನ ಹಿಂದೂಗಳು!

ಶಿವಸೇನಾ ನಾಯಕ ಸುಧಿರ್ ಸೂರಿ ಅವರನ್ನು ಅಮೃತಸರ (ಪಂಜಾಬ್) ನಲ್ಲಿ ಪೊಲೀಸ್ ರಕ್ಷಣೆಯಲ್ಲಿರುವಾಗಲೇ ಖಲಿಸ್ತಾನಿಗಳು ಗುಂಡಿಕ್ಕಿ ಕೊಂದರು. ಇಲ್ಲಿನ  ಗೋಪಾಲ ದೇವಸ್ಥಾನದ ಹೊರಗೆ ಸೂರಿಯವರು ಪ್ರತಿಭಟನೆ ಮಾಡುತ್ತಿದ್ದರು.

೬. ಜಗತ್ತಿನಾದ್ಯಂತ ಇರುವ ಹಿಂದೂ ದೇವಾಲಯಗಳನ್ನು ಯಾವಾಗ ರಕ್ಷಿಸಲಾಗುತ್ತದೆ ?

ಪಾಕಿಸ್ತಾನದಲ್ಲಿ ಸಿಂಧ್‌ನ ತಲಾಹಿ ಬಳಿಯ ಗ್ರಾಮದಲ್ಲಿ ರಾಮಪೀರ್ ಎಂಬ ಹಿಂದೂ ದೇವಾಲಯವನ್ನು ಜೆಸಿಬಿ ಯಂತ್ರದಿಂದ ಕೆಡವಲಾಯಿತು.  ಈ ಘಟನೆಯ ವಿಡಿಯೋವನ್ನು ಪಾಕಿಸ್ತಾನದ ಹಿಂದೂ ಸಂಘಟನೆಯ ಸಂಸ್ಥಾಪಕ-ಅಧ್ಯಕ್ಷ ನರೇನ ದಾಸ್ ಭಿಲ್ ಅವರು ಬಿತ್ತರಿಸಿದ್ದಾರೆ.

೭. ಇಡೀ ದೇಶದಲ್ಲಿ ಸಮಾನ ನಾರಿಕರ ಕಾನೂನು ಜಾರಿಗೆ ತನ್ನಿ !

ಹಿಮಾಚಲ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದರೆ ಸಮಾನ ನಾಗರಿಕ ಕಾನೂನು ಜ್ಯಾರಿಗೊಳಿಸಲಾಗುವುದು, ಎಂದು ಭಾಜಪವು ಚುನಾವಣೆಯ ಆಶ್ವಾಸನೆ ನೀಡಿದೆ.