
ನ್ಯೂಯಾರ್ಕ್ (ಅಮೇರಿಕಾ) – ‘ಲಷ್ಕರ್-ಎ-ತೊಯ್ಬಾ’ ಮುಖ್ಯಸ್ಥ ಹಾಫೀಜ್ ಸಯೀದನ ಮಗ ತಲ್ಹಾ ಸಯೀದನ ಹೆಸರನ್ನು ವಿಶ್ವಸಂಸ್ಥೆಯು ಅಂತಾರಾಷ್ಟ್ರೀಯ ಭಯೋತ್ಪಾದಕರೆಂದು ಘೋಷಿಸಲ್ಪಡುವವರ ಪಟ್ಟಿಯಲ್ಲಿ ಹಾಕಿತ್ತು; ಆದರೆ ಚೀನಾ ಈ ಪಟ್ಟಿಯನ್ನು ವಿರೋಧಿಸಿತು. ಸಯೀದನ ಹೆಸರನ್ನು ಭಯೋತ್ಪಾದಕರ ಪಟ್ಟಿಯಲ್ಲಿ ಸೇರಿಸುವಂತೆ ಭಾರತವು ವಿಶ್ವಸಂಸ್ಥೆಗೆ ಪ್ರಸ್ತಾಪವನ್ನು ಸಲ್ಲಿಸಿತ್ತು. ಈ ಹಿಂದೆ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಶಾಹಿದ ಮೆಹಮೂದನನ್ನು ಕೂಡ ‘ಅಂತಾರಾಷ್ಟ್ರೀಯ ಭಯೋತ್ಪಾದಕ’ ಎಂದು ಘೋಷಿಸುವ ಪ್ರಸ್ತಾಪವನ್ನು ಚೀನಾ ವಿರೋಧಿಸಿತ್ತು.
ಏಪ್ರಿಲ್ ೮ ರಂದು ಭಾರತದ ಗೃಹ ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ ತಲ್ಹಾ ಸಯೀದನನ್ನು ಭಯೋತ್ಪಾದಕ ಎಂದು ಘೋಷಿಸಿತ್ತು. ತಲ್ಹಾ ಸಯೀದನು ಲಷ್ಕರ್-ಎ-ತೊಯ್ಬಾದ ಪ್ರಮುಖ ಭಯೋತ್ಪಾದಕನಾಗಿದ್ದು ಮೌಲ್ವಿ ಶಾಖೆಯ ಮುಖ್ಯಸ್ಥನಾಗಿದ್ದಾನೆ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ. ಉಗ್ರರ ನೇಮಕಾತಿ ಮತ್ತು ನಿಧಿ ಸಂಗ್ರಹಣೆಯಲ್ಲಿ ಸಯೀದ ಸಕ್ರಿಯ ಸಹಭಾಗಿತ್ವವಿದೆ. ಭಾರತದಲ್ಲಿ ಹಾಗೂ ಅಫ್ಘಾನಿಸ್ತಾನದಲ್ಲಿನ ಭಾರತಕ್ಕೆ ಸಂಬಂಧಪಟ್ತ ಸ್ಥಳಗಳ ಮೇಲೆ ದಾಳಿ ನಡೆಸುವ ಲಷ್ಕರ್-ಎ-ತೊಯ್ಬಾದ ಸಂಚುಗಳನ್ನು ರೂಪಿಸುವಲ್ಲಿಯೂ, ಅವುಗಳನ್ನು ಕಾರ್ಯಗತಗೊಳಿಸುವಿಕೆಯಲ್ಲಿಯೂ ಸಯೀದನ ಪಾಲ್ಗೊಳ್ಳುವಿಕೆಯಿದೆ.
ಸಂಪಾದಕೀಯ ನಿಲುವುಚೀನಾದ ಇಂತಹ ಚಟುವಟಿಕೆಗಳನ್ನು ಜಗತ್ತಿನ ಎಲ್ಲ ದೇಶಗಳೂ ಸಂಘಟಿತ ರೀತಿಯಲ್ಲಿ ವಿರೋಧಿಸಲೇಬೇಕು ! |
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಚಿಂಚವಡ (ಪುಣೆ)ದಲ್ಲಿನ ಶ್ರೀ ಮೋರಯಾ ಗೋಸಾವಿ ಮಂದಿರ ಪರಿಸರದ ಜಾತ್ರೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ ಲೇಬಲ್ ಇರುವ ಚಾದರಗಳ ಮಾರಾಟ!
ಅಂಡಮಾನ್ ನ ‘ಶಾಲೋ ಆಫ್ಶೋರ್ ಬ್ಲಾಕ್’ನಲ್ಲಿ ಎರಡನೇ ಅತಿ ದೊಡ್ಡ ನೈಸರ್ಗಿಕ ಅನಿಲದ ನಿಕ್ಷೇಪ ಪತ್ತೆ
ಅಮೆರಿಕದ ‘ಬ್ಲೂಮ್ ಬರ್ಗ್’ ಸುದ್ದಿ ಸಂಸ್ಥೆಯು ತನ್ನ ಭಾರತ ವಿರೋಧಿ ಲೇಖನ ಹಿಂಪಡೆಯಿತು!
ಭಾರತೀಯರು ಜಗತ್ತಿನ ಅತ್ಯಂತ ಪ್ರತಿಭಾವಂತ ಜನರಲ್ಲಿ ಒಬ್ಬರಾಗಿದ್ದಾರೆ! – ವ್ಲಾದಿಮಿರ್ ಪುಟಿನ್, ಅಧ್ಯಕ್ಷರು, ರಷ್ಯಾ
ಇರಾನ್ನ ಕ್ಷಿಪಣಿ ಸಾಮರ್ಥ್ಯಕ್ಕೆ ಭಾರಿ ಪ್ರಮಾಣದ ಹಾನಿ! – ಡೊನಾಲ್ಡ್ ಟ್ರಂಪ್