೧೯೭೧ ರಲ್ಲಿ ಪಾಕಿಸ್ತಾನಿ ಸೈನ್ಯವು ಬಾಂಗ್ಲಾದೇಶದಲ್ಲಿ ಮಾಡಿರುವ ಹಿಂದೂಗಳ ಮೇಲಿನ ಅತ್ಯಾಚಾರವನ್ನು ‘ನರಸಂಹರ’ ಎಂದು ಘೋಷಿಸಿರಿ !

ಅಮೇರಿಕಾದ ಇಬ್ಬರು ಸಂಸದರಿಂದ ಸಂಸತ್ತಿನಲ್ಲಿ ಪ್ರಸ್ತಾವ !

ಪಾಕಿಸ್ತಾನಿ ಸೈನ್ಯವು ಬಾಂದ್ಲಾದೇಶದಲ್ಲಿ ಮಾಡಿರುವ ಹಿಂದೂಗಳ ‘ನರಸಂಹಾರ’ (ಸಂಗ್ರಹಿತ ಛಾಯಾಚಿತ್ರ)

ವಾಷಿಂಗ್ಟನ್ (ಅಮೇರಿಕಾ) – ಅಮೇರಿಕಾದಲ್ಲಿನ ರೋ ಖನ್ನಾ ಮತ್ತು ಸಿವ ಚಾಬೋಟ್ ಈ ಇಬ್ಬರು ಸಂಸದರು ಸಂಸತ್ತಿನಲ್ಲಿ ಒಂದು ಪ್ರಸ್ತಾವ ಮಂಡಿಸಿದ್ದಾರೆ ಇದರಲ್ಲಿ ೧೯೭೧ ರಲ್ಲಿ ಪಾಕಿಸ್ತಾನಿ ಸೈನ್ಯವು ಅಂದಿನ ಪೂರ್ವ ಪಾಕಿಸ್ತಾನದಲ್ಲಿ (ಈಗಿನ ಬಾಂಗ್ಲಾದೇಶ) ಹಿಂದೂ ಮತ್ತು ಬಂಗಾಲಿ ಮುಸಲ್ಮಾನ ಇವರ ಮೇಲೆ ನಡೆಸಿರುವ ಅತ್ಯಾಚಾರವನ್ನು ‘ನರಸಂಹಾರ ’ಎಂದು ಘೋಷಿಸಿರಿ ಎಂದು ಒತ್ತಾಯಿಸಿದ್ದಾರೆ. ಹಾಗೂ ಈ ಪ್ರಕರಣದಲ್ಲಿ ಪಾಕಿಸ್ತಾನವು ಬಾಂಗ್ಲಾದೇಶದಲ್ಲಿನ ನಾಗರೀಕರ ಕ್ಷಮೆ ಕೋರುಲು ಕೂಡ ಒತ್ತಾಯಿಸಿದ್ದಾರೆ. ಈ ಇಬ್ಬರು ಸಂಸದರು ಭಾರತೀಯ ಮೂಲದವರಾಗಿದ್ದಾರೆ.
ಖನ್ನಾ ಇವರು, ೧೯೭೧ ರಲ್ಲಿ ಬಾಂಗ್ಲಾದೇಶದಲ್ಲಿ ಯಾವ ನರಸಂಹಾರ ನಡೆದಿತ್ತು, ಅದರಲ್ಲಿ ಲಕ್ಷಾಂತರ ಜನರು ಸಾವನ್ನಪ್ಪಿದ್ದರು. ಇದರಲ್ಲಿ ಶೇಕಡ ೮೦ ರಷ್ಟು ಹಿಂದೂಗಳಾಗಿದ್ದರು ಎಂದು ಹೇಳಿದರು.

ಅಶಾಂತಿ ಮತ್ತು ವಿನಾಶದತ್ತ ಸಾಗುತ್ತಿರುವ ಪಾಶ್ಚಾತ್ಯ ರಾಷ್ಟ್ರಗಳು !

‘ಪಾಶ್ಚಾತ್ಯ ರಾಷ್ಟ್ರಗಳಲ್ಲಿನ ಜನರ ಪರಿಸ್ಥಿತಿ ತುಂಬಾ ಕರುಣಾಮಯವಾಗಿದೆ. ಆ ಜನರು ಯಾವಾಗಲೂ ‘ಫ್ಯಾಶನ್’ ಬದಲಾಯಿಸುತ್ತಾರೆ, ‘ಬಟ್ಟೆ, ಫರ್ನಿಚರ್, ಮನೆ, ಕಾರುಗಳನ್ನು ಬದಲಾಯಿಸುತ್ತಾರೆ, ಅಷ್ಟೇ ಅಲ್ಲ, ಪತ್ನಿಯನ್ನೂ ಬದಲಾಯಿಸುತ್ತಾರೆ ! ‘ಕೆಲವಡೆಗಳಲ್ಲಿಯಂತೂ ಜನರು ತಮ್ಮ ತಮ್ಮ ಪತ್ನಿಯನ್ನು ಕರೆದೊಯ್ಯುತ್ತಾರೆ, ಎಲ್ಲ ಜನರು ನೃತ್ಯ ಮಾಡುತ್ತಾರೆ, ಕುಡಿಯುತ್ತಾರೆ ಮತ್ತು ತಮ್ಮ ಪತ್ನಿಯರನ್ನು ಆನಂದಿಸಲು ಬಿಡುತ್ತಾರೆ. ಆದರೂ ಬಡಪಾಯಿಗಳಿಗೆ ಸುಖ ಸಿಗುವುದಿಲ್ಲ. ದಿನೇ ದಿನೇ ಅವರು ಅಶಾಂತಿ ಮತ್ತು ಸರ್ವನಾಶದತ್ತ ಸಾಗುತ್ತಿದ್ದಾರೆ. (ಆಧಾರ : ಋಷಿ ಪ್ರಸಾದ, ಮೇ ೨೦೦೦)

ಸಂಪಾದಕೀಯ ನಿಲುವು

ಭಾರತದಲ್ಲಿನ ಸಂಸದರಲ್ಲ, ಅಮೇರಿಕಾದಲ್ಲಿನ ಸಂಸದರು ಈ ರೀತಿ ಒತ್ತಾಯಿಸುತ್ತಾರೆ, ಇದು ಭಾರತಕ್ಕೆ ಲಚ್ಚಾಸ್ಪದವಾಗಿದೆ ! ಭಾರತದ ಸಂಸತ್ತಿನಲ್ಲಿ ಈ ರೀತಿಯ ಪ್ರಸ್ತಾವ ಸಮ್ಮತಿಸಿ ಬಾಂಗ್ಲಾದೇಶದಲ್ಲಿನ ಹಿಂದೂಗಳ ರಕ್ಷಣೆ ಮಾಡುವುದಕ್ಕಾಗಿ ಕೂಡ ಸರಕಾರವು ಕೃತಿ ಶೀಲರಾಗಬೇಕು !