೨ ವರ್ಷಗಳ ನಂತರ ಲಢಾಖನ ಗೋಗರಾ ಹಾಟಸ್ಪ್ರಿಂಗ್ಸ್ ಪ್ರದೇಶದಿಂದ ಭಾರತ ಮತ್ತು ಚೀನಾದ ಸೈನ್ಯ ಹಿಂತಿರುಗುತ್ತಿದೆ !

ಬೀಚಿಂಗ್ (ಚೀನಾ) – ಲಡಾಖನಲ್ಲಿ ಕಳೆದ ಎರಡು ವರ್ಷಗಳಿಂದ ಭಾರತ ಮತ್ತು ಚೀನಾದ ಸೈನ್ಯಗಳ ನಡುವೆ ಬಿಗುವಿನ ವಾತಾವರಣವಿತ್ತು. ಚೀನಾ ಪ್ರತ್ಯಕ್ಷ ಗಡಿ ರೇಖೆಯ ಮೇಲೆ ತನ್ನ ಸೈನ್ಯ ನೇಮಕಗೊಳಿಸಿರುವುದರಿಂದ ಭಾರತ ಕೂಡ ಅದಕ್ಕೆ ಪ್ರತ್ಯುತ್ತರವೆಂದು ತನ್ನ ಸೈನ್ಯ ನೇಮಕಗೊಳಿಸಿತ್ತು. ಈ ಸಮಯದಲ್ಲಿ ಎರಡು ಸೈನ್ಯದ ಹಿರಿಯ ಅಧಿಕಾರಿ ಮಟ್ಟದ ಸಭೆಗಳು ನಡೆಯುತ್ತಿದ್ದವು. ೧೬ ನೇ ಸಭೆಯ ನಂತರ ಚೀನಾ ಪ್ರತ್ಯಕ್ಷ ನಿಯಂತ್ರಣ ರೇಖೆಯ ಮೇಲಿನ ತನ್ನ ಸೈನ್ಯ ಹಿಂಪಡೆಯಲು ಸಮ್ಮತಿಸಿದ ನಂತರ ಅಲ್ಲಿನ ಪೆಟ್ರೋಲ್ ಪಾಯಿಂಟ್ ೧೫ (ಗೋಗರಾ – ಹಾಟಸ್ಪ್ರಿಂಗ್ಸ್) ಇಲ್ಲಿಂದ ತನ್ನ ಸೈನ್ಯವನ್ನು ಹಿಂಬಡೆಯಲು ಪ್ರಾರಂಭಿಸಿದೆ. ಭಾರತವೂ ಕೂಡ ತನ್ನ ಸೈನ್ಯ ಹಿಂಪಡೆಯಲು ಪ್ರಾರಂಭಿಸಿದೆ. ಚೀನಾವು, ‘ಸೈನ್ಯ ಹಿಂಪಡೆಯುವುದು ಭಾರತ ಮತ್ತು ಚೀನಾ ಗಡಿಯ ಮೇಲೆ ಶಾಂತಿಗಾಗಿ ಅನುಕೂಲವಾಗಿದೆ’ ಎಂದು ಹೇಳಿದೆ.

ಶಾಂಘಾಯ ಶಿಖರ ಸಮ್ಮೇಳನ ಮುಂದಿನ ತಿಂಗಳಿನಲ್ಲಿ ಉಜಬೇಕಿಸ್ತಾನದಲ್ಲಿ ನಡೆಯುವುದು. ಇದರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾದ ರಾಷ್ಟ್ರ ಅಧ್ಯಕ್ಷ ಶೀ ಜಿನಪಿಂಗ ಸಹಭಾಗಿ ಆಗುವವರು. ಅಲ್ಲಿ ಇವರಿಬ್ಬರು ಭೇಟಿಯಾಗುವ ಸಾಧ್ಯತೆ ಇದೆ. ಈ ಮೊದಲೇ ಸೈನ್ಯ ಹಿಂಬಡೆಯಲಾಗುತ್ತಿದೆ.

ಸಂಪಾದಕೀಯ ನಿಲುವು

ಚೀನಾ ಭಾರತದ ಗಡಿಯಿಂದ ಸೈನ್ಯ ಹಿಂಪಡೆಯುತ್ತಿದ್ದರೂ ಅದರ ಮೇಲೆ ವಿಶ್ವಾಸವಿಡಲು ಸಾಧ್ಯವಿಲ್ಲದೆ ಇರುವುದರಿಂದ ಭಾರತ ಜಾಗರೂಕವಾಗಿರುವುದು ಅವಶ್ಯಕವಾಗಿದೆ !