
ನವದೆಹಲಿ – ಇಲ್ಲಿನ `ಔರಂಗಜೇಬ ಲೇನ್’ ಎಂದು ಬರೆದಿರುವ ಫಲಕದ ಮೇಲೆ ಭಾರತೀಯ ಜನತಾ ಯುವಾ ಮೋರ್ಚಾದ ಕಾರ್ಯಕರ್ತರು `ಬಾಬಾ ವಿಶ್ವನಾಥ ಮಾರ್ಗ’ ಎಂದು ಬರೆದ ಭಿತ್ತಿಪತ್ರವನ್ನು ಅಂಟಿಸಿದ್ದಾರೆ. `ಔರಂಗಜೇಬನು ದೇಶದ ಮೇಲಿನ ಕಪ್ಪು ಕಲೆಯಾಗಿದ್ದಾನೆ’ ಎಂಬ ಹೇಳಿಕೆಯನ್ನು ದೆಹಲಿಯ ಭಾರತೀಯ ಜನತಾ ಯುವ ಮೋರ್ಚಾದ ಅಧ್ಯಕ್ಷರಾದ ವಾಸು ರಖಡರವರು ನೀಡಿದ್ದಾರೆ.
#BJYM activists paste ‘Baba Vishwanath Marg’ banner on Aurangzeb Lane in #Delhihttps://t.co/sJGXiv9cne
— India TV (@indiatvnews) May 20, 2022
ವಾಸು ರಖಡರವರು ಮಾತನಾಡುತ್ತ `ಔರಂಗಜೇಬನಂತಹ ಆಕ್ರಮಣಕಾರನು ನಮ್ಮ ದೇವತೆಗಳ ದೇವಸ್ಥಾನಗಳನ್ನು ಧ್ವಂಸಗೊಳಿಸಿದ್ದಾನೆ. ವಾರಾಣಸಿಯ ಜ್ಞಾನವಾಪಿ ಮಸೀದಿಯಲ್ಲಿ ಒಂದು ಶಿವಲಿಂಗವಿತ್ತು. ಇಂದು ನಾವು `ಔರಂಗಜೇಬ ಲೇನ್’ನ್ನು `ಬಾಬಾ ವಿಶ್ವನಾಥ ಮಾರ್ಗ’ ಎಂದು ಹೆಸರಿಸಬೇಕೆಂದು ಮನವಿ ಮಾಡಲು ಬಂದಿದ್ದೇವೆ. ದೆಹಲಿಯ ಸರಕಾರವು ಈ ರಸ್ತೆಗೆ `ಬಾಬಾ ವಿಶ್ವನಾಥ ಮಾರ್ಗ’ ಎಂದು ಹೆಸರಿಸಬೇಕಾಗಿ ನಾವು ಇಚ್ಛಿಸುತ್ತೇವೆ. ಮೊಗಲ ಆಕ್ರಮಣಕಾರರು ನಮ್ಮ ದೇವತೆಗಳ ದೇವಸ್ಥಾನಗಳನ್ನು ಕೆಡವಿರುವುದು ಸಂಪೂರ್ಣ ಜಗತ್ತಿಗೇ ತಿಳಿದಿದೆ. ಅವರ ಇತಿಹಾಸವನ್ನು ನಮಗೆ ಕೊನೆಗಾಣಿಸಲಿಕ್ಕಿದೆ. ಈ ಹೆಸರನ್ನು ಇತಿಹಾಸದ ಯಾವುದೇ ಹಾಳೆಯ ಮೇಲೆ, ಯಾವುದೇ ರಸ್ತೆಯ ಮೇಲೆ ಬರೆಯಬೇಕೆಂದು ನಮಗೆ ಅನಿಸುವುದಿಲ್ಲ’ ಎಂದು ಹೇಳಿದರು.
| ಹೀಗೆ ಒಂದೊಂದೆ ಹೆಸರನ್ನು ಬದಲಾಯಿಸುವ ಬದಲು ಕೇಂದ್ರ ಸರಕಾರವು ಸಂಪೂರ್ಣ ದೇಶದಲ್ಲಿ ಮೊಗಲ, ಆಂಗ್ಲರು ಮುಂತಾದ ಆಕ್ರಮಣಕಾರರ ಹೆಸರುಗಳನ್ನು ಬದಲಾಯಿಸಿ ಅಲ್ಲಿ ಭಾರತೀಯ ಹೆಸರುಗಳನ್ನಿಡುವ ಕಾನೂನನ್ನು ಮಾಡಿ ಅದನ್ನು ತಕ್ಷಣ ಕಾರ್ಯಾಚರಣೆಗೆ ತರಬೇಕು, ಎಂದು ಜನತೆಗೆ ಅನಿಸುತ್ತದೆ !-ಸಂಪಾದಕರು |
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಗುರುಪೂರ್ಣಿಮೆ ನಿಮಿತ್ತ ಗುರುಕಾರ್ಯಕ್ಕಾಗಿ ಅಂದರೆ ಧರ್ಮಕಾರ್ಯಕ್ಕಾಗಿ ಧನ ಅರ್ಪಿಸಿ !
‘ನಿಜವಾದ ದೇವಾಲಯವಾದಾಗ ದರ್ಶನಕ್ಕೆ ಹೋಗುತ್ತೇನೆ’ : ಜ್ಯೋತಿರ್ ಪೀಠದ ಶಂಕರಾಚಾರ್ಯ
ನಟ ಆಮೀರ್ ಖಾನ್ ‘ಲವ್ ಜಿಹಾದ್’ ನ ‘ಬ್ರ್ಯಾಂಡ್ ಅಂಬಾಸಿಡರ್’ ! – ಸಚಿವ ನಿತೇಶ್ ರಾಣೆ, ಮಹಾರಾಷ್ಟ್ರ
ಲಕ್ಷ್ಮಣಪುರಿ (ಉತ್ತರ ಪ್ರದೇಶ)ಯಲ್ಲಿನ ಬುದ್ಧೇಶ್ವರ ದೇವಸ್ಥಾನದ ಸೇವಕನೇ ಗಂಟೆಯ ಕಳ್ಳ !
ಧಾರ್ಮಿಕ ಭಾವನೆಗಳಿಗೆ ಧಕ್ಕೆ ಪ್ರಕರಣಗಳಲ್ಲಿ ಸಮಾನ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳಲು ಆಗ್ರಹ!