
ನವದೆಹಲಿ – ಇಲ್ಲಿನ `ಔರಂಗಜೇಬ ಲೇನ್’ ಎಂದು ಬರೆದಿರುವ ಫಲಕದ ಮೇಲೆ ಭಾರತೀಯ ಜನತಾ ಯುವಾ ಮೋರ್ಚಾದ ಕಾರ್ಯಕರ್ತರು `ಬಾಬಾ ವಿಶ್ವನಾಥ ಮಾರ್ಗ’ ಎಂದು ಬರೆದ ಭಿತ್ತಿಪತ್ರವನ್ನು ಅಂಟಿಸಿದ್ದಾರೆ. `ಔರಂಗಜೇಬನು ದೇಶದ ಮೇಲಿನ ಕಪ್ಪು ಕಲೆಯಾಗಿದ್ದಾನೆ’ ಎಂಬ ಹೇಳಿಕೆಯನ್ನು ದೆಹಲಿಯ ಭಾರತೀಯ ಜನತಾ ಯುವ ಮೋರ್ಚಾದ ಅಧ್ಯಕ್ಷರಾದ ವಾಸು ರಖಡರವರು ನೀಡಿದ್ದಾರೆ.
#BJYM activists paste ‘Baba Vishwanath Marg’ banner on Aurangzeb Lane in #Delhihttps://t.co/sJGXiv9cne
— India TV (@indiatvnews) May 20, 2022
ವಾಸು ರಖಡರವರು ಮಾತನಾಡುತ್ತ `ಔರಂಗಜೇಬನಂತಹ ಆಕ್ರಮಣಕಾರನು ನಮ್ಮ ದೇವತೆಗಳ ದೇವಸ್ಥಾನಗಳನ್ನು ಧ್ವಂಸಗೊಳಿಸಿದ್ದಾನೆ. ವಾರಾಣಸಿಯ ಜ್ಞಾನವಾಪಿ ಮಸೀದಿಯಲ್ಲಿ ಒಂದು ಶಿವಲಿಂಗವಿತ್ತು. ಇಂದು ನಾವು `ಔರಂಗಜೇಬ ಲೇನ್’ನ್ನು `ಬಾಬಾ ವಿಶ್ವನಾಥ ಮಾರ್ಗ’ ಎಂದು ಹೆಸರಿಸಬೇಕೆಂದು ಮನವಿ ಮಾಡಲು ಬಂದಿದ್ದೇವೆ. ದೆಹಲಿಯ ಸರಕಾರವು ಈ ರಸ್ತೆಗೆ `ಬಾಬಾ ವಿಶ್ವನಾಥ ಮಾರ್ಗ’ ಎಂದು ಹೆಸರಿಸಬೇಕಾಗಿ ನಾವು ಇಚ್ಛಿಸುತ್ತೇವೆ. ಮೊಗಲ ಆಕ್ರಮಣಕಾರರು ನಮ್ಮ ದೇವತೆಗಳ ದೇವಸ್ಥಾನಗಳನ್ನು ಕೆಡವಿರುವುದು ಸಂಪೂರ್ಣ ಜಗತ್ತಿಗೇ ತಿಳಿದಿದೆ. ಅವರ ಇತಿಹಾಸವನ್ನು ನಮಗೆ ಕೊನೆಗಾಣಿಸಲಿಕ್ಕಿದೆ. ಈ ಹೆಸರನ್ನು ಇತಿಹಾಸದ ಯಾವುದೇ ಹಾಳೆಯ ಮೇಲೆ, ಯಾವುದೇ ರಸ್ತೆಯ ಮೇಲೆ ಬರೆಯಬೇಕೆಂದು ನಮಗೆ ಅನಿಸುವುದಿಲ್ಲ’ ಎಂದು ಹೇಳಿದರು.
| ಹೀಗೆ ಒಂದೊಂದೆ ಹೆಸರನ್ನು ಬದಲಾಯಿಸುವ ಬದಲು ಕೇಂದ್ರ ಸರಕಾರವು ಸಂಪೂರ್ಣ ದೇಶದಲ್ಲಿ ಮೊಗಲ, ಆಂಗ್ಲರು ಮುಂತಾದ ಆಕ್ರಮಣಕಾರರ ಹೆಸರುಗಳನ್ನು ಬದಲಾಯಿಸಿ ಅಲ್ಲಿ ಭಾರತೀಯ ಹೆಸರುಗಳನ್ನಿಡುವ ಕಾನೂನನ್ನು ಮಾಡಿ ಅದನ್ನು ತಕ್ಷಣ ಕಾರ್ಯಾಚರಣೆಗೆ ತರಬೇಕು, ಎಂದು ಜನತೆಗೆ ಅನಿಸುತ್ತದೆ !-ಸಂಪಾದಕರು |
ಪಂಢರಪುರ: ಶ್ರೀ ವಿಠ್ಠಲ ಮೂರ್ತಿಯ ರಾಸಾಯನಿಕ ಲೇಪನಕ್ಕೆ ವಾರಕರಿ ಸಂಪ್ರದಾಯದ ವಿರೋಧ: ರಾಸಾಯನಿಕ ಲೇಪನದಿಂದ ಮೂರ್ತಿಗೆ ಹಾನಿ!
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಸ್ವಂತ ಪಕ್ಷ ಸ್ಥಾಪಿಸಲು ಮುಂದಾದ ಭಾಜಪ ತಮಿಳುನಾಡಿನ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ!
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ