ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಸವಿನಯ ಕರೆ

ಮಹಾರಾಷ್ಟ್ರದಲ್ಲಿನ ಓರ್ವ ವ್ಯಕ್ತಿಯು ಹಿಂದುತ್ವನಿಷ್ಠ ಎಂದು ಹೇಳಿಕೊಂಡು ಬೇರೆ ಜಿಲ್ಲೆಯ ಬೇರೆಯೊಂದು ಸಂಘಟನೆಯ ಪದಾಧಿಕಾರಿ ಹಾಗೂ ಕಾರ್ಯಕರ್ತರನ್ನು ಭೇಟಿಯಾದರು. ಭೇಟಿ ಆಗುವಾಗ ತಾವು ಹಿಂದುತ್ವನಿಷ್ಠರೆಂದು ಹೇಳಿಕೊಂಡು ‘ತನಗೆ ಆ ಜಿಲ್ಲೆಯ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು ನಿಮ್ಮ ಸಂಪರ್ಕ ಸಂಖ್ಯೆಯನ್ನು ನೀಡಿದ್ದರು ಆದ್ದರಿಂದ ನಾನು ನಿಮ್ಮನ್ನು ಭೇಟಿಯಾಗಲು ಬಂದೆ’ ಎಂದು ಹೇಳಿದರು. ‘ಸಂಪರ್ಕ ಸಂಖ್ಯೆ ಯಾರು ಕೊಟ್ಟರು’, ಎಂದು ಸ್ಥಳೀಯ ಕಾರ್ಯಕರ್ತರು ಕೇಳಿದಾಗ ಈ ನಕಲಿ ಹಿಂದುತ್ವನಿಷ್ಠನಿಗೆ ಸಮಿತಿಯ ಕಾರ್ಯಕರ್ತನ ಹೆಸರನ್ನು ಹೇಳಲು ಆಗಲಿಲ್ಲ. ಈ ಸಂದೇಹಾಸ್ಪದ ವ್ಯಕ್ತಿಯು ಹಿಂದುತ್ವನಿಷ್ಠ ಸಂಘಟನೆಯ ಕಾರ್ಯಕರ್ತನನ್ನು ಭೇಟಿಯಾಗುವ ಬಗ್ಗೆ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರಿಗೆ ಯಾವುದೇ ಮುನ್ಸೂಚನೆ ಇರಲಿಲ್ಲ; ಅವರು ಬಂದು ಹೋಗಿರುವ ಬಗ್ಗೆ ಸ್ಥಳೀಯ ಸಂಘಟನೆಯಿಂದ ಸಮಿತಿಯ ಕಾರ್ಯಕರ್ತನಿಗೆ ನಂತರ ತಿಳಿಯಿತು.
ಹಿಂದೂ ಜನಜಾಗೃತಿ ಸಮಿತಿಯು ಯಾವಾಗಲೂ ಕಾನೂನಿನ ಚೌಕಟ್ಟಿನಲ್ಲಿ ಕಾರ್ಯವನ್ನು ಮಾಡುತ್ತದೆ ಎಂಬುದು ಸ್ಥಳೀಯ ಸಂಘಟನೆಯ ಕಾರ್ಯಕರ್ತರಿಗೆ ತಿಳಿದಿದ್ದರಿಂದ ಆ ನಕಲಿ ಹಿಂದುತ್ವನಿಷ್ಠ ವ್ಯಕ್ತಿಯು ಆಕ್ರಮಣಕಾರಿಯಾಗಿ ಮಾತನಾಡುತ್ತಿರುವುದನ್ನು ನೋಡಿ, ಆ ಸ್ಥಳೀಯ ಕಾರ್ಯಕರ್ತರಿಗೆ ಸಂದೇಹ ಬಂದಿತು. ಈ ನಕಲಿ ಹಿಂದುತ್ವನಿಷ್ಠನ ಚತುಷ್ಚಕ್ರ ವಾಹನದಲ್ಲಿ ‘ಪೊಲೀಸ್’ ಮತ್ತು ‘ಪತ್ರಕರ್ತ’ ಹೀಗೆ ೨ ಪ್ಲೇಟ್ಗಳು ಇರುವುದು ಕಾರ್ಯಕರ್ತರಿಗೆ ಕಂಡಿತು.
ಹಿತಚಿಂತಕರಲ್ಲಿ ವಿನಂತಿ !
ಈ ರೀತಿಯ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತ ಎಂದು ಹೇಳಿಕೊಂಡು ಯಾರಾದರೂ ಸಂದೇಹಾಸ್ಪದವಾಗಿ ವರ್ತಿಸುತ್ತಿದ್ದರೆ ದಯವಿಟ್ಟು ತಮ್ಮ ಪರಿಚಯದ ಸಮಿತಿಯ ಕಾರ್ಯಕರ್ತರನ್ನು ಕೂಡಲೇ ಸಂಪರ್ಕಿಸಿ. |

ಗುರುಪೂರ್ಣಿಮೆ ನಿಮಿತ್ತ ಗುರುಕಾರ್ಯಕ್ಕಾಗಿ ಅಂದರೆ ಧರ್ಮಕಾರ್ಯಕ್ಕಾಗಿ ಧನ ಅರ್ಪಿಸಿ !
ನಟ ಆಮೀರ್ ಖಾನ್ ‘ಲವ್ ಜಿಹಾದ್’ ನ ‘ಬ್ರ್ಯಾಂಡ್ ಅಂಬಾಸಿಡರ್’ ! – ಸಚಿವ ನಿತೇಶ್ ರಾಣೆ, ಮಹಾರಾಷ್ಟ್ರ
ಧಾರ್ಮಿಕ ಭಾವನೆಗಳಿಗೆ ಧಕ್ಕೆ ಪ್ರಕರಣಗಳಲ್ಲಿ ಸಮಾನ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳಲು ಆಗ್ರಹ!
ಗುರುಪೂರ್ಣಿಮೆ ನಿಮಿತ್ತ ಗುರುಕಾರ್ಯಕ್ಕಾಗಿ ಅಂದರೆ ಧರ್ಮಕಾರ್ಯಕ್ಕಾಗಿ ಧನ ಅರ್ಪಿಸಿ !
ಹಿಂದೂ ದೇವತೆಗಳ ಬಗ್ಗೆ ಹೇಳಿಕೆ ಬಳಿಕ ಹುಸೇನ್ ಶೇಖ್ ಕ್ಷಮೆಯಾಚನೆ : Hussain Sheikh Apology
ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಆದೇಶ!