
‘ಸನಾತನ ಪ್ರಭಾತ’ ನಿಯತಕಾಲಿಕೆಗಳ ಆನ್ಲೈನ್ ಸಂಚಿಕೆಗಳು ಶೀಘ್ರದಲ್ಲೇ ಡಿಜಿಟಲ್ ನ್ಯೂಸ್ ಪೇಪರ ಅಂದರೆ ‘ಇ-ಪೇಪರ್’ನ ಸ್ವರೂಪದಲ್ಲಿ ಪ್ರಕಟಣೆಗೊಳ್ಳಲಿವೆ. ಇದರಿಂದ ಸಾಪ್ತಾಹಿಕ ‘ಸನಾತನ ಪ್ರಭಾತ’ನ ಕನ್ನಡ ಮತ್ತು ಮರಾಠಿ, ಅದೇ ರೀತಿ ಹಿಂದಿ ಹಾಗೂ ಆಂಗ್ಲ ಪಾಕ್ಷಿಕ ಹಾಗೂ ದೈನಿಕ ‘ಸನಾತನ ಪ್ರಭಾತ’ನ ಮಹಾರಾಷ್ಟ್ರ ಹಾಗೂ ಗೋವಾ ಈ ರಾಜ್ಯಗಳ ‘ಮುಂಬಯಿ, ಠಾಣೆ, ರಾಯಗಡ, ಉತ್ತರ ಮಹಾರಾಷ್ಟ್ರ ಹಾಗೂ ವಿದರ್ಭ’, ‘ಪಶ್ಚಿಮ ಮಹಾರಾಷ್ಟ್ರ ಹಾಗೂ ಮರಾಠವಾಡಾ’, ‘ರತ್ನಾಗಿರಿ’ ಮತ್ತು ‘ಗೋವಾ-ಸಿಂಧುದುರ್ಗ’ ಈ ನಾಲ್ಕು ಸಂಚಿಕೆಗಳು ಪ್ರತ್ಯಕ್ಷವಾಗಿ ವಿತರಣೆಯೊಂದಿಗೆ ಅದರ ‘ಇ-ಪೇಪರ’ನ ಸ್ವರೂಪದಲ್ಲಿಯೂ ಸಂಚಾರವಾಣಿ, ಅದೇ ರೀತಿ ಗಣಕಯಂತ್ರಗಳಲ್ಲಿ ಓದಲು ವಾಚಕರಿಗೆ ಲಭ್ಯವಾಗಲಿದೆ.
ಆದ್ದರಿಂದ ಕೊರೋನಾ ಮಹಾಮಾರಿ ಇರಲಿ, ಸಾರಿಗೆ ಮುಷ್ಕರವಾಗಿರಲಿ ಅಥವಾ ಮೂರನೇ ಮಹಾಯುದ್ಧವಾಗಿರಲಿ ‘ಸನಾತನ ಪ್ರಭಾತ’ನ ಪ್ರತ್ಯಕ್ಷ ವಿತರಣೆಯ ಮೇಲೆ ಸ್ವಲ್ಪ ಪರಿಣಾಮವಾದರೂ ‘ಸನಾತನ ಪ್ರಭಾತ’ ಇ-ಪೇಪರ್ನ ಸ್ವರೂಪದಲ್ಲಿ ಎಲ್ಲರಿಗೆ ಓದಲು ಸಿಗಲಿದೆ. ಈ ಕುರಿತು ಸವಿಸ್ತಾರವಾದ ಮಾಹಿತಿ ಶೀಘ್ರದಲ್ಲೇ ಪ್ರಕಟಿಸಲಿದ್ದೇವೆ.
– ಸಂಪಾದಕರು, ಸನಾತನ ಪ್ರಭಾತ ನಿಯತಕಾಲಿಕೆಗಳು
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
ಮುಸಲ್ಮಾನರ ಒತ್ತಡಕ್ಕೆ ಮಣಿದು ಶಾಸಕ ಟಿ. ರಾಜಾಸಿಂಗ್ ಅವರ ಧರ್ಮಸಭೆಗೆ ಅನುಮತಿ ನಿರಾಕರಿಸಿದ ಪೊಲೀಸರು !
ಮಂತ್ರಾಲಯದ ಪ್ರವೇಶದ್ವಾರದಲ್ಲಿದ್ದ ಅಶುದ್ಧ ಭಾಷೆಯ ಫಲಕವನ್ನು ಆಡಳಿತವು ತೆರವುಗೊಳಿಸಿದೆ !
ಮಹಾರಾಷ್ಟ್ರದಲ್ಲಿ ಗಂಭೀರ ಅಪರಾಧಗಳ ಪ್ರಕರಣಗಳ ತೀರ್ಪಿನ ಸ್ಥಿತಿ ಚಿಂತಾಜನಕ!
ಮಹಾರಾಷ್ಟ್ರ : ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶೇ. ೨೫% ರಷ್ಟು ಸೀಟು ಮೀಸಲು; ಅನುದಾನ ನೀಡಲು ಸರಕಾರದ ನಿರಾಸಕ್ತಿ !
ಗೋವಾ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಒಂದು ದಿನದ ಪಾದಯಾತ್ರೆಯ ವಾರಿ !