
‘ಸನಾತನ ಪ್ರಭಾತ’ ನಿಯತಕಾಲಿಕೆಗಳ ಆನ್ಲೈನ್ ಸಂಚಿಕೆಗಳು ಶೀಘ್ರದಲ್ಲೇ ಡಿಜಿಟಲ್ ನ್ಯೂಸ್ ಪೇಪರ ಅಂದರೆ ‘ಇ-ಪೇಪರ್’ನ ಸ್ವರೂಪದಲ್ಲಿ ಪ್ರಕಟಣೆಗೊಳ್ಳಲಿವೆ. ಇದರಿಂದ ಸಾಪ್ತಾಹಿಕ ‘ಸನಾತನ ಪ್ರಭಾತ’ನ ಕನ್ನಡ ಮತ್ತು ಮರಾಠಿ, ಅದೇ ರೀತಿ ಹಿಂದಿ ಹಾಗೂ ಆಂಗ್ಲ ಪಾಕ್ಷಿಕ ಹಾಗೂ ದೈನಿಕ ‘ಸನಾತನ ಪ್ರಭಾತ’ನ ಮಹಾರಾಷ್ಟ್ರ ಹಾಗೂ ಗೋವಾ ಈ ರಾಜ್ಯಗಳ ‘ಮುಂಬಯಿ, ಠಾಣೆ, ರಾಯಗಡ, ಉತ್ತರ ಮಹಾರಾಷ್ಟ್ರ ಹಾಗೂ ವಿದರ್ಭ’, ‘ಪಶ್ಚಿಮ ಮಹಾರಾಷ್ಟ್ರ ಹಾಗೂ ಮರಾಠವಾಡಾ’, ‘ರತ್ನಾಗಿರಿ’ ಮತ್ತು ‘ಗೋವಾ-ಸಿಂಧುದುರ್ಗ’ ಈ ನಾಲ್ಕು ಸಂಚಿಕೆಗಳು ಪ್ರತ್ಯಕ್ಷವಾಗಿ ವಿತರಣೆಯೊಂದಿಗೆ ಅದರ ‘ಇ-ಪೇಪರ’ನ ಸ್ವರೂಪದಲ್ಲಿಯೂ ಸಂಚಾರವಾಣಿ, ಅದೇ ರೀತಿ ಗಣಕಯಂತ್ರಗಳಲ್ಲಿ ಓದಲು ವಾಚಕರಿಗೆ ಲಭ್ಯವಾಗಲಿದೆ.
ಆದ್ದರಿಂದ ಕೊರೋನಾ ಮಹಾಮಾರಿ ಇರಲಿ, ಸಾರಿಗೆ ಮುಷ್ಕರವಾಗಿರಲಿ ಅಥವಾ ಮೂರನೇ ಮಹಾಯುದ್ಧವಾಗಿರಲಿ ‘ಸನಾತನ ಪ್ರಭಾತ’ನ ಪ್ರತ್ಯಕ್ಷ ವಿತರಣೆಯ ಮೇಲೆ ಸ್ವಲ್ಪ ಪರಿಣಾಮವಾದರೂ ‘ಸನಾತನ ಪ್ರಭಾತ’ ಇ-ಪೇಪರ್ನ ಸ್ವರೂಪದಲ್ಲಿ ಎಲ್ಲರಿಗೆ ಓದಲು ಸಿಗಲಿದೆ. ಈ ಕುರಿತು ಸವಿಸ್ತಾರವಾದ ಮಾಹಿತಿ ಶೀಘ್ರದಲ್ಲೇ ಪ್ರಕಟಿಸಲಿದ್ದೇವೆ.
– ಸಂಪಾದಕರು, ಸನಾತನ ಪ್ರಭಾತ ನಿಯತಕಾಲಿಕೆಗಳು
ಸಾಧಕರೇ, ಆಪತ್ಕಾಲದ ಮಾರ್ಗದರ್ಶಕವಾಗಿ ‘ಸನಾತನ ಪ್ರಭಾತ’ದಲ್ಲಿನ ಸಾಧನೆಗೆ ಸಂಬಂಧಿಸಿದ ಮಾರ್ಗದರ್ಶನವನ್ನು ಸಂಗ್ರಹಿಸಿಟ್ಟುಕೊಳ್ಳಿ !
ಮುಂಬಯಿಯ ಹೆಸರಾಂತ ಶಾಲೆಯ ವಿದ್ಯಾರ್ಥಿಗಳು ಇ-ಸಿಗರೇಟು ಸೇದುತ್ತಿರುವುದು ಪತ್ತೆ : ಶಾಲೆಯಿಂದ ಪೋಷಕರಿಗೆ ಜಾಗರೂಕರಾಗಿರಲು ಸೂಚನೆ !
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
ಮುಸಲ್ಮಾನರ ಒತ್ತಡಕ್ಕೆ ಮಣಿದು ಶಾಸಕ ಟಿ. ರಾಜಾಸಿಂಗ್ ಅವರ ಧರ್ಮಸಭೆಗೆ ಅನುಮತಿ ನಿರಾಕರಿಸಿದ ಪೊಲೀಸರು !
ಮಂತ್ರಾಲಯದ ಪ್ರವೇಶದ್ವಾರದಲ್ಲಿದ್ದ ಅಶುದ್ಧ ಭಾಷೆಯ ಫಲಕವನ್ನು ಆಡಳಿತವು ತೆರವುಗೊಳಿಸಿದೆ !