ಸಮಷ್ಟಿಗಾಗಿ ನಾಮಜಪ ಇತ್ಯಾದಿ ಉಪಾಯಗಳನ್ನು ಮಾಡುವ ಸಂತರು ಮತ್ತು ಸಾಧಕರಿಗೆ ವಿನಂತಿ !

ಪರಾತ್ಪರ ಗುರು ಡಾ. ಆಠವಲೆ

‘ಕೆಲವು ಸಂತರು ಮತ್ತು ಸಾಧಕರು ಸಮಷ್ಟಿಗಾಗಿ ನಾಮಜಪ ಮಾಡುವುದು, ಸಾಧಕರಿಗಾಗಿ ನಾಮಜಪ ಮುಂತಾದ ಉಪಾಯಗಳನ್ನು ಮಾಡುವುದು ಇಂತಹ ಸೇವೆಯನ್ನು ಮಾಡುತ್ತಾರೆ; ಆದರೆ ಸದ್ಯದ ಕಾಲದಲ್ಲಿ ಸೂಕ್ಷ್ಮದಲ್ಲಿನ ಯುದ್ಧದ ಸ್ತರವು ಹೆಚ್ಚಾದುದರಿಂದ ಉಪಾಯ ಮಾಡುವವರ ಮೇಲೆಯೂ ಕೆಟ್ಟ ಶಕ್ತಿಗಳ ತೊಂದರೆದಾಯಕ (ಕಪ್ಪು) ಶಕ್ತಿಯ ಆವರಣ ಬರುತ್ತದೆ. ಇಂತಹ ಸಮಯದಲ್ಲಿ ಉಪಾಯ ಮಾಡುವವರು ಸಮಷ್ಟಿಗಾಗಿ ನಾಮಜಪವನ್ನು ಮಾಡುವುದು, ಸಾಧಕರಿಗೆ ಉಪಾಯವನ್ನು ಮಾಡುವುದು, ಇವುಗಳಂತಹ ಸೇವೆಯನ್ನು ಮಾಡದೇ, ತಮಗಾಗಿ ಇರುವ ನಾಮಜಪ ಮುಂತಾದ ಉಪಾಯವನ್ನು ಪೂರ್ಣಗೊಳಿಸಲು ಪ್ರಾಧಾನ್ಯತೆ ನೀಡಬೇಕು. ಇದರಿಂದ ಅವರ ಮೇಲೆ ಬಂದಿರುವ ತೊಂದರೆದಾಯಕ ಶಕ್ತಿಯ ಆವರಣವು ಬೇಗನೆ ಕಡಿಮೆಯಾಗಲು ಸಹಾಯವಾಗುತ್ತದೆ.’

– (ಪರಾತ್ಪರ ಗುರು) ಡಾ. ಆಠವಲೆ (೭.೨.೨೦೨೨)