
‘ಒಂದು ನಗರದಲ್ಲಿ ಸಾಧಕಿಯೊಬ್ಬಳ ಮನೆಗೆ ಅಪರಿಚಿತ ಮಹಿಳೆಯೊಬ್ಬಳು ದ್ವಿಚಕ್ರ ವಾಹನದಿಂದ ಬಂದಿದ್ದಳು. ಆಗ ಆ ಸಾಧಕಿಯು ಪರವೂರಿಗೆ ಹೋಗಿದ್ದಳು. ಆಕೆಯ ಪತಿ ಮನೆಯಲ್ಲಿದ್ದರು. ಈ ಮಹಿಳೆಯು ಸಾಧಕಿಯ ಪತಿಗೆ, “ನಿಮ್ಮ ಪತ್ನಿಯ ಬಳಿ ಸನಾತನದ ಗ್ರಂಥ ಮತ್ತು ಸನಾತನದ ಪಂಚಾಂಗ ವಿತರಣೆಯ ೪-೫ ಸಾವಿರ ರೂಪಾಯಿ ಹಣವಿದೆ. ಅದನ್ನು ನನಗೆ ಕೊಡಿ’, ಎಂದು ಹೇಳಿದಳು. ಆಗ ಸಾಧಕಿಯ ಪತಿಯು ಸಾಧಕಿಗೆ ಈ ಬಗ್ಗೆ ದೂರವಾಣಿಯ ಮೂಲಕ ಕೇಳಿದಾಗ, ‘ನಾನು ಯಾರಿಗೂ ಹಣ ಕೊಡಲು ಬಾಕಿ ಇಲ್ಲ, ಅಲ್ಲದೇ ಇದಕ್ಕಾಗಿ ಹಣವನ್ನು ತೆಗೆದುಕೊಳ್ಳಲು ಯಾರೂ ನನ್ನ ಬಳಿಗೆ ಬರಲಿಕ್ಕಿರಲಿಲ್ಲ’ ಎಂದು ಸಾಧಕಿ ಹೇಳಿದರು. ಆಗ ಸಾಧಕಿಯ ಪತಿಯು ಸಂಬಂಧಪಟ್ಟ ಮಹಿಳೆಗೆ ಹಣ ನೀಡುವುದಿಲ್ಲ ಎಂದು ಹೇಳಿದರು. ಅದಕ್ಕೆ ಆ ಮಹಿಳೆಯು, ‘ನಾನು ಸಾಧಕಿಯನ್ನು ನಂತರ ಸಂಪರ್ಕಿಸುತ್ತೇನೆ’, ಎಂದು ಉತ್ತರಿಸಿ ಹೊರಟುಹೋದಳು.
ಈ ರೀತಿಯಾಗಿ ಅಪರಿಚಿತರು ಮನೆಗೆ ಬಂದು ಅಥವಾ ಇತರ ಎಲ್ಲಿಯೂದರೂ ಭೇಟಿಯಾಗಿ ಅಥವಾ ಸಂಚಾರವಾಣಿ ಕರೆ ಮಾಡಿ ಗ್ರಂಥ ಮತ್ತು ಪಂಚಾಂಗಗಳ ವಿತರಣೆಯ ಅಥವಾ ಇತರ ಯಾವುದೇ ಕಾರಣಕ್ಕಾಗಿ ಹಣವನ್ನು ಕೇಳಿದರೆ, ಸಾಧಕರು ಅದನ್ನು ನೀಡಬಾರದು. ಸಾಧಕರು ತಾವು ಅಥವಾ ತಮ್ಮ ಕುಟುಂಬದವರು ಮೋಸ ಹೋಗದಂತೆ ಜಾಗೃತರಾಗಿರಬೇಕು. ಇಂತಹ ಘಟನೆಗಳು ಎಲ್ಲಿಯಾದರೂ ಘಟಿಸಿದರೆ ಕೂಡಲೇ ಸಾಧಕರು ಜವಾಬ್ದಾರ ಸಾಧಕರಿಗೆ ಮಾಹಿತಿ ನೀಡಿ ಮುಂದಿನ ಪ್ರಕ್ರಿಯೆ ಮಾಡಬೇಕು’.
– ಶ್ರೀ. ವೀರೇಂದ್ರ ಮರಾಠೆ, ವ್ಯವಸ್ಥಾಪಕೀಯ ವಿಶ್ವಸ್ಥರು, ಸನಾತನ ಸಂಸ್ಥೆ. (೨೫.೧೧.೨೦೨೧)
ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಅರ್ಪಣೆದಾರರೇ, ಅಧಿಕ ಮಾಸದ ನಿಮಿತ್ತ ಧರ್ಮಪ್ರಸಾರದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವ ಸನಾತನದ ಆಶ್ರಮಗಳಿಗೆ ಅನ್ನದಾನ ಮಾಡಿ ಪುಣ್ಯಸಂಚಯದೊಂದಿಗೆ ಆಧ್ಯಾತ್ಮಿಕ ಲಾಭವನ್ನು ಪಡೆಯಿರಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಸಂಕ್ಷಿಪ್ತ ಚರಿತ್ರೆ
‘ಸನಾತನ ಪ್ರಭಾತ’ಕ್ಕಾಗಿ ಕೇವಲ ನಾವೀನ್ಯ ಮತ್ತು ವೈಶಿಷ್ಟ್ಯಪೂರ್ಣ ಲೇಖನಗಳನ್ನು ಸಂಕ್ಷಿಪ್ತವಾಗಿ ಮತ್ತು ನಿಖರವಾಗಿ ಕಳುಹಿಸಿ !