
ರಾಮನಾಥಿ (ಗೋವಾ) – ಸಂತಪತಿ ಪೂ. ನೀಲಕಂಠ ದೀಕ್ಷಿತ ಇವರ ಸೇವೆಯನ್ನು ಶಿಷ್ಯಭಾವದಿಂದ ಮಾಡಿದ, ವ್ರತಸ್ಥರಾಗಿ ಜೀವನವನ್ನು ನಡೆಸಿದ ಮತ್ತು ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆ ಇವರ ಬಗ್ಗೆ ಉತ್ಕಟ ಭಾವವಿರುವ ಬೆಳಗಾವಿಯ ಶ್ರೀಮತಿ ವಿಜಯಾ ದೀಕ್ಷಿತ (೮೯ ವರ್ಷ) ಇವರು ಸಂತಪದವಿಯಲ್ಲಿ ವಿರಾಜಮಾನರಾದರು.

ಕಾರ್ತಿಕ ಶುಕ್ಲ ಪಕ್ಷ ತ್ರಯೋದಶಿ (೧೭.೧೧.೨೦೨೧) ಯಂದು ಅವರ ೮೯ ನೇಯ ಹುಟ್ಟುಹಬ್ಬದ ದಿನದಂದು ಸನಾತನದ ಶ್ರೀಸತ್ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳ ಇವರು ಈ ಆನಂದದ ವಾರ್ತೆಯನ್ನು ಘೋಷಿಸಿದರು. ಈ ವಾರ್ತೆಯನ್ನು ಕೇಳಿ ಶ್ರೀಮತಿ ವಿಜಯಾ ದೀಕ್ಷಿತ ಇವರ ಭಾವಜಾಗೃತವಾಯಿತು. ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಪೂ. ಅಜ್ಜಿಯವರಿಗೆ ಪುಷ್ಪಹಾರವನ್ನು ಹಾಕಿ, ಹಾಗೆಯೇ ಉಡುಗೊರೆಯನ್ನು ನೀಡಿ ಅವರನ್ನು ಸನ್ಮಾನಿಸಿದರು, ಹಾಗೆಯೇ ಹುಟ್ಟುಹಬ್ಬದ ನಿಮಿತ್ತ ಅವರಿಗೆ ಆರತಿಯನ್ನು ಬೆಳಗಿದರು.
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು