ಪರಾತ್ಪರ ಗುರು ಡಾ. ಆಠವಲೆ ಇವರ ಬಗ್ಗೆ ಉತ್ಕಟ ಭಾವವಿರುವ ಬೆಳಗಾವಿಯ ಶ್ರೀಮತಿ ವಿಜಯಾ ದೀಕ್ಷಿತ ಇವರು ಸನಾತನದ ೧೧೩ ನೇ ವ್ಯಷ್ಟಿ ಸಂತಪದವಿಯಲ್ಲಿ ವಿರಾಜಮಾನ !

ಶ್ರೀಮತಿ ವಿಜಯಾ ದೀಕ್ಷಿತ

ರಾಮನಾಥಿ (ಗೋವಾ) – ಸಂತಪತಿ ಪೂ. ನೀಲಕಂಠ ದೀಕ್ಷಿತ ಇವರ ಸೇವೆಯನ್ನು ಶಿಷ್ಯಭಾವದಿಂದ ಮಾಡಿದ, ವ್ರತಸ್ಥರಾಗಿ ಜೀವನವನ್ನು ನಡೆಸಿದ ಮತ್ತು ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆ ಇವರ ಬಗ್ಗೆ ಉತ್ಕಟ ಭಾವವಿರುವ ಬೆಳಗಾವಿಯ ಶ್ರೀಮತಿ ವಿಜಯಾ ದೀಕ್ಷಿತ (೮೯ ವರ್ಷ) ಇವರು ಸಂತಪದವಿಯಲ್ಲಿ ವಿರಾಜಮಾನರಾದರು.

ಪೂ. ವಿಜಯಾ ದೀಕ್ಷಿತ ಇವರಿಗೆ ಉಡುಗೊರೆಯನ್ನು ಕೊಟ್ಟು ಸನ್ಮಾನ ಮಾಡುವಾಗ ಶ್ರೀಸತ್‌ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳ

ಕಾರ್ತಿಕ ಶುಕ್ಲ ಪಕ್ಷ ತ್ರಯೋದಶಿ (೧೭.೧೧.೨೦೨೧) ಯಂದು ಅವರ ೮೯ ನೇಯ ಹುಟ್ಟುಹಬ್ಬದ ದಿನದಂದು ಸನಾತನದ ಶ್ರೀಸತ್‌ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳ ಇವರು ಈ ಆನಂದದ ವಾರ್ತೆಯನ್ನು ಘೋಷಿಸಿದರು. ಈ ವಾರ್ತೆಯನ್ನು ಕೇಳಿ ಶ್ರೀಮತಿ ವಿಜಯಾ ದೀಕ್ಷಿತ ಇವರ ಭಾವಜಾಗೃತವಾಯಿತು. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಪೂ. ಅಜ್ಜಿಯವರಿಗೆ ಪುಷ್ಪಹಾರವನ್ನು ಹಾಕಿ, ಹಾಗೆಯೇ ಉಡುಗೊರೆಯನ್ನು ನೀಡಿ ಅವರನ್ನು ಸನ್ಮಾನಿಸಿದರು, ಹಾಗೆಯೇ ಹುಟ್ಟುಹಬ್ಬದ ನಿಮಿತ್ತ ಅವರಿಗೆ ಆರತಿಯನ್ನು ಬೆಳಗಿದರು.