ಕಾಬುಲ್ (ಅಫಘಾನಿಸ್ತಾನ) – ಅಫಘಾನಿಸ್ತಾನದಲ್ಲಿ ತಾಲಿಬಾನ್ ಸರಕಾರ ರಚನೆಯಾಗಿದ್ದರೂ ಅದರಲ್ಲಿಯ ಇಬ್ಬರು ಪ್ರಮುಖ ನಾಯಕರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ತಾಲಿಬಾನ್ನ ಸರ್ವೋಚ್ಚ ನಾಯಕ ಮುಲ್ಲಾ (ಇಸ್ಲಾಮಿಕ್ ವಿದ್ವಾಂಸ) ಹೈಬತುಲ್ಲಾಹ ಅಖುಂದಜಾದಾ ಮತ್ತು ಪ್ರಸ್ತುತ ಸರಕಾರದ ಉಪಪ್ರಧಾನಿ ಮುಲ್ಲಾ ಅಬ್ದುಲ್ ಘನಿ ಬರಾದಾರ್ ಇವರಿಬ್ಬರು ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದು ಸಾರ್ವಜನಿಕ ಸ್ಥಳಗಳಲ್ಲಿ ಅವರು ಎಲ್ಲಿಯೂ ಕಾಣಲಿಲ್ಲ. ಆದ್ದರಿಂದ ‘ಈ ನಾಯಕರು ಎಲ್ಲಿದ್ದಾರೆ ?’ ‘ಅವರ ಕೊಲೆಯಾಗಿದೆಯೇ ?’ ಎಂಬ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಾಗೂ ಪ್ರಸಾರ ಮಾಧ್ಯಮಗಳಲ್ಲಿ ಚರ್ಚೆಗಳು ನಡೆಯುತ್ತಿವೆ.
Many of the Taliban’s leaders move in the shadows, their whereabouts unknown, inevitably generating rumors about their health and about possible internal disagreements. https://t.co/kguE66Sw6G
— CNN (@CNN) September 14, 2021
೧. ತಾಲಿಬಾನ್ ಕಾಬೂಲ್ ಮೇಲೆ ಹಿಡಿತ ಸಾಧಿಸಿದ ನಂತರ ಸರ್ವೋಚ್ಚ ನಾಯಕ ಮುಲ್ಲಾ ಹೈಬತುಲ್ಲಾಹ ಅಖುಂದಜಾದಾ ನಾಪತ್ತೆಯಾಗಿದ್ದಾನೆ; ಆದರೆ ಹೊಸ ಸರಕಾರದ ಘೋಷಣೆಯ ನಂತರ, ಅಖುಂದಜಾದಾ ಪರವಾಗಿ ಸಾರ್ವಜನಿಕ ಮನವಿಯನ್ನು ನೀಡಲಾಗಿತ್ತು. ‘ಅಖುಂದಜಾದಾ ಶೀಘ್ರದಲ್ಲೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿದ್ದ’, ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದನು. ಆದರೆ ಆತ ಇನ್ನೂ ಬೆಳಕಿಗೆ ಬಂದಿಲ್ಲ.
೨. ‘ಉಪಪ್ರಧಾನಿ ಮುಲ್ಲಾ ಘನಿ ಬರಾದಾರ್ ಕೊಲ್ಲಲ್ಪಟ್ಟರು ಅಥವಾ ಗಂಭೀರವಾಗಿ ಗಾಯಗೊಂಡಿದ್ದಾನೆ’, ಎಂದು ಹೇಳಲಾಗುತ್ತಿದೆ. ಕೆಲವು ದಿನಗಳ ಹಿಂದೆ ಬರಾದಾರ್ ಮತ್ತು ಭಯೋತ್ಪಾದಕ ಸಂಘಟನೆಯಾದ ಹಕ್ಕಾನಿ ನೆಟವರ್ಕ್ ನಡುವೆ ರಕ್ತಸಿಕ್ತ ಸಂಘರ್ಷ ನಡೆದಿರುವ ವರದಿಗಳು ಬಂದಿದ್ದವು.
ಮತ್ತೊಂದೆಡೆ ಮುಲ್ಲಾ ಬರಾದಾರ್ ಒಂದು ಆಡಿಯೋ ಸಂದೇಶವನ್ನು ಜಾರಿಗೊಳಿಸಿ ‘ನಾನು ಚೆನ್ನಾಗಿದ್ದೇನೆ’, ಎಂದು ಹೇಳಿದ್ದನು.

ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers
ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಧ್ವನಿ ಎತ್ತಿದ ಮೆಹರಂಗ್ ಬಲೋಚ್ ಗೆ ಪಾಕಿಸ್ತಾನದಿಂದ ಜೀವಾವಧಿ ಶಿಕ್ಷೆ !