ಅಂತಹ ಪ್ರತ್ಯೇಕತಾವಾದಿ ಪಾದ್ರಿಗಳನ್ನು ಗುರುತಿಸಿ!

ಪಾದ್ರಿ ಉಪೇಂದ್ರ ರಾವ್

೧. ಅಂತಹ ಪ್ರತ್ಯೇಕತಾವಾದಿ ಪಾದ್ರಿಗಳನ್ನು ಗುರುತಿಸಿ!

ಆಲ್ ಇಂಡಿಯಾ ಟ್ರೂ ಕ್ರಿಶ್ಚಿಯನ್ ಕೌನ್ಸಿಲ್ ಪರವಾಗಿ ಬೈಬಲ್ ಓಪನ್ ಯೂನಿವರ್ಸಿಟಿ ಇಂಟರನ್ಯಾಶನಲ್ ನ ಉಪನಿರ್ದೇಶಕ ಪಾದ್ರಿ ಉಪೇಂದ್ರ ರಾವ್ ಅವರು ಭಾರತವನ್ನು ವಿಭಜಿಸಬೇಕು ಮತ್ತು ಕ್ರೈಸ್ತರಿಗೆ ದೇಶದ ಅರ್ಧದಷ್ಟು ಭಾಗವನ್ನು ಪ್ರತ್ಯೇಕಿಸಿ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

೨. ಪಾಕಿಸ್ತಾನದಲ್ಲಿರುವ ಹಿಂದೂಗಳು ಮತ್ತು ದೇವಾಲಯಗಳ ದಯನೀಯ ಪರಿಸ್ಥಿತಿಯನ್ನು ತಿಳಿಯಿರಿ!

ಪಾಕಿಸ್ತಾನದ ಖಿಪ್ರೊ ಪ್ರದೇಶದಲ್ಲಿ ಹಿಂದೂಗಳು ಶ್ರೀಕೃಷ್ಣ ಜಯಂತಿಯ ದಿನದಂದು ಶ್ರೀಕೃಷ್ಣ ದೇವಸ್ಥಾನದಲ್ಲಿ ಪೂಜೆ ಮಾಡುತ್ತಿದ್ದ ಸಮಯದಲ್ಲಿ ಅವರ ಮೇಲೆ ಮತಾಂಧರು ದಾಳಿ ಮಾಡಿದರು ಮತ್ತು ಥಳಿಸಿದರು. ಹಾಗೆಯೇ ಇಲ್ಲಿನ ಶ್ರೀಕೃಷ್ಣನ ವಿಗ್ರಹವನ್ನು ಧ್ವಂಸ ಮಾಡಿದರು.

೩. ಕಾಂಗ್ರೆಸ್ ಹಿಂದೂ ದೇವತೆಗಳನ್ನು ಅವಮಾನಿಸುತ್ತದೆ!

ಭೋಪಾಲ್ (ಮಧ್ಯಪ್ರದೇಶ)ದ ಕಾಂಗ್ರೆಸ್ ಕಚೇರಿಯ ಹೊರಗಿನ ಜಾಹೀರಾತು ಫಲಕದಲ್ಲಿ, ಕಾಂಗ್ರೆಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಕಮಲನಾಥ ಅವರನ್ನು ಶ್ರೀಕೃಷ್ಣನ ರೂಪದಲ್ಲಿ ತೋರಿಸಲಾಗಿದ್ದು ಭಾಜಪ ನಾಯಕ ಮತ್ತು ರಾಜ್ಯದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ ಅವರನ್ನು ಕಂಸನ ರೂಪದಲ್ಲಿ ತೋರಿಸಲಾಗಿದೆ.

೪. ಇದಕ್ಕೆ ಹಿಂದೂರಾಷ್ಟ್ರವೇ ಅಗತ್ಯವಿದೆ!

ಆಕಳು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಆದ್ದರಿಂದ ಆಕಳನ್ನು ‘ರಾಷ್ಟ್ರೀಯ ಪ್ರಾಣಿ’ ಎಂದು ಘೋಷಿಸಬೇಕು. ಆಕಳು ಆನಂದವಾಗಿದ್ದರೆ ದೇಶವು ಸುಭಿಕ್ಷವಾಗಿರುತ್ತದೆ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯವು ಅಭಿಪ್ರಾಯ ನೀಡಿದೆ.

೫. ಅಂತಹ ದ್ವಿಮುಖ ನೀತಿ ಏಕೆ?

ಮೆಕ್ಕಾದಲ್ಲಿ ಸಿಗರೇಟ್ ಮಾರಾಟ ಮಾಡಲು ಅನುಮತಿ ಇಲ್ಲ. ೫೬ ಇಸ್ಲಾಮಿಕ್ ದೇಶಗಳಲ್ಲಿ, ಹಲಾಲ್ ಹೊರತುಪಡಿಸಿ ಯಾವುದೇ ಮಾಂಸವನ್ನು ಅನುಮತಿಸಲಾಗುವುದಿಲ್ಲ; ಆದಾಗ್ಯೂ, ಮಥುರಾದಲ್ಲಿ ಮಾಂಸ ಮತ್ತು ಮದ್ಯ ಮಾರಾಟದ ನಿಷೇಧವನ್ನು ಮುಸಲ್ಮಾನರು ವಿರೋಧಿಸಿದ್ದಾರೆ. – ಆರಿಫ್ ಅಜಾಕಿಯಾ, ಪಾಕಿಸ್ತಾನಿ ಮೂಲದ ಮಾನವ ಹಕ್ಕುಗಳ ಕಾರ್ಯಕರ್ತ

೬. ಓಲೈಕೆಗಾಗಿ ಜಾತ್ಯತೀತ ಸಂವಿಧಾನದ ಉಲ್ಲಂಘನೆಯಾಗಿದ್ದನ್ನು ತಿಳಿಯಿರಿ!

ಜಾರ್ಖಂಡ್‌ದಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ ಸರಕಾರವು ವಿಧಾನಸಭೆಯಲ್ಲಿ ನಮಾಜುಪಠಣಕ್ಕಾಗಿ ಪ್ರತ್ಯೇಕ ಕೊಠಡಿಯನ್ನು ಕಾಯ್ದಿರಿಸಲಾಗಿದೆ.

೭. ಇಂತಹ ದೇಶದ್ರೋಹಿಗಳನ್ನು ಗಲ್ಲಿಗೇರಿಸಿ!

ಪ್ರತ್ಯೇಕತಾವಾದಿ ಹುರಿಯತ್ ಕಾನ್ಫರೆನ್ಸ್‌ನ ನಾಯಕ ಸೈಯದ್ ಅಲಿ ಶಾ ಗಿಲಾನಿ ಅವರ ಮೃತದೇಹವನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹೂಳುವ ಮೊದಲು ಅವರ ಕುಟುಂಬದವರು ಪಾಕಿಸ್ತಾನದ ರಾಷ್ಟ್ರಧ್ವಜವನ್ನು ಸುತ್ತಿದ್ದರು. ಆದ್ದರಿಂದ, ಅವರ ವಿರುದ್ಧ ಅಪರಾಧಗಳನ್ನು ದಾಖಲಿಸಲಾಗಿದೆ.