ಶ್ರೀಕೃಷ್ಣ ಜಯಂತಿಯ ಹಿಂದಿನ ದಿನ ಸಾಯಂಕಾಲ ‘ಆನ್ಲೈನ್’ ಕೃಷ್ಣಾನಂದ ಸಮಾರಂಭದ ಆಚರಣೆ!


ಪುಣೆ – ವಯಸ್ಸಾಗಿದ್ದರೂ ಅನಾರೋಗ್ಯದಲ್ಲಿ ಒಬ್ಬಂಟಿಗರಾಗಿ ಎಲ್ಲ ಪರಿಸ್ಥಿತಿಗಳನ್ನು ನಿಭಾಯಿಸುವ, ‘ಗುರುದೇವರು ಜೊತೆಗಿದ್ದಾರೆ, ಎಂಬ ಅಖಂಡ ಭಾವವಿರುವ, ಹಾಗೆಯೇ ಮೊದಲಿನಿಂದಲೇ ಸ್ಥಿರತೆ ಈ ಗುಣವನ್ನು ಹೊಂದಿರುವ ಶ್ರೀಮತಿ ಉಷಾ ಕುಲಕರ್ಣಿ ಇವರನ್ನು ಸನಾತನದ ೧೧೦ ನೇ ವ್ಯಷ್ಟಿ ಸಂತರೆಂದು ಘೋಷಿಸಲಾಯಿತು. ಇವರೊಂದಿಗೆ ಶಾಂತ, ನಮ್ರತೆ ಸ್ವಭಾವ ಮತ್ತು ಕಡಿಮೆ ಅಹಂ ಇರುವ ಮತ್ತು ಶಸ್ತ್ರಚಿಕಿತ್ಸೆ ನಡೆಯುವಾಗ ಈಶ್ವರನ ಅಖಂಡ ಅನುಸಂಧಾನದಲ್ಲಿದ್ದ ಶ್ರೀ. ಗಜಾನನ ಸಾಠೆ ಇವರು ೧೧೧ ನೇ ವ್ಯಷ್ಟಿ ಸಂತರೆಂದು ಘೋಷಿಸಲಾಯಿತು. ಈ ಭಾವಪ್ರಸಂಗದಲ್ಲಿ ಸನಾತನದ ಧರ್ಮಪ್ರಚಾರಕರಾದ ಸದ್ಗುರು (ಕು.) ಸ್ವಾತಿ ಖಾಡ್ಯೆ ಇವರ ಶುಭಹಸ್ತದಿಂದ ಪೂ. (ಶ್ರೀಮತಿ) ಉಷಾ ಕುಲಕರ್ಣಿ ಇವರಿಗೆ ಪರಾತ್ಪರ ಗುರು ಡಾ. ಆಠವಲೆಯವರ ಛಾಯಾಚಿತ್ರವನ್ನು ಉಡುಗೊರೆಯಾಗಿ ನೀಡಿ ಅವರ ಸನ್ಮಾನ ಮಾಡಲಾಯಿತು ಮತ್ತು ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಕೃಷ್ಣಾಜಿ ಪಾಟೀಲ (ಆಧ್ಯಾತ್ಮಿಕ ಮಟ್ಟ ಶೇ. ೬೮ ) ಇವರು ಪೂ. ಗಜಾನನ ಸಾಠೆ ಇವರಿಗೆ ಪುಷ್ಪಹಾರವನ್ನು ಅರ್ಪಿಸಿ ಸನ್ಮಾನ ಮಾಡಿದರು. ಸದ್ಗುರು (ಕು.) ಸ್ವಾತಿ ಖಾಡ್ಯೆ ಇವರು ಪೂ. ಗಜಾನನ ಸಾಠೆ ಇವರಿಗೆ ಪರಾತ್ಪರ ಗುರು ಡಾ. ಆಠವಲೆಯವರ ಛಾಯಾ ಚಿತ್ರವನ್ನು ಉಡುಗೊರೆಯಾಗಿ ನೀಡಿ ಅವರ ಸನ್ಮಾನ ಮಾಡಿದರು.
ಈ ಸಮಯದಲ್ಲಿ ಪೂ. ಉಷಾ ಕುಲಕರ್ಣಿ ಇವರ ಮಗಳು ಪುಣೆ ಜಿಲ್ಲೆಯಲ್ಲಿ ಲೆಕ್ಕಪತ್ರದ ಸೇವೆಯನ್ನು ಮಾಡುವ ಸೌ. ಜ್ಯೋತಿ ದಾತೆ (ಆಧ್ಯಾತ್ಮಿಕ ಮಟ್ಟ ಶೇ. ೬೨) ಮತ್ತು ಅಳಿಯ ಆಧುನಿಕ ವೈದ್ಯ (ಡಾ.) ನರೇಂದ್ರ ದಾತೆ (ಆಧ್ಯಾತ್ಮಿಕ ಮಟ್ಟ ಶೇ. ೬೨) ಇವರು ಮತ್ತು ಇತರ ಸಂಬಂಧಿಕರು ಸಹ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !