Akhilesh Yadav Gaushala Bad Smell: ‘ಭಾಜಪದವರಿಗೆ ದುರ್ವಾಸನೆ ಇಷ್ಟ ಹಾಗಾಗಿ ಗೋಶಾಲೆಗಳನ್ನು ಕಟ್ಟುತ್ತಾರೆ! – ಅಖಿಲೇಶ ಯಾದವ

ಗೋವಿನ ಬಗ್ಗೆ ಖೇದಕರ ಹೇಳಿಕೆ ನೀಡಿದ ಸಮಾಜವಾದಿ ಪಕ್ಷದ ಅಧ್ಯಕ್ಷ ಹಾಗೂ ಸಂಸದ ಅಖಿಲೇಶ ಯಾದವ

ಕನ್ನೌಜ (ಉತ್ತರಪ್ರದೇಶ) – ನಾವು ಕನ್ನೌಜದಲ್ಲಿ ಬಾಂಧವ್ಯದ ಪರಿಮಳ ಪಸರಿಸುತ್ತೇವೆ. ಇನ್ನೊಂದೆಡೆ ಭಾಜಪ ದ್ವೇಷದ ದುರ್ವಾಸನೆ ಪಸರಿಸುತ್ತಿದ್ದಾರೆ. ಭಾಜಪದವರಿಗೆ ದುರ್ವಾಸನೆ ಹಿಡಿಸುತ್ತದೆ, ಆದ್ದರಿಂದ ಅವರು ಗೋಶಾಲೆಗಳನ್ನು ಕಟ್ಟುತ್ತಾರೆ. ನಮಗೆ ಪರಿಮಳ ಬಹಳ ಇಷ್ಟ ಆಗುತ್ತದೆ ಎಂದು ನಾವು ‘ಪರ್ಫ್ಯೂಮ್ ಪಾರ್ಕ್’ (ಅತ್ತರ ಸಂಗ್ರಹಾಲಯ) ನಿರ್ಮಾಣ ಮಾಡಿದೆವು. ನಾನು ಕನ್ನೌಜದ ಜನರಿಗೆ ಭಾಜಪದವರು ಪಸರಿಸಿರುವ ಈ ದುರ್ವಾಸನೆಯನ್ನು ದೂರಗೊಳಿಸಲು ಕರೆ ನಿಡುತ್ತೇನೆ. ಕೆಲವು ಪ್ರಮಾಣದಲ್ಲಿ ಈ ದುರ್ವಾಸನೆ ಮೊದಲೇ ನಾಶವಾಗಿದೆ; ಆದರೆ ಮುಂಬರುವ ಚುನಾವಣೆಯಲ್ಲಿ ಅದನ್ನು ಸಂಪೂರ್ಣವಾಗಿ ತೆಗೆದು ಹಾಕಬೇಕು ಕಾರಣ ಕನ್ನೌಜ ದ ನಿಂತಿರುವ ಅಭಿವೃದ್ಧಿ ಕಾರ್ಯಗಳು ಮುಂದೆ ಸಾಗುವುದು, ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಹಾಗೂ ಸಂಸದ ಅಖಿಲೇಶ ಯಾದವ್ ಇವರು ಹೇಳಿಕೆ ನೀಡಿದರು.

ಭಾಜಪದ ಸಂಸದ ಸಂಬಿತ ಪಾತ್ರ ಇವರು ಅಖಿಲೇಶ ಯಾದವ್ ಇವರನ್ನು ಟೀಕೆಸಿದ್ದಾರೆ. ಭಾರತದಲ್ಲಿ ವಾಸಿಸುವವರಿಗೆ ಗೋವಿನ ದುರ್ವಾಸನೆ ಬರುತ್ತಿದ್ದರೆ, ಅಂಥವರು ಎಲ್ಲಿ ಸನಾತನದ ಅವಮಾನ ಮಾಡಬಹುದು ಅಲ್ಲಿ ತಮ್ಮ ನೆಲೆವನ್ನು ಹುಡುಕಲಿ ಎಂದು ಹೇಳಿದರು. ಈ ಎಲ್ಲಾ ಪಕ್ಷಗಳು ಸನಾತನದ ವಿರುದ್ಧ ಮಾತನಾಡುತ್ತಾರೆ ಮತ್ತು ಸನಾತನದ ವಿರುದ್ಧ ಕೆಲಸ ಕೂಡ ಮಾಡುತ್ತಾರೆ. ಮಧ್ಯಪ್ರದೇಶದಲ್ಲಿನ ಕಾಂಗ್ರೆಸ್ ಶಾಸಕ ರಾಜೇಂದ್ರ ಕುಮಾರ್ ಸಿಂಹ ಇವರು, ಬೇರೆ ಧರ್ಮದ ಹೊಲದಲ್ಲಿ ಪ್ರವೇಶಿಸಿ ಮೇಯಲು ಭಾಜಪ ಸಾಧು, ಸಂತರು, ಮತ್ತು ಮಂಡಲೇಶ್ವರ ಇವರ ರೂಪದಲ್ಲಿ ಘುಳಿಯನ್ನು ಬಿಟ್ಟಿದ್ದಾರೆ’ ಎಂದು ಹೇಳಿದರು. ಒಂದೆಡೆ ಅಖಿಲೇಶ ಯಾದವ್ ಇವರಿಗೆ ಗೋವಿನಲ್ಲಿ ದುರ್ವಾಸನೆ ಕಾಣುತ್ತದೆ, ಇನ್ನೊಂದೆಡೆಗೆ ಕಾಂಗ್ರೆಸ್ಸಿನ ನಾಯಕ ರಾಹುಲ್ ಗಾಂಧಿ ಇವರ ಪಕ್ಷದ ನಾಯಕ ಸಂತ ಮತ್ತು ಋಷಿಗಳಲ್ಲಿ ಘುಳಿ ನೋಡುತ್ತಾರೆ, ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಈ ಹೇಳಿಕೆಯಿಂದ ಅವರ ವಿರುದ್ಧ ದೂರು ದಾಖಲಿಸಿ ಅವರನ್ನು ಜೈಲಿಗಟ್ಟುವ ಧೈರ್ಯ ಸರಕಾರ ತೋರಿಸಬೇಕು !
  • ಅಖಿಲೇಶ ಯಾದವ್ ಇವರ ತಂದೆ ಮೂಲಾಯಂ ಸಿಂಹ ಇವರು ಕರ ಸೇವಕರ ಮೇಲೆ ಗುಂಡು ಹಾರಿಸಿ ಅವರ ಶವಗಳನ್ನು ಕಲ್ಲು ಕಟ್ಟಿ ಶರಯು ನದಿಯಲ್ಲಿ ಎಸೆದಿದ್ದರು. ಆದ್ದರಿಂದ ಅವರ ಪರಂಪರೆ ಅಖಿಲೇಶ್ ಯಾದವ ಮುಂದುವರಿಸುತ್ತಿದ್ದಾರೆ !