|
ನವದೆಹಲಿ – ಅಪರಾಧ ಮಾಡುವ ಸಿದ್ಧತೆ ಮತ್ತು ವಾಸ್ತವವಾಗಿ ಅಪರಾಧ ಮಾಡುವುದು ಇವೆರಡರ ನಡುವೆ ದೊಡ್ಡ ಅಂತರವಿದೆ. ಸಂತ್ರಸ್ತೆಯ ಸ್ತನಗಳನ್ನು ಸ್ಪರ್ಶಿಸುವುದು, ಆಕೆಯ ಪೈಜಾಮದ ನಾಡಿಯನ್ನು ಬಿಚ್ಚುವುದು ಮತ್ತು ಸಂತ್ರಸ್ತೆಯನ್ನು ಎಳೆದು ಸೇತುವೆಯ ಕೆಳಗೆ ಕರೆದೊಯ್ಯಲು ಪ್ರಯತ್ನಿಸುವುದು ಇವು ಅತ್ಯಾಚಾರದ ಅಪರಾಧವನ್ನು ದಾಖಲಿಸಲು ಸಾಕಾಗುವುದಿಲ್ಲ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ರಾಮ ಮನೋಹರ ನಾರಾಯಣ ಮಿಶ್ರಾ ಅವರು ಕೆಲವು ದಿನಗಳ ಹಿಂದೆ ಒಂದು ಪ್ರಕರಣದ ತೀರ್ಪು ನೀಡುವಾಗ ಹೇಳಿದ್ದರು. ಈ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ, ಸರ್ವೋಚ್ಚ ನ್ಯಾಯಾಲಯವು ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಿ, ಅಲಹಾಬಾದ್ ಉಚ್ಚ ನ್ಯಾಯಾಲಯದ ಈ ತೀರ್ಪು ಸಂಪೂರ್ಣವಾಗಿ ಸಂವೇದನಾರಹಿತ ಮತ್ತು ಅಮಾನವೀಯ ದೃಷ್ಟಿಕೋನವನ್ನು ತೋರಿಸುತ್ತದೆ ಎಂದು ಹೇಳಿದೆ.
ಸರ್ವೋಚ್ಚ ನ್ಯಾಯಾಲಯವು ಉಚ್ಚ ನ್ಯಾಯಾಲಯದ ತೀರ್ಪಿನಲ್ಲಿ ಸ್ವಯಂಪ್ರೇರಿತವಾಗಿ ಮಧ್ಯಪ್ರವೇಶಿಸಿ ಈ ಬಗ್ಗೆ ವಿಚಾರಣೆ ನಡೆಸಲು ನಿರ್ಧರಿಸಿತ್ತು. ಈ ಪ್ರಕರಣದಲ್ಲಿ ತೀರ್ಪು ನೀಡುವಾಗ ಮತ್ತು ಉಚ್ಚ ನ್ಯಾಯಾಲಯದ ತೀರ್ಪು ತಪ್ಪಾಗಿದೆ ಎಂದು ಹೇಳುವಾಗ, ಅದರ ಕೆಲವು ಟಿಪ್ಪಣಿಗಳಲ್ಲಿ ಸೂಕ್ಷ್ಮತೆಯ ಕೊರತೆ ಕಂಡುಬರುತ್ತಿದೆ ಎಂದು ಹೇಳಲು ನಮಗೆ ವಿಷಾದವಾಗುತ್ತದೆ. ಉಚ್ಚ ನ್ಯಾಯಾಲಯದ ತೀರ್ಪು ನಮಗೆ ಆಘಾತಕಾರಿಯಾಗಿತ್ತು ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.
ಪ್ರಕರಣವೇನು?
ಉತ್ತರ ಪ್ರದೇಶದ ಕಾಸ್ಗಂಜ್ನಲ್ಲಿ 2011ರಲ್ಲಿ ಈ ಅಪರಾಧ ನಡೆದಿತ್ತು. ಇಬ್ಬರು ಆರೋಪಿಗಳು 11 ವರ್ಷದ ಬಾಲಕಿಯನ್ನು ಕಾರಿನಲ್ಲಿ ಬಿಡುವುದಾಗಿ ಹೇಳಿ ಅತ್ಯಾಚಾರ ಮಾಡಲು ಪ್ರಯತ್ನಿಸಿದ್ದರು. ಇಬ್ಬರೂ ಆಕೆಯ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸಿದರು; ಆದರೆ ಪಾದಚಾರಿಗಳು ಅವರನ್ನು ತಡೆದ ನಂತರ ಇಬ್ಬರೂ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು.