
‘ಕೆಲವು ಸಾಧಕರಿಗೆ ‘ನನ್ನ ಆಧ್ಯಾತ್ಮಿಕ ಮಟ್ಟ ಶೇಕಡಾ ೬೦ ರಷ್ಟು ಏಕೆ ಆಗುತ್ತಿಲ್ಲ ? ಎಂದು ವಿಚಾರ ಮಾಡಿ ನಿರಾಶೆ ಬರುತ್ತದೆ. ಅಂತಹ ಸಾಧಕರು ಗಮನದಲ್ಲಿಡಬೇಕಾದ ಅಂಶವೆಂದರೆ, ‘ಶೇಕಡಾ ೬೦ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಪಡೆಯಲು ಪೂರ್ವಜನ್ಮದ ಸಾಧನೆ, ಸಂಚಿತ, ಪ್ರಾರಬ್ಧ, ಭಾವ, ತಳಮಳ, ಕೆಟ್ಟ ಶಕ್ತಿಗಳ ತೊಂದರೆ, ಸ್ವಭಾವದೋಷ, ಅಹಂ, ಸಾಧನೆಗಾಗಿ ಇಡೀ ವರ್ಷದಲ್ಲಿ ಮಾಡಿದ ಪ್ರಯತ್ನ ಇತ್ಯಾದಿ ಅನೇಕ ಅಂಶಗಳು ಕಾರಣವಿರುತ್ತವೆ. ಒಬ್ಬ ಸಾಧಕನ ಪ್ರಾರಬ್ಧ ಹೆಚ್ಚು ಇದ್ದಲ್ಲಿ ಅವನ ಉನ್ನತಿಗೆ ಸಮಯ ತಗಲುತ್ತದೆ. ಏಕೆಂದರೆ ಪ್ರಾರಬ್ಧವನ್ನು ತೀರಿಸಲು ಅವನ ಸಾಧನೆಯು ಖರ್ಚಾಗುತ್ತದೆ. ಅವರೇನಾದರೂ ಒಂದು ವೇಳೆ ನಿರಪೇಕ್ಷವಾಗಿ ಹಾಗೂ ನಿರಂತರವಾಗಿ ಪ್ರಯತ್ನಿಸಿದರೆ ಖಂಡಿತವಾಗಿಯೂ ಸರಿಯಾದ ಸಮಯ ಬಂದಾಗ ಅವನ ಆಧ್ಯಾತ್ಮಿಕ ಪ್ರಗತಿಯಾಗುವುದು.
ಸಾಧಕರು ಆಧ್ಯಾತ್ಮಿಕ ಮಟ್ಟದ ವಿಚಾರದಿಂದ ನಿರಾಶರಾಗದೇ ಮುಂದಿನ ಪ್ರಯತ್ನಗಳನ್ನು ಮಾಡಬೇಕು.
೧. ‘ಇತರ ಸಾಧಕರಿಗೆ ಆಧ್ಯಾತ್ಮಿಕ ಪ್ರಗತಿ ಮಾಡಿಕೊಳ್ಳಲು ಸಾಧ್ಯವಿರುವಾಗ ನಾನೂ ಖಂಡಿತವಾಗಿ ಪ್ರಗತಿ ಮಾಡಿಕೊಳ್ಳಬಹುದು, ಎಂಬುದನ್ನು ಮನಸ್ಸಿನ ಮೇಲೆ ಬಿಂಬಿಸಲು ಸ್ವಯಂಸೂಚನೆ ನೀಡಿರಿ.
೨. ‘ನಾನು ಸಾಧನೆಯಲ್ಲಿ ಎಲ್ಲಿ ಕಡಿಮೆ ಬೀಳುತ್ತಿದ್ದೇನೆ ?’ ಎಂಬುದರ ಬಗ್ಗೆ ತತ್ತ್ವನಿಷ್ಠನಾಗಿ ಅಧ್ಯಯನ ಮಾಡಬೇಕು. ಸಾಧನೆಯಲ್ಲಿ ತಮ್ಮ ಸಾಧಕ ಪರಿವಾರದವರಿಂದ ಹಾಗೂ ಸಹಸಾಧಕರಿಂದ ಸಹಾಯವನ್ನು ಪಡೆದುಕೊಳ್ಳಿರಿ. ವ್ಯಷ್ಟಿ ಸಾಧನೆಯ ವರದಿ ತೆಗೆದುಕೊಳ್ಳುವವರಿಗೆ ಹಾಗೂ ಜವಾಬ್ದಾರ ಸಾಧಕರಿಗೆ ‘ನನ್ನಸಾಧನೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆಯೇ?’ ಎಂಬುದನ್ನು ವಿಚಾರಿಸಿರಿ.
೩. ತಮ್ಮ ಸಂಪರ್ಕದಲ್ಲಿರುವ ಶೇಕಡಾ ೬೦ ಹಾಗೂ ಅದಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟವನ್ನು ಪಡೆದ ಸಾಧಕರಲ್ಲಿ ‘ಯಾವ ಗುಣವಿದೆ ಹಾಗೂ ಅವರು ಸ್ವಭಾವದೋಷ ಹಾಗೂ ಅಹಂ ನಿರ್ಮೂಲನೆಗೆ ಹೇಗೆ ಪ್ರಯತ್ನಿಸುತ್ತಿದ್ದಾರೆ ?’ ಎಂಬುದನ್ನು ಅರಿತುಕೊಂಡು ಆ ನಿಟ್ಟಿನಲ್ಲಿ ಸ್ವತಃ ಪ್ರಯತ್ನಿಸಿರಿ.
೪. ‘ಸನಾತನ ಪ್ರಭಾತದಲ್ಲಿ ಶೇಕಡಾ ೬೦ ಮತ್ತು ಅದಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟವನ್ನು ತಲುಪಿರುವ ಸಾಧಕರ ಗುಣವೈಶಿಷ್ಟ್ಯಗಳನ್ನು ಹಾಗೂ ಸಂತರ ಸಾಧನಾಯಾತ್ರೆಯ ಬಗ್ಗೆ ಲೇಖನಗಳನ್ನು ಪ್ರಕಟಿಸಲಾಗುತ್ತದೆ. ಅವುಗಳನ್ನು ಅಧ್ಯಯನ ಮಾಡಿ ಅವರಲ್ಲಿರುವ ಗುಣಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಿರಿ. ಗುರುದೇವರ ಅಮೂಲ್ಯ ಮಾರ್ಗದರ್ಶನ ಲಭ್ಯವಾಗಿರುವುದರಿಂದಲೇ ಈ ಆಪತ್ಕಾಲದಲ್ಲಿಯೂ ಸಾಧಕರು ಪ್ರಗತಿಯು ಶೀಘ್ರಗತಿಯಲ್ಲಿ ಆಗುತ್ತಿದೆ. ಆದ್ದರಿಂದ ಸಾಧಕರೇ, ಪ್ರಗತಿಯ ಬಗ್ಗೆ ಚಿಂತಿಸ ಬೇಡಿರಿ, ಬದಲಾಗಿ ಶ್ರೀ ಗುರುದೇವರ ಮೇಲೆ ಶ್ರದ್ಧೆಯಿಟ್ಟುಕೊಂಡು ಪ್ರಯತ್ನಿಸಿರಿ !
– ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೧.೭.೨೦೨೦)
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು