ಪಾಕಿಸ್ತಾನದಲ್ಲಿ ಹಿಂದೂಗಳಿಗಾಗುತ್ತಿರುವ ಅನ್ಯಾಯವನ್ನು ತಿಳಿಯಿರಿ !

೧. ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷದ ರಾಷ್ಟ್ರಘಾತಕ ವೃತ್ತಿಯನ್ನು ತಿಳಿಯಿರಿ !

ಸ್ವಾತಂತ್ರ್ಯ ದೊರೆತ ೭೪ ವರ್ಷಗಳ ನಂತರ ಮೊದಲ ಬಾರಿ ಮಾರ್ಕ್ಸ್ವಾದಿ ಕಮ್ಯೂನಿಸ್ಟ್ ಪಕ್ಷದ ಮುಖ್ಯ ಕಚೇರಿಯಲ್ಲಿ ಮತ್ತು ವಿವಿಧ ಕಾರ್ಯಾಲಯಗಳಲ್ಲಿ ಆಗಸ್ಟ್ ೧೫ ಅಂದರೆ ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಧ್ವಜವನ್ನು ಹಾರಿಸಲಾಯಿತು.

೨. ಪಾಕಿಸ್ತಾನದಲ್ಲಿ ಹಿಂದೂಗಳಿಗಾಗುತ್ತಿರುವ ಅನ್ಯಾಯವನ್ನು ತಿಳಿಯಿರಿ !

ಪಾಕಿಸ್ತಾನದ ಮದರಸಾದ ಪುಸ್ತಕಾಲಯದಲ್ಲಿ ಮೂತ್ರ ವಿಸರ್ಜನೆ ಮಾಡಿದ ಆರೋಪದಲ್ಲಿ ಬಂಧನಕ್ಕೊಳಗಾದ ೮ ವರ್ಷದ ಹಿಂದೂ ಬಾಲಕನಿಗೆ ಧರ್ಮನಿಂದನೆ ಕಾನೂನು ಅಡಿಯಲ್ಲಿ ಗಲ್ಲು ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.

೩. ಕ್ರೈಸ್ತ ಡಾಕ್ಟರರ ಹಿಂದೂದ್ವೇಷವನ್ನು ತಿಳಿಯಿರಿ !

ವೆಲ್ಲೂರಿನ (ತಮಿಳುನಾಡು) ಮುಥಲಮ್ಮನ ದೇವಸ್ಥಾನದಲ್ಲಿ ಕೊರೊನಾ ಲಸೀಕರಣ ಶಿಬಿರ ನಡೆಯುವಾಗ ಕ್ರೈಸ್ತ ಮಹಿಳಾ ಡಾಕ್ಟರ ರೆಜಿನಾ ಇವರು ದೇವಸ್ಥಾನಕ್ಕೆ ಹೋಗುವಾಗ ತನ್ನ ಚಪ್ಪಲಿಯನ್ನು ತೆಗೆಯಲಿಲ್ಲ. ಇದರಿಂದ ಕೋಪಗೊಂಡ ಗ್ರಾಮಸ್ಥರು ಲಸಿಕೆಯನ್ನು ತೆಗೆದುಕೊಳ್ಳಲು ನಿರಾಕರಿಸಿದಾಗ, ಡಾಕ್ಟರ ರೆಜಿನಾ ದೇವಸ್ಥಾನದಿಂದ ಹೊರಟು ಹೋದರು.

೪. ದೇವಸ್ಥಾನಗಳ ಮೇಲೆ ಯಾರು ದಾಳಿ ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳಿ !

ಜಯಪುರ(ರಾಜಸ್ಥಾನ)ದ ದಿಗಂಬರ ಜೈನ ದೇವಸ್ಥಾನ ಮತ್ತು ಶಿವನ ದೇವಸ್ಥಾನದಲ್ಲಿ ದರೋಡೆ ಮಾಡಿದ್ದ ಶಹಜಾದಾ ಸಲೀಮನನ್ನು ಪೊಲೀಸರು ಬಂಧಿಸಿದ್ದಾರೆ. ಸಲೀಮನು ನೀರು ಕುಡಿಯುವ ನೆಪದಿಂದ ದೇವಸ್ಥಾನಕ್ಕೆ ನುಗ್ಗಿ ಅಲ್ಲಿಯ ವಿಗ್ರಹಗಳನ್ನು ಕದಿಯಲು ಸಂಚು ಹೂಡಿದ್ದನು.

೫. ವಾಸನಾಂಧ ಪಾದ್ರಿ ಮತ್ತು ದ್ರಮುಕದ ಕಾರ್ಯಕರ್ತರನ್ನು ತಿಳಿಯಿರಿ !

ತಮಿಳುನಾಡಿನ ವೀಯನ್ನೂರ ಗ್ರಾಮದ ವಿವಾಹಿತೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಅದರ ಚಿತ್ರೀಕರಣ ಮಾಡಿ ಅರುಮನೈ ಕ್ರಿಶ್ಚಿಯನ್ ಅಸೋಸಿಯೇಶನ್ನಿನ ಕಾರ್ಯದರ್ಶಿ ಪಾದ್ರಿ ಅರುಮನೈ ಸ್ಟಿಫೆನ್ ಮತ್ತು ದ್ರಮುಕದ ಜಾನ್, ಹೆನ್ಸಲಿನ್ ಮತ್ತು ಜೆಬರಾಜ್ ಈ ಕಾರ್ಯಕರ್ತರು ಸೇರಿದಂತೆ ೭ ಜನರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

೬. ಇಂತಹ ದೇಶದ್ರೋಹಿಗಳನ್ನು ಗಲ್ಲಿಗೇರಿಸಿರಿ !

ಎಡ್ರಿಯನ್ ಲೆವ್ಹಿ ಮತ್ತು ಕ್ಯಾಥಿ ಸ್ಕಾಟ್ ಕ್ಲಾರ್ಕ ಈ ಇಬ್ಬರು ವಿದೇಶಿ ಪತ್ರಕರ್ತರು ತಮ್ಮ ಪುಸ್ತಕದಲ್ಲಿ ಪಠಾಣಕೋಟ(ಪಂಜಾಬ) ವಾಯು ನೆಲೆಯ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಸ್ಥಳೀಯ ಪೊಲೀಸ ಅಧಿಕಾರಿಗಳು ಸಹ ಸಹಭಾಗಿಯಾಗಿದ್ದರು ಎಂದು ಹೇಳಿದ್ದಾರೆ.

೭. ಬಿಬಿಸಿಯ ಹಿಂದೂದ್ವೇಷವನ್ನು ತಿಳಿಯಿರಿ !

ಬಿಬಿಸಿಯು ‘ಬಿಬಿಸಿ ಮರಾಠಿ’ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಂದು ವ್ಯಂಗ್ಯಚಿತ್ರವನ್ನು ಪೋಸ್ಟ್ ಮಾಡಿದೆ. ಇದರಲ್ಲಿ ಒಬ್ಬ ಪೋಷಕರೊಂದಿಗೆ ಮಾತನಾಡುವಾಗ “ನಮ್ಮ ಮಗ ತುಂಬಾ ಧಾರ್ಮಿಕ, ಜನರಿಗೆ ಆಗ್ರಹ ಮಾಡಿ ದೇವರ ಹೆಸರು ಉಚ್ಚರಿಸಲು ಹೇಳುತ್ತಾನೆ’, ಎಂದು ಹೇಳುವಂತೆ ತೋರಿಸಲಾಗಿದೆ. ಹಿಂದೂಗಳಿಗೆ ಹಿಂಸಾತ್ಮಕರೆಂದು ತೋರಿಸಲಾಗಿದೆ.