ಪ್ರಭು ಶ್ರೀರಾಮನು ಮಾಂಸ ಸೇವಿಸಿದನು ಎಂಬುದು ಸಂಪೂರ್ಣ ತಪ್ಪು ಅಪಪ್ರಚಾರ ! – ಮಹಂತ ಪವನಕುಮಾರದಾಸ ಶಾಸ್ತ್ರೀಜಿ, ಮಹಾಮಂತ್ರಿ, ಅಯೋಧ್ಯಾ ಸಂತ ಸಮಿತಿ

ಪ್ರಭು ಶ್ರೀರಾಮನು ಕಸ್ತೂರಿ ಮೃಗದ ಬೇಟೆಯಾಡಲಿಲ್ಲ, ಅವನು ಮಾರೀಚ ರಾಕ್ಷಸನ ಮಾಯಾವಿತನವನ್ನು ಬೆಳಕಿಗೆ ತಂದಿದ್ದನು. ಹನುಮಂತನು ಸೀತಾಮಾತೆಗೆ ತಮ್ಮ ವಿಯೋಗದಲ್ಲಿರುವಾಗ ಪ್ರಭು ಶ್ರೀರಾಮನು ಜೇನು ಹಾಗೂ ಉದ್ದು ಇವುಗಳ ಸೇವನೆಯನ್ನು ಮಾಡಲಿಲ್ಲ ಎಂದು ಹೇಳಿದ್ದನು. ಪರ್ವತ ಪ್ರದೇಶಗಳಲ್ಲಿ ಜೇನು ಹಾಗೂ ಉದ್ದು ಇವು ಋಷಿಮುನಿಗಳ ಆಹಾರವಾಗಿತ್ತು. ಪ್ರಭು ಶ್ರೀರಾಮನು ಮಾಂಸ ಸೇವಿಸಿದನು ಎಂಬುದು ಸಂಪೂರ್ಣ ಸುಳ್ಳು ಮತ್ತು ಅಪಪ್ರಚಾರವಾಗಿದೆ.