|

ಬೆಂಗಳೂರು – ಕಳೆದ ೨೫ ವರ್ಷಗಳಿಂದ ನಡೆಯುತ್ತಿರುವ ಹರಕೆ ಮುಡಿ ಕೂದಲು ಪ್ರಕರಣದ ವಿವಾದ ಅಂತಿಮ ತೆರೆ ಬಿದ್ದಿದ್ದು ಕ್ಷೌರದ ಉತ್ಪನ್ನದ ಸಂಪೂರ್ಣ ಹಕ್ಕನ್ನು ದೇವಸ್ಥಾನಕ್ಕೆ ನೀಡಲಾಗಿದ್ದು, ಕ್ಷೌರವನ್ನು ಮಾತ್ರ ನಯನಜ ಕ್ಷತ್ರಿಯ ಸಂಘಕ್ಕೆ ನೀಡಲಾಗಿದೆ. ಇಲ್ಲಿನ ಸಿವಿಲ್ ನ್ಯಾಯಾಲಯವು ಈ ತೀರ್ಪನ್ನು ನೀಡಿದೆ.
ದಕ್ಷಿಣಕಾಶಿ ನಂಜನಗೂಡು ದೇಗುಲದ ಮುಡಿ ಕೂದಲು ಹಕ್ಕು; ಕೋರ್ಟ್ನಿಂದ ಐತಿಹಾಸಿಕ ತೀರ್ಪು#Court #Mysuru #Ritual https://t.co/7oXY6NZ0yL
— TV9 Kannada (@tv9kannada) June 9, 2021
ಶ್ರೀಕಂಠೇಶ್ವರ ಸ್ವಾಮಿಯ ಮುಡಿಕಟ್ಟೆಯಲ್ಲಿ ಮುಡಿ ತೆಗೆಯುವ ಕಾರ್ಯದಲ್ಲಿ ತೊಡಗಿರುವ ನಯನಜ ಕ್ಷತ್ರಿಯ ಸಂಘದ ಸದಸ್ಯರು ‘ತಾವು ವಂಶ ಪಾರಂಪರ್ಯ ಹರಕೆ ಮುಡಿ ಸೇವೆಯಲ್ಲಿ ತೊಡಗಿದ್ದೇವೆ. ಹಾಗಾಗಿ ಮುಡಿಕಟ್ಟೆಯ ಸಂಪೂರ್ಣ ಹಕ್ಕು ಸಂಘಕ್ಕೆ ಸೇರಿದೆ’ ಎಂದು ಪ್ರತಿಪಾದಿಸಿ ಮುಡಿಕಟ್ಟೆಯ ಸಂಪೂರ್ಣ ಆದಾಯವನ್ನು ಸಂಗದ ಸುರ್ಪದಿಗೆ ಪಡೆದಿದ್ದರು. ಇದರಿಂದ ದೇವಾಲಯದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿತ್ತು. ಹೀಗಾಗಿ ದೇವಸ್ಥಾನ ಆಡಳಿತ ಮುಡಿಸೇವೆಯನ್ನು ದೇವಾಲಯದ ವ್ಯಾಪ್ತಿಗೆ ತರಲು ಹೋರಾಡುತ್ತಿತ್ತು. ಈ ಸಂಬಂಧ ೨೫ ವರ್ಷಗಳ ಹಿಂದೆ ನರಸೀಪುರ ಸಿವಿಲ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿತ್ತು. ಇದೀಗ ಸುದೀರ್ಘ ವಾದ ವಿವಾದಗಳ ಬಳಿಕ ನ್ಯಾಯಾಲಯವು ಮೇಲಿನ ತೀರ್ಪನ್ನು ನೀಡಿತು.
ಕೇಂದ್ರ ಸರಕಾರದಿಂದ ‘ಟೆಂಪಲ್ ಬಾಂಡ್ಸ್’ ಯೋಜನೆ ಜಾರಿ !
ಸುಪ್ರೀಂ ಕೋರ್ಟ್ಗೆ 5 ಹೊಸ ನ್ಯಾಯಾಧೀಶರ ಸೇರ್ಪಡೆ; ಒಂದು ಹುದ್ದೆ ಮಾತ್ರ ಖಾಲಿ!
ದೇವಸ್ಥಾನಗಳಲ್ಲಿನ ‘ವಿಐಪಿ ದರ್ಶನ’ದ ಕುರಿತು ಮದ್ರಾಸ್ ಉಚ್ಚ ನ್ಯಾಯಾಲಯದ ತೀವ್ರ ಅಸಮಾಧಾನ
ಉಚ್ಚ ನ್ಯಾಯಾಲಯಗಳು 3 ತಿಂಗಳಿಗಿಂತ ಹೆಚ್ಚು ಕಾಲ ತೀರ್ಪನ್ನು ಕಾಯ್ದಿರಿಸಬಾರದು! – ಸರ್ವೋಚ್ಚ ನ್ಯಾಯಾಲಯ
ಸಿ.ಬಿ.ಎಸ್.ಇ.ಯ ತ್ರಿಭಾಷಾ ನಿಯಮದ ಅನುಷ್ಠಾನದ ಕುರಿತು ತನಿಖೆ ನಡೆಯಲಿದೆ! – ಸರ್ವೋಚ್ಚ ನ್ಯಾಯಾಲಯ : CBSE Three Language Rule
ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಭದ್ರತೆಯ ಯಾವುದೇ ಲೋಪವಿಲ್ಲ, ಆಭರಣಗಳೂ ಸುರಕ್ಷಿತವಾಗಿವೆ! – ದೇವಸ್ಥಾನದ ಆಡಳಿತ ಮಂಡಳಿಯ ಸ್ಪಷ್ಟೀಕರಣ : Padmanabhaswamy Temple