ಹಿಂದೂ ಸಂಘಟನೆಗಳ ವಿರೋಧದ ನಂತರ ಕರ್ನಾಟಕ ಸರಕಾರದ ಆದೇಶ

ಬೆಂಗಳೂರು – ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆ ಹಾಗೂ ದತ್ತಿ ಇಲಾಖೆಯ ಹಣವನ್ನು ಇನ್ನು ಮುಂದೆ ಯಾವುದೇ ಹಿಂದೂಯೇತರ ಧಾರ್ಮಿಕ ಸಂಸ್ಥೆಗೆ ನೀಡಲು ಬಳಸಬಾರದು ಎಂದು ಕರ್ನಾಟಕ ಸರಕಾರವು ಆದೇಶಿಸಿದೆ.
ಅನ್ಯ ಧಾರ್ಮಿಕ ಕೇಂದ್ರಗಳಿಗೆ ಹಿಂದೂ ದೇವಾಲಯಗಳ ಹಣ ಬಳಕೆಗೆ ತಡೆ@KotasBJP #Hindu #temples #Fund #karnataka https://t.co/2Jd5EczWQ2
— Asianet Suvarna News (@AsianetNewsSN) June 9, 2021
೧. ಧಾರ್ಮಿಕ ದತ್ತಿ ಇಲಾಖೆಯಿಂದ ಹಿಂದೂ ದೇವಾಲಯಗಳಿಗೆ ಮೀಸಲಿಟ್ಟ ಹಣವನ್ನು ಪುರೋಹಿತರು ಮತ್ತು ಇತರ (ಮುಸ್ಲಿಂ ಇತ್ಯಾದಿ) ಧಾರ್ಮಿಕ ಸಂಸ್ಥೆಗಳ ನೌಕರರಿಗೆ ನೀಡಲಾಗುತ್ತದೆ. ಇದರ ವಿರುದ್ಧ ವಿವಿಧ ಹಿಂದೂ ಸಂಘಟನೆಗಳು ಮತ್ತು ಮುಖಂಡರು ಇತ್ತೀಚೆಗೆ ವ್ಯಕ್ತಪಡಿಸಿದ ಆಕ್ರೋಶಕ್ಕೆ ಪ್ರತಿಕ್ರಿಯಿಸಿದ ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು, ‘ಇಂತಹ ಎಲ್ಲಾ ಆರ್ಥಿಕ ಸಹಾಯವನ್ನು ತಕ್ಷಣವೇ ನಿಲ್ಲಿಸಬೇಕು’ ಎಂದು ಆದೇಶಿಸಿದ್ದಾರೆ.
೨. ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಒಂದು ಮನವಿಯಲ್ಲಿ, ರಾಜ್ಯದ ಅಂದಾಜು ೨೭೦೦೦ ಹಿಂದೂ ದೇವಾಲಯಗಳನ್ನು ಒಳಗೊಂಡಿರುವ ‘ತಾಸ್ತಿಕ್’ ನಿಧಿಯಡಿಯಲ್ಲಿ ೧೩೩ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತದೆ ಆದರೆ ಈ ನಿಧಿಯನ್ನು ಪಡೆದವರಲ್ಲಿ ೭೬೪ ಹಿಂದೂಯೇತರ ಧಾರ್ಮಿಕ ಸಂಸ್ಥೆಗಳು ಒಳಗೊಂಡಿವೆ. ಸಚಿವರು ಹೇಳಿದಂತೆ ತಕ್ಷಣ ನೋಟಿಸ್ ನೀಡುವ ಮೂಲಕ ಇದನ್ನು ನಿಲ್ಲಿಸಲು ಆದೇಶ ಹೊರಡಿಸಲಾಗುವುದು.
೩. ಧಾರ್ಮಿಕ ದತ್ತಿ ವಿಭಾಗದ ನಿಧಿಯಿಂದ ಕೊರೋನಾ ಸಾಂಕ್ರಾಮಿಕ ಸಮಯದಲ್ಲಿ ಮಸೀದಿಗಳ ಇಮಾಮ್ಗಳಿಗೆ ನಷ್ಟಪರಿಹಾರ ನೀಡಲು ಹಿಂದೂ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇತ್ತೀಚೆಗೆ ೫೦೦ ಕೋಟಿ ರೂಪಾಯಿಗಳ ಅನುದಾನವನ್ನು ಘೋಷಿಸಿದ್ದರು, ಇದರಲ್ಲಿ ದೇವಾಲಯದ ಅರ್ಚಕರು ಮತ್ತು ‘ಸಿ’ ದರ್ಜೆಯ ದೇವಾಲಯಗಳ ಸಿಬ್ಬಂದಿಗೆ ಜೊತೆಗೆ ಮಸೀದಿಗಳಲ್ಲಿನ ಇಮಾಮ್ಗಳು ಮತ್ತು ಮುಅಝಿನ (ಬಾಂಗ ನೀಡುವವರು) ಇವರಿಗೆ ಒಂದು ಬಾರಿ ಪರಿಹಾರವನ್ನು ನೀಡಲಾಗಿತ್ತು.
೪. ವಿಶ್ವ ಹಿಂದೂ ಪರಿಷತ್ತು ಪುರೋಹಿತರಿಗೆ ನೀಡಲಾದ ನಷ್ಟಪರಿಹಾರವನ್ನು ಸ್ವಾಗತಿಸಿತು ಮತ್ತು ಮಾನವಶಕ್ತಿ ಅಭಿವೃದ್ಧಿ ಮಂಡಳಿಯ ನಿಧಿಯಿಂದ ಮಸೀದಿಗಳಿಗೆ ಪರಿಹಾರವನ್ನು ನೀಡುವ ಸರಕಾರದ ಈ ನಿರ್ಧಾರವನ್ನು ವಿರೋಧಿಸಿತು. ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಭೇಟಿ ಮಾಡಿದ ವಿಎಚ್ಪಿ ನಾಯಕರು ಸರಕಾರದ ನಿರ್ಧಾರವನ್ನು ವಿರೋಧಿಸಿದ್ದರು.
ಕೇಂದ್ರ ಸರಕಾರದಿಂದ ‘ಟೆಂಪಲ್ ಬಾಂಡ್ಸ್’ ಯೋಜನೆ ಜಾರಿ !
ದೇವಸ್ಥಾನಗಳಲ್ಲಿನ ‘ವಿಐಪಿ ದರ್ಶನ’ದ ಕುರಿತು ಮದ್ರಾಸ್ ಉಚ್ಚ ನ್ಯಾಯಾಲಯದ ತೀವ್ರ ಅಸಮಾಧಾನ
ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಭದ್ರತೆಯ ಯಾವುದೇ ಲೋಪವಿಲ್ಲ, ಆಭರಣಗಳೂ ಸುರಕ್ಷಿತವಾಗಿವೆ! – ದೇವಸ್ಥಾನದ ಆಡಳಿತ ಮಂಡಳಿಯ ಸ್ಪಷ್ಟೀಕರಣ : Padmanabhaswamy Temple
ಕೇರಳಮ್ನ ಪ್ರಸಿದ್ಧ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳು ನಾಪತ್ತೆ ! : Temple Gold Theft
ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ದೇವಾಲಯದ ಅರ್ಚಕರ ವಿರುದ್ಧ ಪೋಕ್ಸೊ ಮತ್ತು ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾದ ನಂತರ ಬ್ರಾಹ್ಮಣ ಸಮುದಾಯದಿಂದ ಪ್ರತಿಭಟನೆ
Ranveer Singh : ನಟ ರಣವೀರ್ ಸಿಂಗ್ ಅವರಿಂದ ಮೈಸೂರಿನ ಚಾಮುಂಡಿ ದೇವಸ್ಥಾನಕ್ಕೆ ಭೇಟಿ ನೀಡಿ ಕ್ಷಮೆಯಾಚನೆ !