ಹಿಂದೂ ಸಂಘಟನೆಗಳ ವಿರೋಧದ ನಂತರ ಕರ್ನಾಟಕ ಸರಕಾರದ ಆದೇಶ

ಬೆಂಗಳೂರು – ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆ ಹಾಗೂ ದತ್ತಿ ಇಲಾಖೆಯ ಹಣವನ್ನು ಇನ್ನು ಮುಂದೆ ಯಾವುದೇ ಹಿಂದೂಯೇತರ ಧಾರ್ಮಿಕ ಸಂಸ್ಥೆಗೆ ನೀಡಲು ಬಳಸಬಾರದು ಎಂದು ಕರ್ನಾಟಕ ಸರಕಾರವು ಆದೇಶಿಸಿದೆ.
ಅನ್ಯ ಧಾರ್ಮಿಕ ಕೇಂದ್ರಗಳಿಗೆ ಹಿಂದೂ ದೇವಾಲಯಗಳ ಹಣ ಬಳಕೆಗೆ ತಡೆ@KotasBJP #Hindu #temples #Fund #karnataka https://t.co/2Jd5EczWQ2
— Asianet Suvarna News (@AsianetNewsSN) June 9, 2021
೧. ಧಾರ್ಮಿಕ ದತ್ತಿ ಇಲಾಖೆಯಿಂದ ಹಿಂದೂ ದೇವಾಲಯಗಳಿಗೆ ಮೀಸಲಿಟ್ಟ ಹಣವನ್ನು ಪುರೋಹಿತರು ಮತ್ತು ಇತರ (ಮುಸ್ಲಿಂ ಇತ್ಯಾದಿ) ಧಾರ್ಮಿಕ ಸಂಸ್ಥೆಗಳ ನೌಕರರಿಗೆ ನೀಡಲಾಗುತ್ತದೆ. ಇದರ ವಿರುದ್ಧ ವಿವಿಧ ಹಿಂದೂ ಸಂಘಟನೆಗಳು ಮತ್ತು ಮುಖಂಡರು ಇತ್ತೀಚೆಗೆ ವ್ಯಕ್ತಪಡಿಸಿದ ಆಕ್ರೋಶಕ್ಕೆ ಪ್ರತಿಕ್ರಿಯಿಸಿದ ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು, ‘ಇಂತಹ ಎಲ್ಲಾ ಆರ್ಥಿಕ ಸಹಾಯವನ್ನು ತಕ್ಷಣವೇ ನಿಲ್ಲಿಸಬೇಕು’ ಎಂದು ಆದೇಶಿಸಿದ್ದಾರೆ.
೨. ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಒಂದು ಮನವಿಯಲ್ಲಿ, ರಾಜ್ಯದ ಅಂದಾಜು ೨೭೦೦೦ ಹಿಂದೂ ದೇವಾಲಯಗಳನ್ನು ಒಳಗೊಂಡಿರುವ ‘ತಾಸ್ತಿಕ್’ ನಿಧಿಯಡಿಯಲ್ಲಿ ೧೩೩ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತದೆ ಆದರೆ ಈ ನಿಧಿಯನ್ನು ಪಡೆದವರಲ್ಲಿ ೭೬೪ ಹಿಂದೂಯೇತರ ಧಾರ್ಮಿಕ ಸಂಸ್ಥೆಗಳು ಒಳಗೊಂಡಿವೆ. ಸಚಿವರು ಹೇಳಿದಂತೆ ತಕ್ಷಣ ನೋಟಿಸ್ ನೀಡುವ ಮೂಲಕ ಇದನ್ನು ನಿಲ್ಲಿಸಲು ಆದೇಶ ಹೊರಡಿಸಲಾಗುವುದು.
೩. ಧಾರ್ಮಿಕ ದತ್ತಿ ವಿಭಾಗದ ನಿಧಿಯಿಂದ ಕೊರೋನಾ ಸಾಂಕ್ರಾಮಿಕ ಸಮಯದಲ್ಲಿ ಮಸೀದಿಗಳ ಇಮಾಮ್ಗಳಿಗೆ ನಷ್ಟಪರಿಹಾರ ನೀಡಲು ಹಿಂದೂ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇತ್ತೀಚೆಗೆ ೫೦೦ ಕೋಟಿ ರೂಪಾಯಿಗಳ ಅನುದಾನವನ್ನು ಘೋಷಿಸಿದ್ದರು, ಇದರಲ್ಲಿ ದೇವಾಲಯದ ಅರ್ಚಕರು ಮತ್ತು ‘ಸಿ’ ದರ್ಜೆಯ ದೇವಾಲಯಗಳ ಸಿಬ್ಬಂದಿಗೆ ಜೊತೆಗೆ ಮಸೀದಿಗಳಲ್ಲಿನ ಇಮಾಮ್ಗಳು ಮತ್ತು ಮುಅಝಿನ (ಬಾಂಗ ನೀಡುವವರು) ಇವರಿಗೆ ಒಂದು ಬಾರಿ ಪರಿಹಾರವನ್ನು ನೀಡಲಾಗಿತ್ತು.
೪. ವಿಶ್ವ ಹಿಂದೂ ಪರಿಷತ್ತು ಪುರೋಹಿತರಿಗೆ ನೀಡಲಾದ ನಷ್ಟಪರಿಹಾರವನ್ನು ಸ್ವಾಗತಿಸಿತು ಮತ್ತು ಮಾನವಶಕ್ತಿ ಅಭಿವೃದ್ಧಿ ಮಂಡಳಿಯ ನಿಧಿಯಿಂದ ಮಸೀದಿಗಳಿಗೆ ಪರಿಹಾರವನ್ನು ನೀಡುವ ಸರಕಾರದ ಈ ನಿರ್ಧಾರವನ್ನು ವಿರೋಧಿಸಿತು. ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಭೇಟಿ ಮಾಡಿದ ವಿಎಚ್ಪಿ ನಾಯಕರು ಸರಕಾರದ ನಿರ್ಧಾರವನ್ನು ವಿರೋಧಿಸಿದ್ದರು.
ಶ್ರೀರಾಮನ ಮೇಲಿನ ಆಘಾತ !
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಆಗಸ್ಟ್ ೯ ರ ಒಳಗಾಗಿಯೇ ಶ್ರೀಕೃಷ್ಣ ಮಂದಿರದ ನಿರ್ಮಾಣದ ದಿನಾಂಕವನ್ನು ಘೋಷಿಸಿದರೆ, ಕರಸೇವೆಯ ಅಗತ್ಯವೇ ಇರುವುದಿಲ್ಲ ! – ಕಾಳಿ ಸೇನಾ : Kali Sena
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಜಮ್ಮು ನ್ಯಾಯಾಲಯದಿಂದ ಪೊಲೀಸರಿಗೆ ದಾಖಲೆಗಳನ್ನು ಸಲ್ಲಿಸಲು ಆದೇಶ! : Vaishno Devi Fake Silver