ಇತ್ತೀಚೆಗೆ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪರಾಭವಗೊಂಡಿತು. ಆ ನಿಮಿತ್ತ ಅಲ್ಲಿನ ವಸ್ತುಸ್ಥಿತಿಯ ಕುರಿತು ಭಾಷ್ಯ ಬರೆಯುವ ಲೇಖನ...
ಇತ್ತೀಚೆಗೆ ನಡೆದ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ೧೫ ವರ್ಷಗಳ ಕಾಲ ಅಧಿಕಾರ ಅನುಭವಿಸಿದ ಹಿಂದೂವಿರೋಧಿ ಪಕ್ಷವಾದ ತೃಣಮೂಲ ಕಾಂಗ್ರೆಸ್, ಅಂದರೆ ಮಮತಾ ಬ್ಯಾನರ್ಜಿ ಅವರ ಪಕ್ಷವು ಸಂಪೂರ್ಣ ಪರಾಜಯಗೊಂಡಿತು. ಬಂಗಾಳದ ಜನರು ೨೯೪ ಕ್ಷೇತ್ರಗಳ ಪೈಕಿ ಬರೋಬ್ಬರಿ ೨೦೬ ಸ್ಥಾನಗಳಲ್ಲಿ, ಅಂದರೆ ಶೇ. ೭೧ ರಷ್ಟು ಸ್ಥಾನಗಳಲ್ಲಿ ಭಾಜಪವನ್ನು ಆರಿಸಿದೆ. ಈ ಹಿನ್ನೆಲೆಯಲ್ಲಿ ಬಂಗಾಳದ ಹಿಂಸಾಚಾರದ ಪ್ರಸ್ತುತ ಸ್ಥಿತಿ, ಅಲ್ಲಿನ ನಾಗರಿಕರ ಮಾನಸಿಕತೆ ಮತ್ತು ಭಾಜಪಗೆ ಇಷ್ಟೊಂದು ಸ್ಥಾನಗಳು ಹೇಗೆ ಸಿಕ್ಕಿದವು ? ಎಂಬುದರ ಕುರಿತು ಬಂಗಾಳದ ಒಬ್ಬ ಪ್ರಖರ ಹಿಂದುತ್ವನಿಷ್ಠ ನಾಯಕರು ‘ಸನಾತನ ಪ್ರಭಾತ’ಕ್ಕೆ ನೀಡಿದ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ.

೧. ಬಂಗಾಳಿ ಮತದಾರರ ವೈಶಿಷ್ಟ್ಯಗಳು
ಬಂಗಾಳದ ಚುನಾವಣೆಯ ವೈಶಿಷ್ಟ್ಯವೆಂದರೆ ಅಲ್ಲಿನ ಜನರು ಸರಕಾರವನ್ನು ಬದಲಾಯಿಸಬೇಕು ಎಂದು ನಿರ್ಧರಿಸಿದರೆ, ಅವರು ಪೂರ್ಣವಾಗಿ ಶಾಂತವಾಗಿರುತ್ತಾರೆ. ಯಾರಿಗೆ ಮತ ಹಾಕುತ್ತಾರೆ ? ಎಂಬುದನ್ನು ಅವರು ಹೇಳುವುದಿಲ್ಲ. ಈ ಚುನಾವಣೆಯಲ್ಲೂ ಅವರು ಮೌನವಾಗಿರಲು ಇಷ್ಟಪಟ್ಟರು. ಹಾಗಾಗಿ ಅವರ ಮನಸ್ಸಿನಲ್ಲಿ ಏನಿದೆ ಎಂದು ತಿಳಿಯಲು ಸಾಧ್ಯವಾಗಲಿಲ್ಲ. ಬಂಗಾಳದ ಜನರು ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷಕ್ಕೆ ಬಂಗಾಳದ ಅಧಿಕಾರ ನೀಡಿದಾಗಲೂ, ಅವರು ಅತ್ಯಂತ ಶಾಂತವಾಗಿಯೇ ಕೆಲಸ ಮಾಡಿದ್ದರು. ವಾಸ್ತವದಲ್ಲಿ ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷದ (ಮಾಕಪ) ಸಂಘಟನೆ ಅಷ್ಟೊಂದು ಪ್ರಬಲವಾಗಿರಲಿಲ್ಲ, ಆದರೂ ಜನರು ಅವರಿಗೆ ಮತ ಹಾಕಿದರು. ಬಂಗಾಳದ ಮತ್ತೊಂದು ವೈಶಿಷ್ಟ್ಯವೆಂದರೆ, ಅವರು ಯಾರನ್ನು ಒಮ್ಮೆ ಆರಿಸಿ ತರುತ್ತಾರೋ, ಅವರನ್ನು ಮುಂದಿನ ೧೦ ಅಥವಾ ೧೫ ವರ್ಷಗಳ ಕಾಲ ಹಾಗೆಯೇ ಉಳಿಸಿಕೊಳ್ಳುತ್ತಾರೆ. ಅವರು ಅವರಿಗೆ ಅಭಿವೃದ್ಧಿಗಾಗಿ ಪೂರಕ ಸಮಯ ನೀಡುತ್ತಾರೆ. ಅದಕ್ಕಾಗಿಯೇ ಅವರು ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷಕ್ಕೆ ೩೪ ವರ್ಷ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ೧೫ ವರ್ಷ ಅಧಿಕಾರ ನೀಡಿದ್ದರು.
೨. ‘ಭಾಜಪವನ್ನು ಆರಿಸದಿದ್ದರೆ ಮುಸಲ್ಮಾನರ ಪ್ರಾಬಲ್ಯ ಸ್ಥಾಪನೆಯಾಗುತ್ತದೆ’, ಎಂಬ ಭೀತಿ ಹಿಂದೂಗಳಲ್ಲಿತ್ತು !
ಈ ಬಾರಿ ಬಂಗಾಳಿ ಮತದಾರರು ಯಾವುದೇ ರಾಜಕೀಯ ಕಾರ್ಯಕ್ರಮಗಳನ್ನು (ಅಜೆಂಡಾ) ನೋಡಿ ಮತ ಚಲಾಯಿಸಲಿಲ್ಲ. ಈ ಬಾರಿ ಭಾಜಪವನ್ನು ಅಧಿಕಾರಕ್ಕೆ ತರದಿದ್ದರೆ, ಅಲ್ಲಿ ಮುಸಲ್ಮಾನರ ಪ್ರಾಬಲ್ಯ ಸ್ಥಾಪನೆಯಾಗುತ್ತದೆ ಮತ್ತು ಅದು ಈಗಾಗಲೇ ಹೆಚ್ಚಾಗಿದೆ ಎಂಬುದು ಬಂಗಾಳದ ಜನರಿಗೆ ಮನವರಿಕೆಯಾಗಿತ್ತು. ಉದಾಹರಣೆಗೆ ಒಂದು ಹಳ್ಳಿಯಲ್ಲಿ ಮುಸಲ್ಮಾನರ ಜನಸಂಖ್ಯೆ ಕೇವಲ ಶೇ. ೧೫ ರಿಂದ ೨೦ ರಷ್ಟಿದ್ದರೂ, ಅಲ್ಲಿ ತೃಣಮೂಲ ಕಾಂಗ್ರೆಸ್ ಪದಾಧಿಕಾರಿಗಳ ಎಲ್ಲಾ ಕಾರ್ಯಕರ್ತರು ಮುಸಲ್ಮಾನರೇ ಇರುತ್ತಾರೆ ಎಂಬುದು ನಿಜವಾದ ಸ್ಥಿತಿಯಾಗಿದೆ. ಇದನ್ನು ಜನರು ಧಾರ್ಮಿಕ ದೃಷ್ಟಿಕೋನದಿಂದ ನೋಡಿದರು. ಅದಕ್ಕಾಗಿಯೇ ಜನರು ಹಿಂದುತ್ವವನ್ನು ಉಳಿಸಲು ಭಾಜಪವನ್ನು ಅಧಿಕಾರಕ್ಕೆ ತಂದರು. ಕಳೆದ ೪೦ ವರ್ಷಗಳ ನನ್ನ ಸಾಮಾಜಿಕ ಜೀವನದಲ್ಲಿ ಈ ರೀತಿಯ ಹಿಂದೂ ಸಂಘಟನೆಯನ್ನು ನಾನು ನೋಡಿರಲಿಲ್ಲ. ಭಾಜಪ ಸಹ ಇದನ್ನು ಊಹಿಸಿರಲಿಲ್ಲ.
ಹಿಂದುತ್ವನಿಷ್ಠ ಪಕ್ಷದ ಹಿಂದೆ ಸಾಧು-ಸಂತರ ಆಧ್ಯಾತ್ಮಿಕ ಶಕ್ತಿ

ಹಿಂದುತ್ವನಿಷ್ಠರ ಜೊತೆಗೆ ಬಂಗಾಳದ ಸಂತರೂ ಈ ಚುನಾವಣೆಯಲ್ಲಿ ದೊಡ್ಡ ಕೆಲಸ ಮಾಡಿದ್ದಾರೆ. ಅವರ ಅನೇಕ ತಂಡಗಳು ಬಂಗಾಳದ ಹಳ್ಳಿಹಳ್ಳಿಗಳಿಗೆ ಹೋಗಿ ಪ್ರಚಾರ ನಡೆಸಿದವು. ಅಲ್ಲಿ ಸಭೆಗಳನ್ನು ನಡೆಸಿ ಜನರಿಗೆ ಮನವರಿಕೆ ಮಾಡಿಕೊಟ್ಟವು, ‘ಇದು ಕೊನೆಯ ಅವಕಾಶ. ಈಗ ಆಗದಿದ್ದರೆ, ಮತ್ತೆಂದು ಆಗುವುದಿಲ್ಲ. ಬಂಗಾಳವು ಬಾಂಗ್ಲಾದೇಶವಾಗುತ್ತದೆ.’ ಅವರು ಈ ಕೆಲಸವನ್ನು ರಹಸ್ಯವಾಗಿ ಮಾಡಿದರು. ಸಮಾಜದ ಮೇಲೆ ಸಂತರ ಪ್ರಭಾವ ಅಪಾರವಾಗಿದೆ. ಹಾಗಾಗಿ ಬಂಗಾಳವು ಈ ಬಾರಿ ಸಂಪೂರ್ಣವಾಗಿ ಹಿಂದುತ್ವವನ್ನು ಮುಂಚೂಣಿಯಲ್ಲಿ ಇಟ್ಟುಕೊಂಡು ಮತ ಚಲಾಯಿಸಿದೆ.
– ಒಬ್ಬ ಪ್ರಖರ ಹಿಂದುತ್ವನಿಷ್ಠ ನಾಯಕ, ಬಂಗಾಳ
೩. ಮಹಿಳೆಯರ ಮೇಲಿನ ದೌರ್ಜನ್ಯದಿಂದ ಜನರ ಆಕ್ರೋಶ
ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರ ೧೫ ವರ್ಷಗಳ ಆಡಳಿತದಲ್ಲಿ ಎಷ್ಟೋ ದೌರ್ಜನ್ಯಗಳು ನಡೆದವು. ಅದನ್ನು ಮಾಡಿದವರಲ್ಲಿ ಬಹುತೇಕರು ಮತಾಂಧ ಮುಸಲ್ಮಾನರಾಗಿದ್ದರು. ಕೆಲವು ಬಾರಿ ಅದರಲ್ಲಿ ಹಿಂದೂಗಳೂ ಇದ್ದರು. ಅನೇಕರನ್ನು ಕೊಲೆ ಮಾಡಲಾಯಿತು ಮತ್ತು ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆದವು. ಇವೆಲ್ಲಾ ಘಟನೆಗಳನ್ನು ಹತ್ತಿಕ್ಕುವ ಪ್ರಯತ್ನ ನಡೆಯಿತು. ಈ ಪ್ರಕರಣಗಳಲ್ಲಿ ಪ್ರಥಮ ಮಾಹಿತಿ ವರದಿಗಳನ್ನು ದಾಖಲಿಸಲಿಲ್ಲ. ದೂರು ನೀಡಲು ಹೋಗುವವರನ್ನು ಪೊಲೀಸರು ತಡೆದು ಹಿಂದಿರುಗಿಸುತ್ತಿದ್ದರು. ‘ಆರ್.ಜಿ.ಕರ್ ವೈದ್ಯಕೀಯ ಕಾಲೇಜಿ’ನ ಮಹಿಳಾ ವೈದ್ಯರ ಮೇಲಿನ ದೌರ್ಜನ್ಯ ಮತ್ತು ಆಕೆಯ ಕೊಲೆಯನ್ನು ಬಂಗಾಳದ ಜನರಿಗೆ ಸಹಿಸಲು ಸಾಧ್ಯವಾಗಲಿಲ್ಲ. ಅವಕಾಶ ಸಿಕ್ಕಾಗ ತಮ್ಮ ಶಕ್ತಿ ತೋರಿಸಬೇಕೆಂದು ಮತದಾರರು ಮನಸ್ಸಿನಲ್ಲೇ ನಿರ್ಧರಿಸಿದ್ದರು.

೪. ‘ಮಮತಾ ರಾಜ್’ ಭ್ರಷ್ಟಾಚಾರ !
ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಸಾಮಾನ್ಯ ನಾಗರಿಕರ ಉದ್ಯೋಗಗಳನ್ನು ಕಸಿದುಕೊಂಡಿದ್ದರು. ಸರಕಾರಿ ನೌಕರಿಯ ಪರೀಕ್ಷೆಗಳನ್ನು ಬರೆದ ನಾಗರಿಕರಿಗೆ ಉದ್ಯೋಗ ಸಿಕ್ಕಿರುವುದು ಘೋಷಣೆಯಾಗಿತ್ತು. ಅವರ ಹೆಸರುಗಳು ಪಟ್ಟಿಯಲ್ಲೂ ಇದ್ದವು; ಆದರೆ ತೃಣಮೂಲದ ಜನರು ಲಂಚ ಪಡೆದು ಪಟ್ಟಿಯನ್ನು ಬದಲಾಯಿಸಿ ತೃಣಮೂಲದ ಕಾರ್ಯಕರ್ತರಿಗೆ ಉದ್ಯೋಗ ನೀಡಿದರು. ಅದರ ವಿರುದ್ಧ ನಾಗರಿಕರ ದೊಡ್ಡ ಆಂದೋಲನ ನಡೆಯಿತು. ತೃಣಮೂಲದ ಯಾವ ಪದಾಧಿಕಾರಿಗಳು ಅಥವಾ ಕಾರ್ಯಕರ್ತರು ಗುಡಿಸಲುಗಳಲ್ಲಿ ವಾಸಿಸುತ್ತಿದ್ದರೋ, ಅವರು ಈಗ ದೊಡ್ಡ ಐಷಾರಾಮಿ ಅರಮನೆಗಳಂತಹ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಜನರು ಇದೆಲ್ಲವನ್ನೂ ಶಾಂತವಾಗಿ ನೋಡಿದರು; ಅವರು ಮಾತನಾಡಿದ್ದರೆ, ತೃಣಮೂಲ ಕಾಂಗ್ರೆಸ್ ಜನರ ಶತ್ರುಗಳಾಗುತ್ತಿದ್ದರು. ಅದಕ್ಕಾಗಿಯೇ ಈ ಪವಾಡ ಸಂಭವಿಸಿದೆ.
೫. ರಾಜಕೀಯ ವಿಚಾರವಿರುವ ಬಂಗಾಳಿ ಜನತೆ
ಬಂಗಾಳದ ಜನರು ರಾಜಕೀಯ ದೃಷ್ಟಿಕೋನದಿಂದ ತುಂಬಾ ಯೋಚಿಸುತ್ತಾರೆ. ಇದು ಇಲ್ಲಿನ ಅತ್ಯಂತ ದೊಡ್ಡ ಸಮಸ್ಯೆಯಾಗಿದೆ. ಬಂಗಾಳದ ಜನರು ಪ್ರತಿದಿನ ರಾಜಕೀಯ ಆಡುತ್ತಾರೆ. ಬಂಗಾಳದಲ್ಲಿ ಈ ಹಿಂದೆ ಮಾಕಪ ಅಧಿಕಾರದಲ್ಲಿದ್ದಾಗ ಜನರು ನಾಸ್ತಿಕರಾದರು. ತೃಣಮೂಲ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಜನರು ಮತ್ತೆ ಧರ್ಮದ ಕಡೆಗೆ ತಿರುಗಲು ಪ್ರಾರಂಭಿಸಿದರು. ಈ ಬಾರಿ ತಮಗೆ ಏನಾದರೂ ಬದಲಾವಣೆ ಬೇಕೇ ಬೇಕು ಎಂದು ಜನರಿಗೆ ಮನವರಿಕೆಯಾಗಿತ್ತು; ಆದರೆ ಅದರ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಅವರು ಸಂಬಂಧಿಕರ ನಡುವೆ ಪರಸ್ಪರ ಚರ್ಚಿಸುತ್ತಿರಬಹುದು; ಆದರೆ ಹೊರಗೆ ಯಾರೊಂದಿಗೂ ಏನನ್ನೂ ಮಾತನಾಡುತ್ತಿರಲಿಲ್ಲ. ಹಾಗಾಗಿ ಈ ಪವಾಡ ನಡೆಯಿತು.
೬. …ಈಗ ಹಿಂದೂಗಳ ಬಲವಾದ ಸಂಘಟನೆ ಅಗತ್ಯ!
ಈಗ ಹಿಂದುತ್ವದ ವಿಷಯವನ್ನು ಜನಮಾನಸದಲ್ಲಿ ಇನ್ನಷ್ಟು ಶಕ್ತಿಶಾಲಿಯಾಗಿಸಬೇಕು. ಜನರು ಹಿಂದುತ್ವದ ಕಡೆಗೆ ತಿರುಗುತ್ತಿದ್ದಾರೆ. ಹಾಗಾಗಿ ಅವರನ್ನು ಧರ್ಮದ ಮಾರ್ಗಕ್ಕೆ ತರುವುದು ಸುಲಭವಾಗಿದೆ. ದಕ್ಷಿಣ ೨೪ ಪರಗಣದ ಪಾನಿಹಾಟಿ ನಗರದಲ್ಲಿ ಇತರ ಜನರಂತೆಯೇ ಮತಾಂಧ ಮುಸಲ್ಮಾನರು ಹಿಂದೂ ವಸತಿಯಲ್ಲಿ ಬಿರಿಯಾನಿ ಅಂಗಡಿಯನ್ನು ತೆರೆದಿದ್ದರು. ಅದನ್ನು ಹಿಂದೂಗಳು ಧ್ವಂಸಗೊಳಿಸಿದರು. ದಕ್ಷಿಣ ೨೪ ಪರಗಣ ಪ್ರದೇಶದಲ್ಲಿ ಒಬ್ಬ ಮುಸಲ್ಮಾನ ನಾಯಕ ಹಿಂದೂವೊಬ್ಬರ ಐಷಾರಾಮಿ ಮನೆಯನ್ನು ವಶಪಡಿಸಿಕೊಂಡಿದ್ದನು. ಮೇ ೭ ರಂದು ಅದನ್ನು ಮುಕ್ತಗೊಳಿಸಲಾಯಿತು. ತೃಣಮೂಲ ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಆಸನಸೋಲ್ನಲ್ಲಿರುವ ದುರ್ಗಾ ದೇವಸ್ಥಾನವನ್ನು ಮುಚ್ಚಲಾಗಿತ್ತು, ಅದನ್ನು ಈಗ ಮತ್ತೆ ತೆರೆಯಲಾಗಿದೆ. ಜನರು ಹಿಂದುತ್ವದ ಕಡೆಗೆ ತಿರುಗಿದ್ದಾರೆ. ಹಾಗಾಗಿ ಅವರನ್ನು ಇನ್ನಷ್ಟು ಸಂಘಟಿಸಬೇಕು. ಮತಾಂಧರು ಎಲ್ಲೇ ಹಿಂದೂಗಳ ಆಸ್ತಿಯನ್ನು ವಶಪಡಿಸಿಕೊಂಡಿದ್ದರೂ, ಪ್ರತಿಯೊಬ್ಬರೂ ಅದನ್ನು ವಿರೋಧಿಸುವ ಧೈರ್ಯವನ್ನು ತೋರಿಸಬೇಕು ಮತ್ತು ಅವರು ಹಾಗೆ ಮಾಡುತ್ತಿದ್ದಾರೆ. ಇಲ್ಲದಿದ್ದರೆ ಹಿಂದುತ್ವದ ಅಲೆ ಅಡಗಿಹೋಗಬಾರದು. ಇದರ ಕಡೆಗೆ ಈಗ ಗಮನ ಹರಿಸುವುದು ಹೆಚ್ಚು ಅಗತ್ಯವಾಗಿದೆ.
ಬಂಗಾಳದ ಹಿಂದೂಗಳಿಗೆ ಈ ಬದಲಾವಣೆಯು ‘ನ ಭೂತೋ ನ ಭವಿಷ್ಯತಿ’, ಅಂದರೆ ‘ಇದು ಹಿಂದೆಂದೂ ನಡೆದಿಲ್ಲ ಮತ್ತು ಮುಂದೆಯೂ ನಡೆಯುವುದಿಲ್ಲ’ ಎಂಬ ರೀತಿಯದ್ದಾಗಿದೆ. ನಾನು ಸ್ವತಃ ಹಳ್ಳಿಹಳ್ಳಿಗಳಿಗೆ ಹೋಗುತ್ತಿದ್ದೇನೆ. ಅದರಲ್ಲಿ ಹಿಂದೂಗಳ ಮೇಲೆ ಮತಾಂಧರ ಪ್ರಾಬಲ್ಯ ಹೆಚ್ಚಾಗುತ್ತಿತ್ತು ಎಂಬುದು ಕಂಡುಬಂದಿದೆ. ಹಾಗೆ ಆಗಬಾರದು ಎಂಬ ಕಾರಣಕ್ಕಾಗಿ ಅವರು ಈ ಬದಲಾವಣೆಯನ್ನು ತಂದಿದ್ದಾರೆ. ಬಂಗಾಳದಲ್ಲಿ ಹಿಂದುತ್ವಕ್ಕೆ ಪೂರಕವಾದ ವಾತಾವರಣವಿದೆ. ಹಾಗಾಗಿ ಅವರನ್ನು ಅಧರ್ಮದ ವಿರುದ್ಧ ಸಂಘಟಿಸುವುದು ಅಗತ್ಯವಾಗಿದೆ.
– ಒಬ್ಬ ಪ್ರಖರ ಹಿಂದುತ್ವನಿಷ್ಠ ನಾಯಕ, ಬಂಗಾಳ (೭.೫.೨೦೨೬)
‘ಸ್ಮಾರ್ಟ್’ ಮತ್ತು ಅಭೇದ್ಯ ಭಾರತ ?
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು
ಶರೀರದ ‘ಪರಿವರ್ತನೆ’ಯ ನಿಯಮ !
ಆಧ್ಯಾತ್ಮಿಕ ಉಪಾಯಗಳ ವಿಷಯದಲ್ಲಿ ಇದನ್ನು ನೆನಪಿನಲ್ಲಿಡಿ !
ಧರ್ಮನಿರಪೇಕ್ಷತೆ ಮತ್ತು ಹಿಂದೂ ರಾಷ್ಟ್ರ !
ಇಂದ್ರಾಯ ಸ್ವಾಹಾ | ತಕ್ಷಕಾಯ ಸ್ವಾಹಾ |