ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಭಗವಂತ ಸ್ವರೂಪ ಮತ್ತು ಕಾರ್ಯದರ್ಶನವನ್ನು ತೋರಿಸುವ ಬ್ರಾಹ್ಮತೇಜಯುಕ್ತ ಪ್ರದರ್ಶನ !

೨೦೨೫ ರಲ್ಲಿ ಗೋವಾದಲ್ಲಿ ನೆರವೇರಿದ ‘ಸನಾತನ ರಾಷ್ಟ್ರಶಂಖನಾದ ಮಹೋತ್ಸವದಲ್ಲಿನ ವಿವಿಧ ಕಕ್ಷೆಗಳ ಅವಿಸ್ಮರಣೀಯ ಕ್ಷಣಚಿತ್ರಗಳು |

ಭಗವಂತ ಸ್ವರೂಪ ಗುರುದೇವರ ದರ್ಶನ ಕಕ್ಷೆ

ಪ್ರಾಚೀನ ಋಷಿಮುನಿಗಳು ಬರೆದಿರುವ ನಾಡಿ ಪಟ್ಟಿಗಳಲ್ಲಿ ‘ಗುರುದೇವರ ಹುಟ್ಟುಹಬ್ಬ ಮತ್ತು ಇತರ ಉತ್ಸವಗಳನ್ನು ಹೇಗೆ ಆಚರಿಸಬೇಕು ?’, ‘ಆಗ ಗುರುದೇವರು ಯಾವ ದೇವತೆಯ ವಸ್ತ್ರ ಧರಿಸಬೇಕು ?’ ಇತ್ಯಾದಿಗಳನ್ನು ಉಲ್ಲೇಖಿಸಲಾಗಿದೆ. ಅದಕ್ಕನುಸಾರ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರು ಆಯಾ ಸಮಯದಲ್ಲಿ ಧರಿಸಿದ ವಸ್ತ್ರಗಳು ಮತ್ತು ಆಭರಣಗಳನ್ನು ಈ ಪ್ರದರ್ಶನದಲ್ಲಿ ಇಡಲಾಗಿತ್ತು. ೨೦೨೩ ರ ಬ್ರಹ್ಮೋತ್ಸವದ ಸುಂದರ ರಥವನ್ನೂ ಈ ಪ್ರದರ್ಶನದಲ್ಲಿ ಇಡಲಾಗಿತ್ತು. ಈ ರಥವನ್ನು ನೋಡಿ ಎಲ್ಲರ ಭಾವವೂ ಜಾಗೃತಗೊಳ್ಳುತ್ತಿತ್ತು.

ದರ್ಶನಕ್ಕಾಗಿ ಇಡಲಾಗಿದ್ದ ಪ್ರಾಚೀನ ಋಷಿಮುನಿಗಳು ಬರೆದ ನಾಡಿಪಟ್ಟಿಗಳು, ಹಾಗೆಯೇ ತಿರುಪತಿ ಬಾಲಾಜಿ ಮೂರ್ತಿಯ ಪ್ರತಿಕೃತಿ
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರು ವಿವಿಧ ಹುಟ್ಟುಹಬ್ಬದ ಸಮಾರಂಭಗಳಲ್ಲಿ ಧರಿಸಿದ ಕಿರೀಟಗಳು, ಆಭರಣಗಳು ಮತ್ತು ಇತರ ವಸ್ತುಗಳು

ಗುರುದೇವರ ಕಾರ್ಯದ ಪ್ರದರ್ಶನ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಬಾಲ್ಯದಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದ ಸಂಮೋಹನತಜ್ಞರಾಗಿ ಮತ್ತು ಅನಂತರ ಪರಾತ್ಪರ ಗುರು ಸ್ಥಾನದ ವರೆಗಿನ ಅವರ ಜೀವನಪಥವನ್ನು ಚಿತ್ರಪ್ರದರ್ಶನದ ರೂಪದಲ್ಲಿ ಇಡಲಾಗಿತ್ತು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಕೆಲವು ವಸ್ತುಗಳನ್ನು ಸಹ ಇಲ್ಲಿ ಇಡಲಾಗಿತ್ತು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಜೀವನಶೈಲಿ ‘ಸರಳ ಜೀವನ ಮತ್ತು ಉನ್ನತ ವಿಚಾರಸರಣಿ’ ಆಗಿದೆ. ಅವರು ವಾಸಿಸುತ್ತಿದ್ದ ಕೋಣೆಯಲ್ಲಿನ ಸರಳವಾದ ಕಪಾಟು, ಹಾಸಿಗೆ, ಮೇಜು, ಕುರ್ಚಿ ಮುಂತಾದ ಸಾಮಗ್ರಿಗಳು ಉಪಸ್ಥಿತರಲ್ಲಿ ಭಾವವನ್ನು ಜಾಗೃತಗೊಳಿಸುತ್ತಿದ್ದವು.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಕಾರ್ಯದ ಪ್ರದರ್ಶನವನ್ನು ನೋಡುತ್ತಿರುವ ಭಕ್ತರು
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಕೋಣೆಯಲ್ಲಿದ್ದ ಕಪಾಟನ್ನು ನೋಡುತ್ತಿರುವ ಭಕ್ತರು