ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಕಾರ್ಯಕ್ಕಾಗಿ ಇತರ ಸಾಧಕರು ಸಕ್ಷಮರಾದಾಗ ಅವರಿಗೆ ಆ ಕುರಿತಾದ ಕನಸುಗಳು ಬೀಳದಿರುವುದು

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘೨೦೧೭ ರಿಂದ ೨೦೨೩ ರ ಅವಧಿಯಲ್ಲಿ ನನಗೆ ನಿದ್ರೆಯಲ್ಲಿ, ‘ನಾನು ಭಾರತದ ಅನೇಕ ಸ್ಥಳಗಳಿಗೆ ಹೋಗಿ ಸನಾತನ ಸಂಸ್ಥೆಯ ಕಾರ್ಯವನ್ನು ಸಮಾಜದ ಮುಂದೆ ಮಂಡಿಸುತ್ತಿದ್ದೇನೆ, ಜಿಜ್ಞಾಸುಗಳಿಗೆ ಅಧ್ಯಾತ್ಮದ ಬಗ್ಗೆ ಮಾಹಿತಿ ನೀಡಿ ಸಾಧನೆಯನ್ನು ತಿಳಿಸುತ್ತಿದ್ದೇನೆ, ಅನಿಷ್ಟ ಶಕ್ತಿಗಳ ತೊಂದರೆಯಿರುವ ಸಾಧಕರಿಗಾಗಿ ನಾಮಜಪಾದಿ ಉಪಾಯಗಳನ್ನು ಮಾಡುತ್ತಿದ್ದೇನೆ, ಸಾಧಕರ ಸತ್ಸಂಗಗಳನ್ನು ನಡೆಸುತ್ತಿದ್ದೇನೆ ಮತ್ತು ಅವರಿಗೆ ಮಾರ್ಗದರ್ಶನ ನೀಡುತ್ತಿದ್ದೇನೆ ಇತ್ಯಾದಿ ಕಾರ್ಯಗಳನ್ನು ಮಾಡುತ್ತಿದ್ದೇನೆ’ ಎಂಬ ಕನಸುಗಳು ಬೀಳುತ್ತಿದ್ದವು. ೨೦೨೫ ನೆಯ ವರ್ಷದಿಂದ ಇಂತಹ ಕನಸುಗಳು ಬೀಳುತ್ತಿಲ್ಲ; ಏಕೆಂದರೆ ಈಗ ಪ್ರತ್ಯಕ್ಷದಲ್ಲಿ ಈ ಎಲ್ಲಾ ಸೇವೆಗಳನ್ನು ಇತರ ಸಾಧಕರು ಉತ್ತಮವಾಗಿ ಮತ್ತು ಜವಾಬ್ದಾರಿ ವಹಿಸಿಕೊಂಡು ಮಾಡುತ್ತಿದ್ದಾರೆ. ಆದ್ದರಿಂದ ಈಗ ನಿದ್ರೆಯಲ್ಲಿ ನನ್ನ ಮನಸ್ಸು ದೇವರ ಸ್ಮರಣೆಯಲ್ಲಿಯೇ ಇರುತ್ತದೆ.’ – ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ