ಬಾಂಗ್ಲಾದೇಶ: ಸೆರೆಮನೆಯಲ್ಲಿರುವ ಚಿನ್ಮಯ್ ಪ್ರಭು ಅವರ ಜೀವಕ್ಕೆ ಅಪಾಯ!

ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದೂಗಳಲ್ಲಿ ಜಾಗೃತಿ ಮೂಡಿಸಿದ್ದಕ್ಕಾಗಿ ಒಂದೂವರೆ ವರ್ಷದಿಂದ ಜೈಲಿನಲ್ಲಿ

ಢಾಕಾ (ಬಾಂಗ್ಲಾದೇಶ) – ‘ಇಸ್ಕಾನ್’ ಆಧ್ಯಾತ್ಮಿಕ ಸಂಸ್ಥೆಯ ನಾಯಕ ಮತ್ತು ಬಾಂಗ್ಲಾದೇಶದ ಪ್ರಖರ ಹಿಂದುತ್ವನಿಷ್ಠ ಚಿನ್ಮಯ ಕೃಷ್ಣ ದಾಸ್ ಪ್ರಭು ಅವರ ಜೀವಕ್ಕೆ ತೀವ್ರ ಅಪಾಯ ಎದುರಾಗಿದೆ ಎಂದು ಭಾರತದ ಇಸ್ಕಾನ್ ನಾಯಕ ಶ್ರೀ ರಾಧಾರಮಣ್ ದಾಸ್ ಅವರು ‘ಎಕ್ಸ್’ (ಟ್ವಿಟರ್) ಮೂಲಕ ಮಾಹಿತಿ ನೀಡಿದ್ದಾರೆ. ಅವರು ಮಾತನಾಡಿ, ‘‘ಕೆಲವು ದಿನಗಳ ಹಿಂದಷ್ಟೇ ನಾನು ಚಿನ್ಮಯ್ ಪ್ರಭು ಅವರ ತಾಯಿಯವರೊಂದಿಗೆ ಮಾತನಾಡಿದ್ದೆ. ತಮ್ಮ ಮಗನ ಬಗ್ಗೆ ಮಾತನಾಡುವಾಗ ಅವರು ಭಾವುಕರಾಗಿ ಕಣ್ಣೀರು ಹಾಕಿದರು. ಚಿನ್ಮಯ್ ದಾಸ್ ಅವರು 583 ದಿನಗಳಿಗಿಂತಲೂ ಹೆಚ್ಚು ಕಾಲದಿಂದ ಜೈಲಿನಲ್ಲಿದ್ದಾರೆ. ಕೊನೆಯ ಭೇಟಿಯ ಸಮಯದಲ್ಲಿ ಅವರ ಆರೋಗ್ಯ ತೀರಾ ಹದಗೆಟ್ಟಿತ್ತು ಎಂದು ಅವರ ತಾಯಿ ತಿಳಿಸಿದ್ದಾರೆ’’ ಎಂದರು.

ದಾಸ್ ಅವರು, ಚಿನ್ಮಯ್ ಪ್ರಭು ಅವರನ್ನು ತಕ್ಷಣ ಸುಧಾರಿತ ವೈದ್ಯಕೀಯ ಚಿಕಿತ್ಸೆಗಾಗಿ ವಿದೇಶಕ್ಕೆ ಕರೆದೊಯ್ಯದಿದ್ದರೆ, ಅವರ ಜೀವಕ್ಕೆ ತೀವ್ರ ಅಪಾಯ ಉಂಟಾಗಬಹುದು ಎಂದು ಹೇಳಿದರು. ದಾಸ್ ಅವರು ಪ್ರಧಾನಿ ಮೋದಿ ಅವರಿಗೆ ವಿನಂತಿಸಿ, ಈ ವಿಷಯದಲ್ಲಿ ಭಾರತ ಸರ್ಕಾರ ಮಧ್ಯಪ್ರವೇಶಿಸಬೇಕು ಮತ್ತು ಚಿನ್ಮಯ್ ಪ್ರಭು ಅವರನ್ನು ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಕಳುಹಿಸಬೇಕೆಂದು ಮನವಿ ಮಾಡಿದ್ದಾರೆ.

ಚಿ,ನ್ಮಯ್ ಪ್ರಭು ಅವರ ತಾಯಿಯವರಿಗೆ ಇತ್ತೀಚೆಗೆ ತೀವ್ರ ಹೃದಯಾಘಾತವಾಗಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ ದಯವಿಟ್ಟು ಅವರಿಗಾಗಿ ಪ್ರಾರ್ಥಿಸಿ ಎಂದು ದಾಸ್ ಕೋರಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂ ಧರ್ಮವು ಸನ್ಯಾಸತ್ವಕ್ಕೆ ಅತ್ಯುನ್ನತ ಗೌರವದ ಸ್ಥಾನವನ್ನು ನೀಡಿದೆ. ಚಿನ್ಮಯ ಕೃಷ್ಣ ದಾಸ್ ಪ್ರಭು ಅವರಂತಹ ಸನ್ಯಾಸಿಗಳು ಹಿಂದೂಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಆದ್ದರಿಂದ, ಅವರ ರಕ್ಷಣೆಗಾಗಿ ಈಗ ಬಾಂಗ್ಲಾದೇಶ ಸೇರಿದಂತೆ ಭಾರತದ ಹಿಂದೂಗಳು ವ್ಯಾಪಕವಾಗಿ ಧ್ವನಿ ಎತ್ತಿ ಸರಕಾರಗಳ ಮೇಲೆ ಒತ್ತಡ ಹೇರಬೇಕು!