ಹಿಂದೂದ್ವೇಷಿ ಜಾಹೀರಾತು ತಯಾರಿಸಿದವರ ಮೇಲೆ ಕ್ರಮ ಕೈಗೊಳ್ಳಿ !

ಫಲಕ ಪ್ರಸಿದ್ಧಿಗಾಗಿ

೧. ಹೀಗೆ ಬೇಡಿಕೆ ಇಡುವವರನ್ನು ಪಾಕಿಸ್ತಾನಕ್ಕೆ ಅಟ್ಟಿ !

ಮಹಾರಾಷ್ಟ್ರದ ಛತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರದೇಶದಲ್ಲಿ ಮುಸಲ್ಮಾನ ರಿಕ್ಷಾ, ಟ್ಯಾಕ್ಸಿ ಮತ್ತು ಓಲಾ-ಉಬರ್ ಚಾಲಕರಿಗೆ ನಮಾಜ್ ಮಾಡಲು ತಾತ್ಕಾಲಿಕ ಶೆಡ್ ನಿರ್ಮಿಸಿ ಕೊಡಬೇಕೆಂದು ‘ಆಟೋ-ಟ್ಯಾಕ್ಸಿ, ಓಲಾ-ಉಬರ್ ಮೆನ್ಸ್ ಯೂನಿಯನ್’ ಮಾಡಿದ ಬೇಡಿಕೆಯನ್ನು ಸರಕಾರ ತಿರಸ್ಕರಿಸಿದೆ.

೨. ಹಿಂದೂದ್ವೇಷಿ ಜಾಹೀರಾತು ತಯಾರಿಸಿದವರ ಮೇಲೆ ಕ್ರಮ ಕೈಗೊಳ್ಳಿ !

‘ನಿಮ್ಮ ಸ್ವಂತ ಸಾಮರ್ಥ್ಯದ ಮೇಲೆ ನಂಬಿಕೆ ಇಡಿ, ಮೂಢನಂಬಿಕೆಯ ಮೇಲಲ್ಲ’ ಎಂಬ ಬರಹದೊಂದಿಗೆ, ಸಾಧು-ಸಂತರ ವೇಷದ ವ್ಯಂಗ್ಯಚಿತ್ರದ ಮೂಲಕ ಹಿಂದೂ ಧರ್ಮವನ್ನು ಅವಮಾನಿಸುವ ಸಾಮಾಜಿಕ ನ್ಯಾಯ ಇಲಾಖೆಯ ವಿವಾದಾತ್ಮಕ ಜಾಹೀರಾತನ್ನು ಹಿಂಪಡೆಯಲಾಗಿದೆ.

೩. ಮಾಲೆಗಾಂವ್ ಮಹಾನಗರ ಪಾಲಿಕೆಯಲ್ಲಿ ಇಸ್ಲಾಮಿಕ್ ಪಾರ್ಟಿ ಅಧಿಕಾರಕ್ಕೆ ಬಂದ ಪರಿಣಾಮ ನೋಡಿ !

ಮಹಾರಾಷ್ಟ್ರದ ಮಾಲೆಗಾಂವ್ ಮಹಾನಗರ ಪಾಲಿಕೆಯಲ್ಲಿ ಮುಸಲ್ಮಾನ ಸಂಘಟನೆಯ ಸದಸ್ಯರು ಫೆಬ್ರವರಿ ೨೪ ರ ಮಧ್ಯಾಹ್ನ ನಮಾಜು ಪಠಣ ಮಾಡಿದರು. ‘ರಂಜಾನ್ ತಿಂಗಳು ನಡೆಯುತ್ತಿರುವುದರಿಂದ ನಮಾಜು ಪಠಣದ ಸಮಯವಾದ ಕಾರಣ ಅಲ್ಲಿಯೇ ನಮಾಜ ಪಠಣ ಮಾಡಿದೆವು’ ಎಂದು ಅವರು ಹೇಳಿದ್ದಾರೆ.

೪. ದೇಶದ ಎಲ್ಲಾ ವಿವಾದಿತ ಮಸೀದಿಗಳ ಸಮೀಕ್ಷೆ ನಡೆಸಿ !

ಇಂದೋರ್ ಉಚ್ಚ ನ್ಯಾಯಾಲಯಕ್ಕೆ ಭಾರತೀಯ ಪುರಾತತ್ವ ಇಲಾಖೆಯು ಸಲ್ಲಿಸಿದ ಧಾರ ಇಲ್ಲಿನ ಭೋಜಶಾಲೆಯ ಸಮೀಕ್ಷಾ ವರದಿಯಲ್ಲಿ, ಅಲ್ಲಿನ ಮಂದಿರದ ಜಾಗದಲ್ಲಿಯೇ ಕಮಾಲ್ ಮೌಲಾ ಮಸೀದಿಯನ್ನು ನಿರ್ಮಿಸಲಾಗಿದೆ ಎಂಬ ಮಾಹಿತಿಯನ್ನು ನೀಡಲಾಗಿದೆ.

೫. ಇದು ಪೊಲೀಸರಿಗೆ ನಾಚಿಕೆಗೇಡು !

ಚಿಖಲಿ (ಬುಲಢಾಣಾ ಜಿಲ್ಲೆ) ನಗರದಲ್ಲಿ ಕಳೆದ ೩ ವರ್ಷಗಳಿಂದ ಗೋಹತ್ಯೆ ತಡೆಯಲು ಸಕ್ರಿಯರಾಗಿರುವ ಗೋರಕ್ಷಕ ಓಮರಾಜೆ ಮದನರಾಜೆ ಗಾಯಕವಾಡ ಅವರ ಮೇಲೆ ಕೆಲವು ಮತಾಂಧ ಮುಸಲ್ಮಾನರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

೬. ಇಂತಹವರಿಗೆ ತೊಂದರೆಯಾದರೆ ಪಾಕಿಸ್ತಾನಕ್ಕೆ ಹೋಗಲಿ !

ಚಿಕ್ಕಮಗಳೂರು ಜಿಲ್ಲೆಯ ಹಳೆ ಉಪ್ಪಳ್ಳಿಯ ಈಶ್ವರ ದೇವಸ್ಥಾನದಲ್ಲಿ ನಡೆಯುವ ಭಜನೆ, ಜಾಗಟೆ ಮತ್ತು ಘಂಟಾನಾದದ ಶಬ್ದದ ಬಗ್ಗೆ ಫಾರೂಕ್ ಎಂಬ ಸ್ಥಳೀಯ ಮುಸಲ್ಮಾನ ವ್ಯಕ್ತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿ ನಿಲ್ಲಿಸಲು ಹೇಳಿದ್ದಾನೆ.

೭. ಇಂತಹ ಹಲ್ಲೆಕೋರರ ಮೇಲೆ ಯಾವಾಗ ಕಠಿಣ ಕ್ರಮ ಕೈಗೊಳ್ಳಲಾಗುವುದು ?

ಕೊಡಗಿನ ನಾಪೋಕ್ಲುವಿನಲ್ಲಿ ಆಯೋಜಿಸಲಾದ ‘ಹಿಂದೂ ಸಂಗಮ’ ಕಾರ್ಯಕ್ರಮದ ಪ್ರಚಾರಕ್ಕೆ ತೆರಳಿದ್ದ ರಾ.ಸ್ವ. ಸಂಘದ ಕಾರ್ಯಕರ್ತ ಗೌತಮ್ ಎಂಬುವವರ ಮೇಲೆ ಮತಾಂಧ ಮುಸಲ್ಮಾನರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.