ಮಹಾಶಿವರಾತ್ರಿ ವ್ರತದ ಫಲಶೃತಿ  

೧. ‘ಸ್ಕಂದ ಪುರಾಣ : ಶಂಕರನು ಪಾರ್ವತಿಗೆ ಹೇಳುತ್ತಾನೆ, “ಹೇ ದೇವಿ, ಯಾವ ಭಕ್ತನು ಶಿವರಾತ್ರಿಯ ಉಪವಾಸವನ್ನು ಮಾಡುತ್ತಾನೆಯೋ, ಅವನಿಗೆ ದಿವ್ಯ ಗಣತ್ವವು ಪ್ರಾಪ್ತವಾಗಿ ಎಲ್ಲ ಭೋಗಗಳನ್ನು ಅನುಭವಿಸಿ ಅವನು ಮೋಕ್ಷವನ್ನು ಪಡೆಯುತ್ತಾನೆ.”

೨. ಈಶಾನಸಂಹಿತೆ : ಮಹಾಶಿವರಾತ್ರಿ ವ್ರತವು ಎಲ್ಲ ಪಾಪಗಳನ್ನು ನಾಶ ಮಾಡುತ್ತದೆ ಮತ್ತು ಎಲ್ಲ ಮನುಷ್ಯರಲ್ಲಿ ಭುಕ್ತಿ ಮತ್ತು ಮುಕ್ತಿಯನ್ನು ನೀಡುವುದಾಗಿದೆ.’

(ಆಧಾರ : ನಿರ್ಣಯಸಿಂಧು, ಪರಿಚ್ಛೇದ ೨, ಶಿವರಾತ್ರಿನಿರ್ಣಯ)