ಭಾರತವು ತಕ್ಷಣವೇ ‘ಆಪರೇಷನ್ ಸಿಂದೂರ’ವನ್ನು ನಿಲ್ಲಿಸಬೇಕು ಮತ್ತು ತಡಮಾಡದೆ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಬೇಕು ಎಂದು ಕಾಂಗ್ರೆಸ್ನ ಪಾಕಿಸ್ತಾನಪ್ರೇಮಿ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್ ಹೇಳಿಕೆ ನೀಡಿದ್ದಾರೆ.
೨. ಭಾರತವು ಭಯೋತ್ಪಾದಕರ ಶಿಬಿರಗಳನ್ನು ನಾಶಪಡಿಸಲಿ !
ಗಡಿಯ ಆಚೆ ಇನ್ನೂ ೮ ಭಯೋತ್ಪಾದಕ ಶಿಬಿರಗಳು ಸಕ್ರಿಯವಾಗಿದ್ದು, ಅಲ್ಲಿ ತರಬೇತಿ ನಡೆಯುತ್ತಿದೆ. ಪಾಕಿಸ್ತಾನದಿಂದ ಪುನಃ ಯಾವುದೇ ಅತಿಕ್ರಮಣ ನಡೆದರೆ ನಾವು ಹಿಂದೆ ಸರಿಯುವುದಿಲ್ಲ ಎಂದು ಭಾರತೀಯ ಭೂಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಎಚ್ಚರಿಕೆ ನೀಡಿದ್ದಾರೆ.
೩. ಇದು ಭದ್ರತಾ ಸಂಸ್ಥೆಗಳಿಗೆ ನಾಚಿಕೆಗೇಡಿನ ಸಂಗತಿ !
ಮುಂಬೈಯಿಂದ ಬಿಲ್ಕಿಸ್ ಬೇಗಂ ಮತ್ತು ಜುಲೇಖಾ ಜಮಾಲ್ ಶೇಖ್ ಎಂಬ ಬಾಂಗ್ಲಾದೇಶಿ ನುಸುಳುಕೋರ ಮಹಿಳೆಯರನ್ನು ಪೊಲೀಸರು ಬಂಧಿಸಿ ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಿದ್ದರು. ಆದರೆ ಅವರು ಮತ್ತೆ ಭಾರತಕ್ಕೆ ಪ್ರವೇಶಿಸಿ ಮುಂಬೈಗೆ ಮರಳಿದ್ದಾರೆ. ಪೊಲೀಸರು ಇಬ್ಬರ ವಿರುದ್ಧವೂ ಮೊಕದ್ದಮೆ ದಾಖಲಿಸಿದ್ದಾರೆ.
೪. ಜಿಹಾದಿ ಭಯೋತ್ಪಾದನೆಯನ್ನು ನಾಶ ಮಾಡಲು ಹಿಂದೂ ರಾಷ್ಟ್ರವೊಂದೇ ಪರ್ಯಾಯ !
ಕಾಶ್ಮೀರ ಸಮಸ್ಯೆಯನ್ನು ಕೇವಲ ಭಯೋತ್ಪಾದನೆ ಮತ್ತು ಜಿಹಾದ್ ಮೂಲಕ ಮಾತ್ರ ಪರಿಹರಿಸಲು ಸಾಧ್ಯ. ಸ್ವಾತಂತ್ರ್ಯವು ಭಿಕ್ಷೆಯಿಂದ ಸಿಗುವುದಿಲ್ಲ, ಬದಲಿಗೆ ಹಿಂದೂಗಳ ಕತ್ತನ್ನು ಸೀಳುವ ಮೂಲಕ ಸಿಗುತ್ತದೆ ಎಂದು ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಅಬೂ ಮೂಸಾ ಮುಸಲ್ಮಾನರಿಗೆ ಪ್ರಚೋದನಾತ್ಮಕವಾಗಿ ಕರೆ ನೀಡಿದ್ದಾನೆ.
೫. ಭಾರತದಲ್ಲಿ ಕ್ರೈಸ್ತರಲ್ಲ, ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ !
‘ಓಪನ್ ಡೋರ್ಸ್’ ಸಂಸ್ಥೆ ಪ್ರಕಟಿಸಿದ ವರದಿಯ ಪ್ರಕಾರ, ೨೦೨೫ ರ ವರ್ಷದಲ್ಲಿ ೩೮ ಕೋಟಿ ೮೦ ಲಕ್ಷ ಕ್ರೈಸ್ತರ ಮೇಲೆ ದೌರ್ಜನ್ಯ ನಡೆದಿದೆ. ಕ್ರೈಸ್ತರಿಗೆ ೧೫ ದೇಶಗಳು ಅತ್ಯಂತ ಅಪಾಯಕಾರಿ ಎಂದು ಇದರಲ್ಲಿ ಉಲ್ಲೇಖಿಸಲಾಗಿದ್ದು, ಅದರಲ್ಲಿ ಭಾರತವು ೧೨ ನೇ ಸ್ಥಾನದಲ್ಲಿದೆ ಎಂದು ಹೇಳಲಾಗಿದೆ.

ಹಿಂದೂಗಳಿಗೆ ಈಗ ಎಲ್ಲೆಡೆ ಇಂತಹ ನಾಯಕರೇ ಬೇಕು !
ಲೆನ್ಸ್ಕಾರ್ಟ್ನ ಹಿಂದೂದ್ವೇಷ ಮತ್ತು ಮುಸಲ್ಮಾನ ಪ್ರೇಮವನ್ನು ತಿಳಿಯಿರಿ !
ಮತಾಂಧ ಮುಸಲ್ಮಾನರ ಕುತಂತ್ರವನ್ನು ತಿಳಿಯಿರಿ !
ಜೈಲಿನಲ್ಲಿಯೇ ಈ ಸ್ಥಿತಿ ಇದ್ದರೆ ಹೊರಗಿನ ಸ್ಥಿತಿ ಹೇಗಿರಬಹುದು ?
ಹಿಂದೂದ್ವೇಷಿ ಜಾಹೀರಾತು ತಯಾರಿಸಿದವರ ಮೇಲೆ ಕ್ರಮ ಕೈಗೊಳ್ಳಿ !
ಮತಾಂಧರ ಅಪರಾಧಿ ಮನಸ್ಥಿತಿಯನ್ನು ತಿಳಿಯಿರಿ !