‘ಘಟಿಸುವುದೆಲ್ಲವೂ ಭಗವಂತನ ಇಚ್ಛೆಯೇ ಆಗಿದೆ’ ಎಂಬ ಭಾವದಲ್ಲಿದ್ದು ಸಮಾಧಾನದಲ್ಲಿವುದು !

ಬ್ರಹ್ಮಚೈತನ್ಯ ಗೊಂದವಲೇಕರ ಮಹಾರಾಜರು

ಪಾಂಡವರು ದೈಹಿಕವಾಗಿ ವನವಾಸ ವನ್ನು ಸಹಿಸಿದರು; ಆದರೆ ಅವರು ಮನಸ್ಸಿನಿಂದ ಭಗವಂತನನ್ನು ಆರಾಧಿಸುತ್ತಿದ್ದರಿಂದ ವನವಾಸದಲ್ಲೂ ಸಮಾಧಾನದಿಂದಿದ್ದರು. ಎಲ್ಲವೂ ‘ಭಗವಂತನ ಇಚ್ಛೆಯಿಂದಲೇ ಆಗುತ್ತದೆ ಮತ್ತು ಎಲ್ಲವನ್ನೂ ಅವನೇ ಮಾಡುತ್ತಾನೆ,’ ಎಂಬ ಭಾವನೆಯನ್ನು ಇಟ್ಟುಕೊಳ್ಳುವುದಕ್ಕಿಂತ ದೊಡ್ಡ ಸಮಾಧಾನ ಬೇರೊಂದಿಲ್ಲ. ಆನಂದವು ಕೃತಿಯಲ್ಲಿದೆ, ಫಲದ ಆಸೆಯಲ್ಲಿಲ್ಲ. ನಾಮಸ್ಮರಣೆ ಎಂಬ ಕೃತಿ ಮಾಡಿದರೆ, ಶಾಶ್ವತ ಆನಂದ ಮತ್ತು ಸಮಾಧಾನ ನಮಗೆ ಖಂಡಿತವಾಗಿ ಸಿಗುತ್ತದೆ. ‘ಏನು ಸಂಭವಿಸುತ್ತದೋ ಅದು ಭಗವಂತನ ಇಚ್ಛೆಯಿಂದಲೇ ಸಂಭವಿಸುತ್ತದೆ,’ ಎಂಬ ನಿಜವಾದ ಭಾವದಿಂದ ಬದುಕುವವರಿಗೆ, ಸಮಾಧಾನ ಎಂದರೆ ಏನು ಎಂಬುದು ಖಂಡಿತವಾಗಿ ತಿಳಿಯಬಹುದು.

– ಬ್ರಹ್ಮಚೈತನ್ಯ ಗೊಂದವಲೇಕರ ಮಹಾರಾಜರು