ಸಾಧಕರು ತಮ್ಮ ‘ಸಾಧನೆ ಸರಿಯಾಗಿ ಆಗುತ್ತದೆಯೋ, ಇಲ್ಲವೋ ಎಂಬುದರ ಕಡೆಗೆ ಗಮನಕೊಡಬೇಕು !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕಿಗೆ ಸತ್ಸಂಗದಲ್ಲಿ ಮಾಡಿದ ಅಮೂಲ್ಯ ಮಾರ್ಗದರ್ಶನ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಒಮ್ಮೆ ನನಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸತ್ಸಂಗ ಲಭಿಸಿತು. ಸತ್ಸಂಗದಲ್ಲಿ ಕಲಿಯಲು ಸಿಕ್ಕಿದ ಅಂಶಗಳನ್ನು ಇಲ್ಲಿ ಕೊಟ್ಟಿದ್ದೇನೆ.

ಸೌ. ವೈಷ್ಣವಿ ಹರಾಳೆ (ಪೂರ್ವಾಶ್ರಮದ ಕು. ವೈಷ್ಣವಿ ಮಾನೆ) : ‘ನಾನು ಸದ್ಯ ದೈನಿಕ ‘ಸನಾತನ ಪ್ರಭಾತದ ಸಂದರ್ಭದಲ್ಲಿನ ಸೇವೆ, ಅಂದರೆ ದೈನಿಕ ಪುಟರಚನೆಯ ಸೇವೆಯನ್ನು ಮಾಡುತ್ತೇನೆ. ಪ.ಪೂ. ಡಾಕ್ಟರ್, ‘ನನಗೆ ಏನು ಮಾತನಾಡಬೇಕು, ಎಂಬುದು ತಿಳಿಯುವುದಿಲ್ಲ; ನಾನು ನಿಮಗೆ ಅಪೇಕ್ಷಿತವಾದ ಸೇವೆ ಮತ್ತು ಸಾಧನೆ ಮಾಡಲು ಕಡಿಮೆ ಬೀಳುತ್ತೇನೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಅದಕ್ಕಾಗಿ ತುಂಬಾ ವರ್ಷಗಳ ವರೆಗೆ ಸಾಧನೆಯನ್ನು ಮಾಡಬೇಕಾಗುತ್ತದೆ. ಪ್ರತಿಯೊಬ್ಬರೂ ೨೦, ೩೦, ೪೦ ಅಥವಾ ೫೦ ವರ್ಷಗಳ ವರೆಗೆ ಸಾಧನೆಯನ್ನು ಮಾಡಿರುತ್ತಾರೆ. ಹಿಂದಿನ ಕಾಲದಲ್ಲಿ ಸಾಧುಸಂತರು ತಮ್ಮ ಗುರುಗಳ ಬಳಿ ಹೋಗಿ ಸೇವೆಯನ್ನು ಮಾಡುತ್ತಿದ್ದರು. ಅವರು ಅನೇಕ ವರ್ಷಗಳ ವರೆಗೆ ಸೇವೆಯನ್ನು ಮಾಡಿದ್ದಾರೆ. ಆದ್ದರಿಂದ ನೀನು ಹಾಗೆ ಅಪೇಕ್ಷೆ ಮಾಡಬೇಡ. ‘ನಿನ್ನ ಸಾಧನೆ ಸರಿಯಾಗಿ ಆಗುತ್ತಿದೆಯೋ ಇಲ್ಲವೋ, ಎಂಬುದರ ಕಡೆಗೆ ಗಮನ ಕೊಡು.

– ಸೌ. ವೈಷ್ಣವಿ ಹರಾಳೆ (ಪೂರ್ವಾಶ್ರಮದ ಕು. ವೈಷ್ಣವಿ ಮಾನೆ), ಸನಾತನ ಆಶ್ರಮ, ದೇವದ, ಪನವೇಲ.