ಹಿಂದುತ್ವನಿಷ್ಠ ಡಾ. ನೀಲೇಶ ಲೋಣಕರ ಅವರು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದರು
|
|
|
ಪುಣೆ, ಆಗಸ್ಟ್ ೨೩ (ವಾರ್ತೆ) – ಸನಾತನ ಸಂಸ್ಥೆಯ ಸಾಧಕರಾದ ಶ್ರೀ. ರವೀಂದ್ರ ಗೊಂದಳೆಕರ್ (೮೦ ವರ್ಷ) ಅವರು ಸನಾತನ ಸಂಸ್ಥೆಯ ೧೩೪ನೇ ವ್ಯಷ್ಟಿ ಸಂತ ಪದವಿಯಲ್ಲಿ ವಿರಾಜಮಾನರಾದರೇ, ಸಾಧಕಿ ಶ್ರೀಮತಿ ವರ್ಷಾ ಭಿಡೆ (೭೩ ವರ್ಷ) ಅವರು ಸನಾತನ ಸಂಸ್ಥೆಯ ೧೩೫ನೇ ವ್ಯಷ್ಟಿ ಸಂತ ಪದವಿಯಲ್ಲಿ ವಿರಾಜಮಾನರಾದರು ಎಂದು ಪುಣೆಯಲ್ಲಿ ನಡೆದ ಆನಂದಮಯ ಸಮಾರಂಭವೊಂದರಲ್ಲಿ ಘೋಷಿಸಲಾಯಿತು. ಇದೇ ಸಮಯದಲ್ಲಿ, ಹಿಂದುತ್ವನಿಷ್ಠ ಡಾ. ನೀಲೇಶ ಲೋಣಕರ್ ಅವರು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ್ದಾರೆ ಎಂದು ಕೂಡ ಘೋಷಿಸಲಾಯಿತು. ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸದ್ಗುರು ಸ್ವಾತಿ ಖಾಡ್ಯೆ ಅವರು ಪುಣೆಯ ಸಾತಾರಾ ರಸ್ತೆಯಲ್ಲಿ ನಡೆದ ಅನೌಪಚಾರಿಕ ಸಮಾರಂಭದಲ್ಲಿ ಈ ಆನಂದ ವಾರ್ತೆಯನ್ನು ಎಲ್ಲರಿಗೂ ನೀಡಿದರು.

ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಸಂತ ಪೂ. (ಸೌ.) ಮನೀಷಾ ಪಾಠಕ್ ಹಾಗೂ ಪೂ. ರವೀಂದ್ರ ಗೊಂದಳೆಕರ್, ಪೂ. ಶ್ರೀಮತಿ ವರ್ಷಾ ಭಿಡೆ ಮತ್ತು ಡಾ. ನೀಲೇಶ ಲೋಣಕರ್ ಅವರ ಕುಟುಂಬ ಸದಸ್ಯರು ಹಾಗೂ ಕೆಲವು ಸಾಧಕರು ಉಪಸ್ಥಿತರಿದ್ದರು. ಈ ಆನಂದ ವಾರ್ತೆ ತಿಳಿದ ನಂತರ ಎಲ್ಲ ಸಾಧಕರಿಗೂ ಭಾವಜಾಗೃತಿ ಉಂಟಾಯಿತು. ಈ ಸಮಾರಂಭದ ಮೂಲಕ ಗಣೇಶನು ಗಣೇಶ ಚತುರ್ಥಿಯ ಕೃಪೆಯನ್ನೇ ನೀಡಿದ್ದಾನೆ ಎಂದು ಎಲ್ಲ ಸಾಧಕರು ಅನುಭವಿಸಿದರು.


ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು
ಆಧ್ಯಾತ್ಮಿಕ ಉಪಾಯಗಳ ವಿಷಯದಲ್ಲಿ ಇದನ್ನು ನೆನಪಿನಲ್ಲಿಡಿ !