ಹಿಂದುತ್ವನಿಷ್ಠ ಡಾ. ನೀಲೇಶ ಲೋಣಕರ ಅವರು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದರು
|
|
|
ಪುಣೆ, ಆಗಸ್ಟ್ ೨೩ (ವಾರ್ತೆ) – ಸನಾತನ ಸಂಸ್ಥೆಯ ಸಾಧಕರಾದ ಶ್ರೀ. ರವೀಂದ್ರ ಗೊಂದಳೆಕರ್ (೮೦ ವರ್ಷ) ಅವರು ಸನಾತನ ಸಂಸ್ಥೆಯ ೧೩೪ನೇ ವ್ಯಷ್ಟಿ ಸಂತ ಪದವಿಯಲ್ಲಿ ವಿರಾಜಮಾನರಾದರೇ, ಸಾಧಕಿ ಶ್ರೀಮತಿ ವರ್ಷಾ ಭಿಡೆ (೭೩ ವರ್ಷ) ಅವರು ಸನಾತನ ಸಂಸ್ಥೆಯ ೧೩೫ನೇ ವ್ಯಷ್ಟಿ ಸಂತ ಪದವಿಯಲ್ಲಿ ವಿರಾಜಮಾನರಾದರು ಎಂದು ಪುಣೆಯಲ್ಲಿ ನಡೆದ ಆನಂದಮಯ ಸಮಾರಂಭವೊಂದರಲ್ಲಿ ಘೋಷಿಸಲಾಯಿತು. ಇದೇ ಸಮಯದಲ್ಲಿ, ಹಿಂದುತ್ವನಿಷ್ಠ ಡಾ. ನೀಲೇಶ ಲೋಣಕರ್ ಅವರು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ್ದಾರೆ ಎಂದು ಕೂಡ ಘೋಷಿಸಲಾಯಿತು. ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸದ್ಗುರು ಸ್ವಾತಿ ಖಾಡ್ಯೆ ಅವರು ಪುಣೆಯ ಸಾತಾರಾ ರಸ್ತೆಯಲ್ಲಿ ನಡೆದ ಅನೌಪಚಾರಿಕ ಸಮಾರಂಭದಲ್ಲಿ ಈ ಆನಂದ ವಾರ್ತೆಯನ್ನು ಎಲ್ಲರಿಗೂ ನೀಡಿದರು.

ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಸಂತ ಪೂ. (ಸೌ.) ಮನೀಷಾ ಪಾಠಕ್ ಹಾಗೂ ಪೂ. ರವೀಂದ್ರ ಗೊಂದಳೆಕರ್, ಪೂ. ಶ್ರೀಮತಿ ವರ್ಷಾ ಭಿಡೆ ಮತ್ತು ಡಾ. ನೀಲೇಶ ಲೋಣಕರ್ ಅವರ ಕುಟುಂಬ ಸದಸ್ಯರು ಹಾಗೂ ಕೆಲವು ಸಾಧಕರು ಉಪಸ್ಥಿತರಿದ್ದರು. ಈ ಆನಂದ ವಾರ್ತೆ ತಿಳಿದ ನಂತರ ಎಲ್ಲ ಸಾಧಕರಿಗೂ ಭಾವಜಾಗೃತಿ ಉಂಟಾಯಿತು. ಈ ಸಮಾರಂಭದ ಮೂಲಕ ಗಣೇಶನು ಗಣೇಶ ಚತುರ್ಥಿಯ ಕೃಪೆಯನ್ನೇ ನೀಡಿದ್ದಾನೆ ಎಂದು ಎಲ್ಲ ಸಾಧಕರು ಅನುಭವಿಸಿದರು.


ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !