ಪುಣೆಯ ಸನಾತನದ ಸಾಧಕರಾದ ಶ್ರೀ. ರವೀಂದ್ರ ಗೊಂದಳೆಕರ್ (೮೦ ವರ್ಷ) ಮತ್ತು ಶ್ರೀಮತಿ. ವರ್ಷಾ ಭಿಡೆ (೭೩ ವರ್ಷ) ಸಂತ ಪದವಿಯಲ್ಲಿ ವಿರಾಜಮಾನ

ಹಿಂದುತ್ವನಿಷ್ಠ ಡಾ. ನೀಲೇಶ ಲೋಣಕರ ಅವರು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದರು

ಪೂ. ರವೀಂದ್ರ ಗೊಂದಳೆಕರ್

ಪೂ. ಶ್ರೀಮತಿ ವರ್ಷಾ ಭಿಡೆ

ಪುಣೆ, ಆಗಸ್ಟ್ ೨೩ (ವಾರ್ತೆ) – ಸನಾತನ ಸಂಸ್ಥೆಯ ಸಾಧಕರಾದ ಶ್ರೀ. ರವೀಂದ್ರ ಗೊಂದಳೆಕರ್ (೮೦ ವರ್ಷ) ಅವರು ಸನಾತನ ಸಂಸ್ಥೆಯ ೧೩೪ನೇ ವ್ಯಷ್ಟಿ ಸಂತ ಪದವಿಯಲ್ಲಿ ವಿರಾಜಮಾನರಾದರೇ, ಸಾಧಕಿ ಶ್ರೀಮತಿ ವರ್ಷಾ ಭಿಡೆ (೭೩ ವರ್ಷ) ಅವರು ಸನಾತನ ಸಂಸ್ಥೆಯ ೧೩೫ನೇ ವ್ಯಷ್ಟಿ ಸಂತ ಪದವಿಯಲ್ಲಿ ವಿರಾಜಮಾನರಾದರು ಎಂದು ಪುಣೆಯಲ್ಲಿ ನಡೆದ ಆನಂದಮಯ ಸಮಾರಂಭವೊಂದರಲ್ಲಿ ಘೋಷಿಸಲಾಯಿತು. ಇದೇ ಸಮಯದಲ್ಲಿ, ಹಿಂದುತ್ವನಿಷ್ಠ ಡಾ. ನೀಲೇಶ ಲೋಣಕರ್ ಅವರು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ್ದಾರೆ ಎಂದು ಕೂಡ ಘೋಷಿಸಲಾಯಿತು. ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸದ್ಗುರು ಸ್ವಾತಿ ಖಾಡ್ಯೆ ಅವರು ಪುಣೆಯ ಸಾತಾರಾ ರಸ್ತೆಯಲ್ಲಿ ನಡೆದ ಅನೌಪಚಾರಿಕ ಸಮಾರಂಭದಲ್ಲಿ ಈ ಆನಂದ ವಾರ್ತೆಯನ್ನು ಎಲ್ಲರಿಗೂ ನೀಡಿದರು.

ಹಿಂದುತ್ವನಿಷ್ಠ ಡಾ. ನೀಲೇಶ ಲೋಣಕರ್

ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಸಂತ ಪೂ. (ಸೌ.) ಮನೀಷಾ ಪಾಠಕ್ ಹಾಗೂ ಪೂ. ರವೀಂದ್ರ ಗೊಂದಳೆಕರ್, ಪೂ. ಶ್ರೀಮತಿ ವರ್ಷಾ ಭಿಡೆ ಮತ್ತು ಡಾ. ನೀಲೇಶ ಲೋಣಕರ್ ಅವರ ಕುಟುಂಬ ಸದಸ್ಯರು ಹಾಗೂ ಕೆಲವು ಸಾಧಕರು ಉಪಸ್ಥಿತರಿದ್ದರು. ಈ ಆನಂದ ವಾರ್ತೆ ತಿಳಿದ ನಂತರ ಎಲ್ಲ ಸಾಧಕರಿಗೂ ಭಾವಜಾಗೃತಿ ಉಂಟಾಯಿತು. ಈ ಸಮಾರಂಭದ ಮೂಲಕ ಗಣೇಶನು ಗಣೇಶ ಚತುರ್ಥಿಯ ಕೃಪೆಯನ್ನೇ ನೀಡಿದ್ದಾನೆ ಎಂದು ಎಲ್ಲ ಸಾಧಕರು ಅನುಭವಿಸಿದರು.