
‘ಧರ್ಮಶಾಸ್ತ್ರದಲ್ಲಿ ಚಿನ್ನ, ಬೆಳ್ಳಿ ಅಥವಾ ಮಣ್ಣಿನಿಂದಲೇ ವಿಗ್ರಹವನ್ನು ತಯಾರಿಸಬೇಕು’, ಎಂದು ಸ್ಪಷ್ಟವಾಗಿ ಹೇಳಲಾಗಿರುವುದರಿಂದ ಇದರ ಹೊರತು ಇತರ ವಸ್ತುಗಳಿಂದ ಮೂರ್ತಿಯನ್ನು ಸಿದ್ಧಪಡಿಸುವುದು ಶಾಸ್ತ್ರಕ್ಕನುಸಾರ ಅಯೋಗ್ಯವಾಗಿದೆ. ಇಲ್ಲಿ ‘ವ್ಯಾವಹಾರಿಕವಾಗಿ ಮಣ್ಣಿನಿಂದ ಮೂರ್ತಿ ತಯಾರಿಸುವ ಒಂದೇ ಪರ್ಯಾಯ ನೀಡಲಾಗಿದೆ’, ಎಂಬುದು ಸ್ಪಷ್ಟವಾಗಿದೆ. ‘ಧರ್ಮಸಿಂಧು’ ಎಂಬ ಗ್ರಂಥದಲ್ಲಿಯೂ ‘ವಿನಾಯಕನ ವ್ರತಕ್ಕಾಗಿ ಮೃಣಮಯಿ ಅಂದರೆ ಮಣ್ಣಿನ ಮೂರ್ತಿಯನ್ನು ತಯಾರಿಸಬೇಕು’, ಎಂದು ಹೇಳಲಾಗಿದೆ. ಅಧ್ಯಾತ್ಮಶಾಸ್ತ್ರಕ್ಕನುಸಾರ ಶ್ರೀ ಗಣೇಶಮೂರ್ತಿಯು ಜೇಡಿಮಣ್ಣಿನಿಂದ ಅಥವಾ ಆವೆಮಣ್ಣಿನಿಂದ ಮಾಡಲ್ಪಟ್ಟಿರಬೇಕು. ಅದಕ್ಕೆ ನೈಸರ್ಗಿಕ ಬಣ್ಣಗಳನ್ನು ಹಚ್ಚಬೇಕು. ಇದರಿಂದ ಶ್ರೀ ಗಣೇಶನ ಸ್ಪಂದನಗಳು ಮೂರ್ತಿಯ ಕಡೆಗೆ ಆಕರ್ಷಿತಗೊಳ್ಳುತ್ತವೆ ಮತ್ತು ಮಾಲಿನ್ಯವೂ ಆಗುವುದಿಲ್ಲ. ಶ್ರೀ ಗಣೇಶಚತುರ್ಥಿಯಂದು ಗಣೇಶನನ್ನು ಪೂಜಿಸಲು ತರುವ ಮೂರ್ತಿಯು ಒಂದರಿಂದ ಒಂದೂವರೆ ಅಡಿ ಎತ್ತರವಿರಬೇಕು, ಅದು ಮಣೆಯ ಮೇಲೆ ಕುಳಿತ ಭಂಗಿಯಲ್ಲಿರಬೇಕು. ಮೂರ್ತಿಯ ಸೊಂಡಿಲು ಎಡಬದಿಯಲ್ಲಿರಬೇಕು.
(ದೈನಿಕ ‘ಸನಾತನ ಪ್ರಭಾತ’)
ಧರ್ಮಶಾಸ್ತ್ರ ಮತ್ತು ಅಧ್ಯಾತ್ಮಶಾಸ್ತ್ರ
’ಮೈಮೇಲೆ ಹಲ್ಲಿ ಬೀಳುವುದು ಅಥವಾ ಮೈಮೇಲೆ ಓತಿಕ್ಯಾತ ಹತ್ತುವುದು’, ಇವುಗಳ ಫಲ ಮತ್ತು ಅಶುಭ ಫಲವಿದ್ದರೆ ಮಾಡಬೇಕಾದ ಉಪಾಯ !
ಪ್ರದಕ್ಷಿಣೆಯ ಶಾಸ್ತ್ರವನ್ನು ತಿಳಿದುಕೊಂಡು ಪ್ರದಕ್ಷಿಣೆಗಳನ್ನು ಹಾಕಿ ಮತ್ತು ಚೈತನ್ಯ ಪಡೆಯಿರಿ !
ರಾಜ್ಯದಲ್ಲಿನ ಪ್ರಾರ್ಥನಾ ಸ್ಥಳಗಳ ಮೇಲಿನ ಧ್ವನಿವರ್ಧಕಗಳ ಶಬ್ದವನ್ನು ಸೀಮಿತವಾಗಿಡಿ !
ಆಭರಣಗಳನ್ನು ಉಪಯೋಗಿಸುವ ಮಹತ್ವ
ಅಕ್ಷಯ ತದಿಗೆಯ ದಿನ ಪುಣ್ಯವನ್ನು ಹೇಗೆ ಪಡೆಯುವಿರಿ ?