ಇದು ಜಗತ್ತಿನಾದ್ಯಂತದ ಹಿಂದೂಗಳಿಗೆ ಲಜ್ಜಾಸ್ಪದ ಸಂಗತಿ !

ಬಾಂಗ್ಲಾದೇಶದಲ್ಲಿ ಲಾಲ್‌ ಚಂದ್‌ ಅಲಿಯಾಸ್‌ ಸೋಹಾಗ್‌ ಎಂಬ ಹಿಂದೂ ಗುಜರಿ ವ್ಯಾಪಾರಿಯ ಕೊಲೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಇಲ್ಲಿಯ ವರೆಗೆ ೭ ಜನರನ್ನು ಬಂಧಿಸಿದ್ದಾರೆ. ಆರೋಪಿಗಳು ಲಾಲ್‌ ಚಂದ್‌ ಅವರನ್ನು ಕೊಲೆ ಮಾಡಿ, ಅವರ ಶವದ ಮೇಲೆ ನಿಂತು ನೃತ್ಯ ಮಾಡಿದ್ದಾರೆ.

೨. ಕೆನಡಾವನ್ನು ಭಾರತೀಯರು ಬಹಿಷ್ಕರಿಸಬೇಕು !

ಕೆನಡಾದ ಟೊರೊಂಟೊದಲ್ಲಿ ಆಯೋಜಿಸಲಾಗಿದ್ದ ಭಗವಾನ್‌ ಜಗನ್ನಾಥ ರಥಯಾತ್ರೆಗೆ ಮೊಟ್ಟೆಗಳನ್ನು ಎಸೆಯಲಾಗಿದೆ. ಈ ಬಗ್ಗೆ ಭಾರತ ಸರಕಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ರಥಯಾತ್ರೆಯಲ್ಲಿ ಭಾಗವಹಿಸಿದ್ದ ಭಾರತೀಯ ಮಹಿಳೆಯೊಬ್ಬರು ‘ಎಕ್ಸ್‌’ನಲ್ಲಿ ಮಾಡಿದ ಪೋಸ್ಟ್ ನಂತರ ಈ ಘಟನೆ ಬೆಳಕಿಗೆ ಬಂದಿದೆ.

೩. ಇದು ಪೊಲೀಸ್‌ ಮತ್ತು ಆಡಳಿತಕ್ಕೆ ಲಜ್ಜಾಸ್ಪದ ಸಂಗತಿ !

ಮಹಾರಾಷ್ಟ್ರದಲ್ಲಿ ೧ ವರ್ಷದಲ್ಲಿ ೩೭ ಸಾವಿರದ ೬೯೫ ಮಹಿಳೆಯರು ಮತ್ತು ಹೆಣ್ಣುಮಕ್ಕಳು ನಾಪತ್ತೆಯಾಗಿದ್ದಾರೆ. ನಾಗಪುರ ನಗರದಿಂದ ಒಟ್ಟು ೫ ಸಾವಿರದ ೨೨೭ ಮಹಿಳೆಯರು ಮತ್ತು ಅಪ್ರಾಪ್ತ ಹೆಣ್ಣುಮಕ್ಕಳು ನಾಪತ್ತೆಯಾಗಿದ್ದಾರೆ.

೪. ಉತ್ತರಾಖಂಡ ಸರಕಾರದ ಶ್ಲಾಘನೀಯ ನಿರ್ಧಾರ !

ಉತ್ತರಾಖಂಡದ ಭಾಜಪ ಸರಕಾರವು ರಾಜ್ಯದ ಎಲ್ಲಾ ಸರಕಾರಿ ಶಾಲೆಗಳಲ್ಲಿ ಪ್ರತಿದಿನ ಬೆಳಗಿನ ಪ್ರಾರ್ಥನಾ ಸಭೆಯಲ್ಲಿ ಭಗವದ್ಗೀತೆಯ ಒಂದು ಶ್ಲೋಕ ವನ್ನು ಪಠಿಸಿ ಅದರ ಅರ್ಥವನ್ನು ವಿವರಿಸುವುದನ್ನು ಕಡ್ಡಾಯಗೊಳಿಸಿದೆ.

೫. ಮುಸಲ್ಮಾನ ಶಿಕ್ಷಕನ ಹಿಂದೂದ್ವೇಷವನ್ನು ತಿಳಿಯಿರಿ !

ಮಧ್ಯಪ್ರದೇಶದ ಉಜ್ಜಯಿನಿಯ ಮಹಿದಪುರದಲ್ಲಿರುವ ನಾಗಪುರ ಗ್ರಾಮದ ಸರಕಾರಿ ಮಾಧ್ಯಮಿಕ ಶಾಲೆಯ ಶಿಕ್ಷಕ ಶಕೀಲ್‌ ಮಹಮ್ಮದ ಎಂಬಾತ ಹಿಂದೂ ದೇವರುಗಳ ಮತ್ತು ಭಾರತ ಮಾತೆ ಅವರ ಚಿತ್ರಗಳನ್ನು ಸುಟ್ಟುಹಾಕಿದ್ದಾನೆ. ಅಲ್ಲದೆ, ರಾಷ್ಟ್ರಧ್ವಜವನ್ನು ಸುಡುವ ಪ್ರಯತ್ನವನ್ನೂ ಮಾಡಿದ್ದಾನೆ. ಈ ಪ್ರಕರಣದಲ್ಲಿ ಆತನನ್ನು ಬಂಧಿಸಲಾಗಿದೆ.

೬. ಭಾರತ ಅಕ್ರಮ ನುಸುಳುಕೋರರ ವಿಷಯದಲ್ಲಿ ಹೀಗೆ ಯಾವಾಗ ಮಾಡುತ್ತದೆ ?

ಇರಾನ್‌ ಜೂನ್‌ ೨೪ ರಿಂದ ಜುಲೈ ೯ ರವರೆಗೆ, ೧೬ ದಿನಗಳಲ್ಲಿ ೫ ಲಕ್ಷಕ್ಕೂ ಹೆಚ್ಚು ಅಫ್ಘಾನ್‌ ಅಕ್ರಮ ನುಸುಳುಕೋರರನ್ನು ದೇಶದಿಂದ ಹೊರಹಾಕಿದೆ; ಅಂದರೆ, ಪ್ರತಿದಿನ ಸರಾಸರಿ ೩೦ ಸಾವಿರ ಅಫ್ಘಾನ್‌ ನಾಗರಿಕರನ್ನು ದೇಶದಿಂದ ಹೊರಹಾಕಲಾಗಿದೆ.

೭. ಇಂತಹ ಹಿಂದೂದ್ವೇಷಿ ಪತ್ರಕರ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು !

ಪತ್ರಕರ್ತ ರಾಜದೀಪ ಸರದೇಸಾಯಿಯವರು ಇತ್ತೀಚೆಗೆ ಒಂದು ಪೋಸ್ಟ್‌ನಲ್ಲಿ, ಛತ್ರಪತಿ ಶಿವಾಜಿ ಮಹಾರಾಜರು ಬಂಗಾಲದ ಮೇಲೆ ಆಕ್ರಮಣ ಮಾಡಿದ್ದರು ಎಂದು ಹೇಳಿದ್ದರು. ಈ ಬಗ್ಗೆ ಅವರ ಮೇಲೆ ಟೀಕೆಗಳು ಬಂದ ನಂತರ, ‘ಬಂಗಾಲದ ಮೇಲೆ ಅಲ್ಲ, ಬದಲಿಗೆ ಸೂರತ್‌ ಮೇಲೆ ಆಕ್ರಮಣ ಮಾಡಿದ್ದರು’ ಎಂದು ಸ್ಪಷ್ಟನೆ ನೀಡಿದರು.