
ಹಿಂದೂ ಸಂಪ್ರದಾಯದಲ್ಲಿ ಆಧ್ಯಾತ್ಮಿಕ ದೃಷ್ಟಿಯಿಂದ ಮಹತ್ವಪೂರ್ಣವಾದ ಆಷಾಢ ಹುಣ್ಣಿಮೆಯ ದಿನ. ಅಂದರೆ ಗುರುಪೂರ್ಣಿಮೆಯ ದಿನದಂದು ಭಾರತದಾದ್ಯಂತ ಅನೇಕ ಸಂಸ್ಥೆಗಳು ಗುರುಪೂರ್ಣಿಮೆಯನ್ನು ಆಚರಿಸುತ್ತವೆ. ಇತ್ತೀಚಿನ ಕೆಲವು ಅವಲೋಕನಗಳಿಂದ, ಕೆಲವು ಶಾಲೆಗಳಲ್ಲಿ ಈ ದಿನದಂದು ‘ಮಾತೃಪೂಜನ’ ಆಚರಿಸುವ ಮೂಲಕ ಸ್ವಲ್ಪ ವಿಭಿನ್ನ ದೃಷ್ಟಿಕೋನವನ್ನು ಸೃಷ್ಟಿಸಲಾಗುತ್ತಿದೆ ಎಂದು ಕಂಡುಬಂದಿದೆ.
೧. ತಾಯಿ ಮತ್ತು ಗುರುಗಳ ಪಾತ್ರಗಳು ವಿಭಿನ್ನವಾಗಿವೆ !
‘ಗುರುಪೂರ್ಣಿಮೆ’ಯು ಗುರು-ಶಿಷ್ಯ ಪರಂಪರೆಯನ್ನು ಆಚರಿಸಲು ಮೀಸಲಾಗಿರುವ ದಿನವಾಗಿದ್ದು, ಹಿಂದೂ ಧರ್ಮದ ಧಾರ್ಮಿಕ ಸಂಸ್ಕಾರಗಳ ಪ್ರಮುಖ ಭಾಗವಾಗಿದೆ. ಸಂಪ್ರದಾಯದ ದೃಷ್ಟಿಯಿಂದ, ಗುರುಗಳು ಶಿಕ್ಷಕರಿಗಿಂತ ಬಹಳ ಶ್ರೇಷ್ಠರು. ಶಿಷ್ಯನಿಗೆ ಆಧ್ಯಾತ್ಮಿಕ ಜ್ಞಾನವನ್ನು ನೀಡಿ, ಈಶ್ವರಪ್ರಾಪ್ತಿಗೆ ಮಾರ್ಗದರ್ಶನ ಮಾಡುವ ಗುರುಗಳ ಸ್ಥಾನವು ಉಚ್ಚ ಮತ್ತು ಅಸಾಧಾರಣವಾಗಿದೆ. ಗುರುಗಳ ಈ ಪಾತ್ರವು ವಿಭಿನ್ನವಾಗಿದ್ದು, ಮಕ್ಕಳನ್ನು ಪೋಷಿಸುವ ಪೋಷಕರ ಪಾತ್ರಕ್ಕಿಂತಲೂ ಮಿಗಿಲಾದುದಾಗಿದೆ. ಪೋಷಕರ ಮಾರ್ಗದರ್ಶನ ಮತ್ತು ಗುರುಗಳ ಆಧ್ಯಾತ್ಮಿಕ ಮಾರ್ಗದರ್ಶನದ ನಡುವಿನ ವ್ಯತ್ಯಾಸವನ್ನು ಹಿಂದೂ ಸಂಪ್ರದಾಯದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಮಗುವಿಗೆ ಉಪನಯನದ ಸಂಸ್ಕಾರ ಮಾಡಿದಾಗ, ಆ ಮಗುವಿಗೆ ತಂದೆ-ತಾಯಿಗಳ ನಂತರ ಗುರುಗಳು ಮಾರ್ಗದರ್ಶನ ಮಾಡುತ್ತಾರೆ. ಹಿಂದಿನ ಕಾಲದಲ್ಲಿ, ಈ ಧಾರ್ಮಿಕ ವಿಧಿಯ ನಂತರ, ಆ ಮಗು ಗುರುಗೃಹದಲ್ಲಿ, ಅಂದರೆ ಗುರುಗಳ ಆಶ್ರಯದಲ್ಲಿ ಶಿಕ್ಷಣ ಪಡೆಯುತ್ತಿತ್ತು. ಇದರಿಂದ ತಾಯಿ ಮತ್ತು ಗುರುಗಳ ಪಾತ್ರಗಳು ವಿಭಿನ್ನವಾಗಿವೆ ಎಂಬುದು ಸ್ಪಷ್ಟವಾಗುತ್ತದೆ. ಆದ್ದರಿಂದ, ಗುರುಪೂರ್ಣಿಮೆಯನ್ನು ಆಚರಿಸುವಾಗ ‘ಗುರು’ ಎಂಬ ಪದದ ಅರ್ಥವನ್ನು ಸ್ಪಷ್ಟವಾಗಿ ವಿವರಿಸಬೇಕು. ‘ಗುರುಗಳ ಮಹತ್ವವೇನು ?’, ಎಂಬ ಬಗ್ಗೆ ಮಕ್ಕಳಿಗೆ ಶಿಕ್ಷಣವನ್ನು ನೀಡುವುದು, ಪೋಷಕರು ಮತ್ತು ಗುರುಗಳ ವಿಭಿನ್ನ ಪಾತ್ರಗಳನ್ನು ಸ್ಪಷ್ಟಪಡಿಸುವುದು, ಜ್ಞಾನ ಮತ್ತು ಆಧ್ಯಾತ್ಮಿಕ ಮಾರ್ಗದರ್ಶನವನ್ನು ಪಡೆಯಲು ಗುರುಗಳ ಮಹತ್ವವನ್ನು ವಿವರಿಸುವುದು, ಹಿಂದೂ ಗ್ರಂಥಸಂಪತ್ತು ಮತ್ತು ಇತಿಹಾಸದಲ್ಲಿನ ಗುರು-ಶಿಷ್ಯರ ಕಥೆಗಳನ್ನು ಮಕ್ಕಳಿಗೆ ಹೇಳುವುದು ಈ ವಿಷಯಗಳಿಗೆ ಆದ್ಯತೆಯನ್ನು ನೀಡಬೇಕು, ಎಂಬುದನ್ನು ನಾವು ಗಮನಿಸಬೇಕಾಗಿದೆ.
೨. ಹಿಂದೂ ಸಂಪ್ರದಾಯದಲ್ಲಿನ ಗುರುಗಳ ಆಧ್ಯಾತ್ಮಿಕ ಸ್ಥಾನವನ್ನು ಸ್ಪಷ್ಟಪಡಿಸುವುದು ಮಹತ್ವದ್ದಾಗಿದೆ !
ತಾಯಿಗೆ ಗೌರವ ನೀಡುವುದು ಮಹತ್ವದ್ದಾಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ; ಆದರೆ ಗುರುಪೂರ್ಣಿಮೆಯ ದಿನದಂದು ತಾಯಿ ಮತ್ತು ಗುರುಗಳ ಪಾತ್ರಗಳನ್ನು ಗೊಂದಲ ಗೊಳಿಸಬಾರದು. ಈ ರೀತಿಯಾಗಿ ಮಕ್ಕಳಿಗೆ ತಪ್ಪಾದ ಪ್ರಸ್ತುತಿ ನೀಡುವುದರಿಂದ ತಾಯಿ ಮತ್ತು ಗುರುಗಳ ಆಧ್ಯಾತ್ಮಿಕ ದೃಷ್ಟಿಯಿಂದ
ಇರುವ ಪಾತ್ರಗಳ ಮೇಲಿನ ಗೌರವದ ಮೇಲೆ ಬೇರೆ ಪರಿಣಾಮ ಬೀರಬಹುದು. ಮಕ್ಕಳಿಗೆ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣವನ್ನು ನಿಖರವಾಗಿ ನೀಡುವುದು (ವಿಶೇಷವಾಗಿ ಸಾಂಪ್ರದಾಯಿಕ ಉತ್ಸವಗಳನ್ನು ಆಚರಿಸುವಾಗ) ಶೈಕ್ಷಣಿಕ ಸಂಸ್ಥೆಗಳ ಪ್ರಮುಖ ಜವಾಬ್ದಾರಿಯಾಗಿದೆ. ಇಂತಹ ಮಹತ್ವದ ಪರಿಕಲ್ಪನೆಗಳ ತಪ್ಪಾದ ಪ್ರಸ್ತುತಿಯು ಹೊಸ ಪೀಳಿಗೆಯ ಮಕ್ಕಳಲ್ಲಿ ಹಿಂದೂ ಸಾಂಸ್ಕೃತಿಕ ಪರಂಪರೆಯ ಬಗ್ಗೆ ತಪ್ಪು ತಿಳುವಳಿಕೆಗಳನ್ನು ಸೃಷ್ಟಿಸಬಹುದು. ನಾವು ಗುರುಪೂರ್ಣಿಮೆಯನ್ನು ಆಚರಿಸುವಾಗ, ನಾವು ಅದರ ನಿಜವಾದ ಸಾರವನ್ನು ಹೇಳುತ್ತಿದ್ದೇವೆಯೇ ಎಂದು ಖಚಿತ ಪಡಿಸಿಕೊಳ್ಳಬೇಕು. ಗುರು-ಶಿಷ್ಯ ಸಂಬಂಧ ಮತ್ತು ಹಿಂದೂ ಸಂಪ್ರದಾಯದಲ್ಲಿ ಅವರ ವಿಶಿಷ್ಟ ಸ್ಥಾನದ ಆಧ್ಯಾತ್ಮಿಕ ಮಹತ್ವವನ್ನು ನಾವು ಗುರುತಿಸಬೇಕು. ಇದರಿಂದ ನಾವು ಈ ಪವಿತ್ರ ದಿನವನ್ನು ಗೌರವಿಸುವುದು ಮಾತ್ರವಲ್ಲ, ಮುಂದಿನ ಪೀಳಿಗೆಗೆ ಹಿಂದೂ ಸಾಂಸ್ಕೃತಿಕ ಪರಂಪರೆಯನ್ನು ತಿಳಿಸಿದಂತಾಗುತ್ತದೆ. ಇದರಿಂದ ಅವರಿಗೆ ಸಂಸ್ಕೃತಿಯ ಬಗ್ಗೆ ಹೆಮ್ಮೆ ಹಾಗೂ ಹಿಂದೂ ಧರ್ಮದ ಬಗ್ಗೆ ಪ್ರೀತಿಯೂ ಜಾಗೃತಗೊಳ್ಳುತ್ತದೆ.
– ಶ್ರೀ. ನಾರಾಯಣ ನಾಡಕರ್ಣಿ, ಫೋಂಡಾ, ಗೋವಾ. (೨೨.೭.೨೦೨೪)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು